ಸೆಲ್ಪಿ ತೆಗೆಯಲು ಹೋಗಿ ನೀರುಪಾಲಾದ ಯುವಕ – ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ|tunga

ಸೆಲ್ಪಿ ತೆಗೆಯಲು ಹೋಗಿ ನೀರುಪಾಲಾದ ಯುವಕ – ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯಾಚರಣೆ
ಕೊಲ್ಲೂರು ಅರಶಿನ ಗುಂಡಿ ಫಾಲ್ಸ್​ನ ಘಟನೆ ಕಣ್ಮುಂದೆ ಇರುವಾಗಲೇ ಶಿವಮೊಗ್ಗ ಇನ್ನೊಬ್ಬ ಯುವಕ ನೀರಿಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ತುಂಗಾ ಡ್ಯಾಂನ ಎದುರು , ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ತಡವಾಗಿ ವರದಿಯಾಗಿದ್ದು, ನಿನ್ನೆಯಿಡಿ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇವತ್ತು ಕೂಡ ಹುಡುಕಾಟ ಮುಂದುವರಿಸುವ ಸಾಧ್ಯತೆ ಇದೆ.

ಗಾಜನೂರು ಜಲಾಶಯದ ಮೇಲೆ ಹೋಗಲು ಅವಕಾಶ ನೀಡಲಾಗಿಲ್ಲ. ಆದರೆ ಚಾನಲ್​ ಪಕ್ಕದಲ್ಲಿ ಹೋದರೇ ಡ್ಯಾಂನ್ನ ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು ಅಲ್ಲದೆ, ಅಲ್ಲಿರುವ ಕಾಮಗಾರಿ ಸೇತುವೆಯ ಮೇಲೆ ಪ್ರವಾಸಿಗರು ಓಡಾಡುವುದು ಸಾಮಾನ್ಯ ಸಂಗತಿಯಾಗಿದೆ. ಅಲ್ಲಿಯೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ಧಾರೆ.

ನಾಪತ್ತೆಯಾಗಿರುವ ಯುವಕನ್ನು ಮಿಳಘಟ್ಟ ಮೂಲದವನು ಎನ್ನಲಾಗಿದ್ದು ಹರೀಶ್ ಎಂದು ತಿಳಿದುಬಂದಿದೆ. ಈತನಿಗಾಗಿ ಗಾಜನೂರು ಡ್ಯಾಂ ಗೇಟ್​ನಿಂದ ಮುಂಭಾಗದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ತುಂಗಾನಗರ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ಇವತ್ತು ಕೂಡ ಸರ್ಚ್ ಆಪರೇಷನ್​ ನಡೆಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *