Headlines

ಮರಳು ಲಾರಿ ಮಾಲೀಕರಿಂದ ಶಾಸಕ ಹಾಲಪ್ಪ ಹಣ ಪಡೆದಿದ್ದಾರೆ ಎಂದು ಧರ್ಮಸ್ಥಳದ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ !!!

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಶಾಸಕ ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಅಕ್ರಮವಾಗಿ ಹಣ ಪಡೆದಿರುವುದು ಖಂಡಿತವಾಗಿಯೂ ನಿಜ ಎಂದು ಆಣೆ ಪ್ರಮಾಣ ಮಾಡಿದರು.

ಲಾರಿಯವರು ನನಗೆ ಕರೆ ಮಾಡಿ ಹಣವನ್ನು ನೀಡಿದ್ದೇವೆಂದು ಹೇಳಿದ್ದಾರೆ.ಇವರು 300  ಮರಳು ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಮರಳು ನೀತಿಯನ್ನು ಸಡಿಲೀಕರಣ ಮಾಡುವುದಕ್ಕೆ ನಿಮಗೆ ಏನು ರೋಗ ಎಂದು ಹರಿಹಾಯ್ದರು.

ಕೋರೆ ಮಾಲೀಕರ ಹತ್ತಿರವೂ ಕೂಡ ಮಾಮೂಲಿ ಪಡೆಯುತ್ತಿದ್ದು ನನಗೆ ವರ್ಷಕ್ಕೆ ಇಂತಿಷ್ಟು ಹಣವನ್ನು ನೀಡಬೇಕೆಂದಿದ್ದಾರೆ.ಭ್ರಷ್ಟಾಚಾರವಂತೂ ನಡೆದಿದೆ ಇಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಎಂದರು.

ಅವರಿಗೆ ಹಣ ಕೊಟ್ಟವರು ನಮ್ಮ ಜೊತೆಯೇ ಇದ್ದಾರೆ.ಅವರು ಸನ್ನಿಧಿಯಲ್ಲಿ ದೇವರೇ ನಾವೂ ಹಣವನ್ನು ಕೊಟ್ಟಿದ್ದೆವೆ ನೀನೇ ನೋಡಿಕೋ ಎಂದು ಅವರು ಕೂಡ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿಸಿದರು.ಅವರಿಗೆ ಅಧಿಕಾರ ಇದೆ ಹೀಗಾಗಿ ಹಣ ಕೊಟ್ಟವರು ಹೇಳಲು ಹೆದರುತ್ತಿದ್ದಾರೆ.

ಹಣ ಪಡೆದಿರುವುದಕ್ಕೆ ದೇವರೇ ಸಾಕ್ಷಿ ನೀನೇ ನೋಡಿಕೋ ಎಂದು ನಾವು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತ ಬೇಳೂರು  ಪಲಾಯನ ಮಾಡುವ ಮನುಷ್ಯ ಅಲ್ಲ ಅವರಿಗೆ 10 ಘಂಟೆಯಿಂದ 12 ಘಂಟೆವರೆಗೆ ಸಮಯ ನಿಗದಿಪಡಿಸಿದ್ದೆವು.ಅವರು ಮುಂಚಿತವಾಗಿ  ಹೋಗಿರುವುದಕ್ಕೆ ನಾವು ಹೊಣೆಯಲ್ಲ ಎಂದು ತಿಳಿಸಿದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇


Leave a Reply

Your email address will not be published. Required fields are marked *