ಆನಂದಪುರ:ಮನೆಗೆ ನುಗ್ಗಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ದರೋಡೆ

ಆನಂದಪುರ: ಇಲ್ಲಿನ ಸಮೀಪದ ಕೆಂಜಿಗಾಪುರದ ಪುರೋಹಿತರಾದ  ಶ್ರೀಧರ್ ಭಟ್ ವರ ಮನೆಗೆ ಹಾಡುಹಗಲೇ ಮೂವರು ದರೋಡೆಕೋರರು ನುಗ್ಗಿ ಶ್ರೀಧರ್ ಭಟ್ ರವರ ಅಕ್ಕನಾದ ವೃದ್ದೆ ಜಯಮ್ಮರವರ ಮೇಲೆ ಹಲ್ಲೆ ಮಾಡಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ  ಹಣವನ್ನು ದರೋಡೆಕೋರರು ದೋಚಿದ್ದಾರೆ. ಸ್ವಿಫ್ಟ್ ಕಾರ್ ನಲ್ಲಿ ಬಂದಂತಹ ದರೋಡೆ ಕೋರರ ತಂಡವು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಹಣದ ಚೀಲವನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣಾ ಪೊಲೀಸರು…

Read More

ಶಿವಮೊಗ್ಗದ ಕುಖ್ಯಾತ ರೌಡಿ ಹಂದಿ ಅಣ್ಣಿ ಬರ್ಬರ ಹತ್ಯೆಯ ಹಿಂದಿರುವ ಹಂತಕರು ಯಾರು??? ರೌಡಿ ಹಂದಿ ಅಣ್ಣಿ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಶಿವಮೊಗ್ಗದ ಕುಖ್ಯಾತ ಹಂದಿ ಅಣ್ಣಿ ಯನ್ನು ನಡು ರಸ್ತೆಯಲ್ಲಿ ಬರ್ನರ ಹತ್ಯೆ ಮಾಡಲಾಗಿದೆ. ಭೀಕರ ಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಬಲ್ಲ ಮೂಲಗಳ ಪ್ರಕಾರ ಲೇಔಟ್ ಗೆ ಸಂಬಂಧ ಪಟ್ಟಂತೆ ನವುಲೆ ಆನಂದ್ ಗ್ಯಾಂಗ್, ಆಂಥೋಣಿ, ಭರತ್, ನಜ್ರೂ ಗ್ಯಾಂಗ್ ಗಳ ಮೇಲೆ ಅನುಮಾನಗಳಿವೆ. . ಶಿವಮೊಗ್ಗ ಅಂದಿನ ಕಾಲದ  ಲವ ಕುಶ ಎಂಬ ರೌಡಿ ಸಹೋದರರ ಮರ್ಡರ್ ಪ್ರಕರಣದಲ್ಲಿ ರೌಡಿಸಂ ಲೋಕಕ್ಕೆ ಕಾಲಿಟ್ಟಿದ್ದ ಹಂದಿ ಅಣ್ಣಿ ಶಿವಮೊಗ್ಗ ಪಾತಕ ಲೋಕದಲ್ಲಿ ಭರ್ಜರಿ ಹೆಸರು…

Read More

ಚಂದ್ರಗುತ್ತಿ: ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹ

ಚಂದ್ರಗುತ್ತಿ:  ಅಂಗನವಾಡಿ ಕೇಂದ್ರದಲ್ಲಿ ಮಾತೃ ವಂದನಾ ಮತ್ತು ಪೌಷ್ಟಿಕ ಆಹಾರ ಸಪ್ತಾಹವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಪಿ ರತ್ನಾಕರ್ ಉದ್ಘಾಟನೆ ಮಾಡಿದರು. ಪೌಷ್ಟಿಕ ಆಹಾರದ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾತನಾಡಿದ ಚಂದ್ರಗುತ್ತಿ ಸರ್ಕಾರಿ ಆಸ್ಪತ್ರೆಯ ನರ್ಸ್  ಮಲ್ಲಮ್ಮ ನುಗ್ಗೆ ಸೊಪ್ಪು ಪೇರಳೆ ಹಣ್ಣು ಕರಿಬೇವಿನ ಸೊಪ್ಪು ಲಿಂಬೆ ಹಾಗೂ ಏಕದಳ ದಾನ್ಯ ದ್ವಿದಳ ದಾನ್ಯ ಹಾಗೂ ಅಯೋಡಿನ್ ಯುಕ್ತ ಉಪ್ಪನ್ನೇ ಬಳಸಿ ಎಂದು  ಇವುಗಳ ಮಹತ್ವ ತಿಳಿಸಿದರು ನಂತರ ಮಾತನಾಡಿದ ಶಿಶು ಅಭಿವೃದ್ಧಿ ಅಧಿಕಾರಿ…

