ಜಾತ್ರೆಗೆ ತೆರಳುವಾಗ ನಡೆಯಿತು ಭೀಕರ ಅಪಘಾತ : ನಾಲ್ವರು ಸ್ಥಳದಲ್ಲಿಯೇ ಸಾವು,ಏಳು ಜನ ಗಂಭೀರ
ಉಕ್ಕಡಗಾತ್ರಿ ಜಾತ್ರೆಗೆ ಹೊರಟಿದ್ದ ಶಿಕಾರಿಪುರದ ನಾಲ್ವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು 7 ಜನರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೆನಾಲ್ಟ್ ಕ್ವಿಡ್ ಮತ್ತು ಟಾಟಾ ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡಗಾತ್ರಿಯ ಬಳಿಯ ಕಡೂರು ಕ್ರಾಸ್ ಬಳಿ ಲಾರಿಗೆ ಎರಡೂ ಕಾರುಗಳು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡಿದ್ದ 7 ಜನರನ್ನು ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಶಿಕಾರಿಪುರ ತಾಲೂಕಿನ ಮಾಯತಮ್ಮನ ಮುಚೂಡಿಯ ಶಾಂತ(30), ಪೃಥ್ವಿ(12) ಕರ್ನಹಳ್ಳಿಯ ಸದಾ(10)ಮತ್ತಿಕೋಟೆಯ ಶಂಕರ ಗೌಡ(37), ಈ ನಾಲ್ವರೂ…