ಸಾಗರ : ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದು ಐದು ವರ್ಷದ ಮಗು ಮೃತಪಟ್ಟಿರುವ ಘಟನೆ ನಗರದಲ್ಲಿ ಶನಿವಾರ ಸಂಜೆ ನಡೆದಿದೆ.
ಶನಿವಾರ ಸಂಜೆ ಸುಮಾರು 5-00 ಗಂಟೆಯ ಸುಮಾರಿಗೆ ಸಾಗರ ನಗರಸಭೆ ವ್ಯಾಪ್ತಿಯ ಅಣಲೇಕೊಪ್ಪದಲ್ಲಿ ವಾಸವಾಗಿದ್ದ ಮೂರ್ತಿಹಾಗೂ ರಾಜೇಶ್ವರಿ ದಂಪತಿಯ ಎರಡನೆ ಮಗು ಆಟವಾಡುವಾಗ ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಕ್ರಿಶಾ (5) ಮೃತಳಾದ ದುರ್ದೈವಿ. 
ಮೂರ್ತಿಹಾಗೂ ರಾಜೇಶ್ವರಿ ದಂಪತಿಗಳುಮೂಲತಃ ಸಾಗರ ತಾಲೂಕಿನ ಹೆಗ್ಗೋಡು ಗ್ರಾ.ಪಂ ವ್ಯಾಪ್ತಿಯ ಹೈತೂರಿನ ಕ್ವಾಗೇರಿರವರಗಿದ್ದಾರೆ. ಮೂರ್ತಿ ಸಾಗರದ ಸೊರಬ ರಸ್ತೆಯ ಹೊಳೆ ಬಸ್ಸ್ ನಿಲ್ದಾಣದ ಹತ್ತಿರ ಬೆಕರಿಯಲ್ಲಿ ಕೆಲಸ ಮಾಡುತ್ತಿದ್ದರು. 
ಘಟನೆ ನಡೆದ ತಕ್ಷಣ ಸ್ಥಳೀಯ ನಗರಸಭೆ ಸದಸ್ಯರಾದ ಸುಧಾ ಮಗುವನ್ನು ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಪ್ರಯೋಜನವಾಗದೇ ಮಗು ಮೃತಪಟ್ಟಿರುತ್ತದೆ.
ಮಗುವಿನ ಅಂತ್ಯ ಸಂಸ್ಕಾರ ಹೈತೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
		 
                         
                         
                         
                         
                         
                         
                         
                         
                        