Read More

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಹೆದ್ದಾರಿಪುರದ ಯುವಕ ಸುಷ್ಮಾಂತ್ | ಕೃತಕ ಕಾಲಿನಲ್ಲಿ ಹೆಜ್ಜೆ ಹಾಕಿ ಎಲ್ಲಾರ ಗಮನಸೆಳೆದ ಯುವಕ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕಬ್ಬಡಿ ಆಟಗಾರನಾಗಿದ್ದ ಸುಶ್ಮಂತ್ ಅವರು ಇಂದು ರಾಹುಲ್ ಗಾಂಧಿಯೊಂದಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ತನ್ನ ಕೃತಕ ಕಾಲಿನ ಸಹಾಯದಿಂದ ಹೆಜ್ಜೆ ಹಾಕಿದರು. ಹೆದ್ದಾರಿಪುರ ಗ್ರಾಮದ ಪ್ರತಿಭಾವಂತ ಯುವ ಕಬ್ಬಡಿ ಆಟಗಾರ ಸುಶ್ಮಾಂತ್ ತನ್ನ ಒಂದು ಕಾಲನ್ನು ಕಳೆದುಕೊಂಡು ಕಿಚ್ಚ ಸುದೀಪ್ ಟ್ರಸ್ಟ್, TV9 ಮಾರುವೇಷ ತಂಡ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಇವರ ನೆರವಿನಿಂದ ಕೃತಕ ಕಾಲನ್ನು ಅಳವಡಿಸಿಕೊಂಡಿದ್ದ. ಸುಶ್ಮಾಂತ್ ಜೊತೆ ಹೆಜ್ಜೆ ಹಾಕುವಾಗ ಕಾಲನ್ನು ಕಳೆದುಕೊಂಡಿದ್ದರ ಬಗ್ಗೆ…

Read More

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು.!!|accident

ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ಉರುಳಿ ಬಿದ್ದ ಕಾರು.!! ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ತೋಟಕ್ಕೆ ಬಿದ್ದು ಮೂವರಿಗೆ ಗಾಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸೋಮವಾರ ನೆಡೆದಿದೆ. ತಾಲೂಕಿನ ಆಗುಂಬೆ ಸಮೀಪದ ಕಲ್ಮನೆ ಬಳಿ ಕಾರ್ಕಳದಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾರಿನ ಗ್ಲಾಸ್ ಒಡೆದು ಮೂವರನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಮೂವರಿಗೂ ಪೆಟ್ಟಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತರೀಕೆರೆ ಮೂಲದ ಕುಟುಂಬ ತಮ್ಮ ಮಗನನ್ನು ಕಾರ್ಕಳಕ್ಕೆ ಬಿಟ್ಟು…

Read More

ಅಡುಗೆ ಮಾಡುವ ವಿಚಾರಕ್ಕೆ ಜಗಳ : ಅತ್ತೆಯ ಮೈಮೇಲೆ ಬಿಸಿ ಅನ್ನದ ತಿಳಿ ಸುರಿದ ಸೊಸೆ

ಸಾಗರ: ಅಡುಗೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಸೊಸೆಯ ನಡುವೆ ಮಾತಿಗೆ ಮಾತು ಬೆಳೆದು ಸೊಸೆಯು ಅತ್ತೆಯ ಮೈಮೇಲೆ ಬಿಸಿ ಗಂಜಿಯ ತಿಳಿಯನ್ನು ಸುರಿದ ಘಟನೆ ಸಾಗರದ ಮುಳ್ಳಕೆರೆ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮುಳ್ಳಕೆರೆ ನಿವಾಸಿ ಪಾರ್ವತಮ್ಮ (58) ಎಂಬುವವರ ತಲೆ ಮೇಲೆ ಅವರ ಸೊಸೆ ನೇತ್ರಾ ಗಂಜಿ ಸುರಿದ ಪರಿಣಾಮ ತೀವ್ರ ಸುಟ್ಟ ಗಾಯಗಳಿಂದ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಸಿ ತಿಳಿಯನ್ನು ತಲೆ ಮೇಲೆ ಸುರಿಯುತ್ತಿದ್ದಂತೆ ಪಾರ್ವತಮ್ಮ ಅವರು ಜೋರಾಗಿ ಕೂಗಿಕೊಂಡು ಹೊರಗೆ…

Read More

ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲವೆಂದು ವಾಗ್ವಾದ – ಮಧ್ಯ ರಸ್ತೆಯಲ್ಲಿಯೇ ಬಸ್ ಬಿಟ್ಟು ಹೋದ ಚಾಲಕ

ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸಲಿಲ್ಲವೆಂದು ವಾಗ್ವಾದ – ಮಧ್ಯ ರಸ್ತೆಯಲ್ಲಿಯೇ ಬಸ್ ಬಿಟ್ಟು ಹೋದ ಚಾಲಕ ಬಸ್ ನಿಲ್ಲಿಸುವ ವಿಚಾರದಲ್ಲಿ ವಾಗ್ವಾದ ನಡೆದು ಚಾಲಕ ಮಧ್ಯ ರಸ್ತೆಯಲ್ಲಿಯೇ ಬಸ್ ನ್ನು ಬಿಟ್ಟು ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದಿದೆ. ಶಿರಾಳಕೊಪ್ಪದಲ್ಲಿ ರಾಣೇಬೆನ್ನೂರು, ಹಿರೇಕೆರೂರು ಮೂಲಕ ಶಿರಾಳಕೊಪ್ಪಕ್ಕೆ ತಲುಪಬೇಕಿದ್ದ ಎನ್ ಡಬ್ಲೂ ಕೆಎಸ್ ಆರ್ ಟಿಸಿ ಬಸ್ ಶಿರಾಳಕೊಪ್ಪದ ನಡುರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು  ಕೆಲ ಪ್ರಯಾಣಿಕರು ಮತ್ತು  ಬಸ್ ಚಾಲಕ ಮತ್ತು…

Read More

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಈ ವಾರವೇ ಹೊರ ಬೀಳಲಿದೆ ಫಲಿತಾಂಶ

SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಈ ವಾರವೇ ಹೊರ ಬೀಳಲಿದೆ ಫಲಿತಾಂಶ  2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರರಾಗಿದ್ದಾರೆ. ಸದ್ಯ ಕರ್ನಾಟಕ ಪರೀಕ್ಷಾ ಮಂಡಳಿ ಫಲಿತಾಂಶ ಪ್ರಕಟ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇಡಿ ರಾಜ್ಯವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ಎದುರು ನೋಡುತ್ತಿದ್ದು, ಈ ವಾರವೇ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಳೆ (ಮೇ-7) ಮಂಗಳವಾರ ಕರ್ನಾಟಕದಲ್ಲಿ…

Read More

ಧರ್ಮಸ್ಥಳ ಪ್ರಕರಣ – ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ

ಧರ್ಮಸ್ಥಳ ಪ್ರಕರಣ – ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗ.ಆ.7: ಸೌಜನ್ಯ ಮತ್ತಿತರ ಕೇಸುಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದ್ದು, ಹಾಗಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಲು ಹೋಗಬೇಡಿ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಗುರುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು,  ಧರ್ಮಸ್ಥಳ ಕರ್ನಾಟಕದಲ್ಲಿ ಒಂದು ರೀತಿಯ ಕಾಶಿಯ ಇದ್ದಂಗೆ. ಆದರೆ ಇಂದು ಅದರ ವಿಚಾರವಾಗಿ ಪರ ಮತ್ತು…

Read More

ಫೇಸ್‌ಬುಕ್ ಗೆಳೆಯನ ನಂಬಿ 2.15 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಯುವತಿ

ಫೇಸ್‌ಬುಕ್ ಗೆಳೆಯನ ನಂಬಿ 2.15 ಲಕ್ಷ ರೂ. ಕಳೆದುಕೊಂಡ ಶಿವಮೊಗ್ಗದ ಯುವತಿ A young woman in Shivamogga lost ₹2.15 lakh to a cyber fraudster she met on Facebook. The scammer, posing as a friend named ‘Michael’, tricked her by claiming he was stuck at Mumbai Airport. Read the full story. ​ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನ ಮಾತನ್ನು ನಂಬಿದ ಯುವತಿಯೊಬ್ಬಳು ಬರೋಬ್ಬರಿ…

Read More