WhatsApp Channel Join Now
Telegram Channel Join Now
ಆನಂದಪುರ: ಇಲ್ಲಿನ ಸಮೀಪದ ಕೆಂಜಿಗಾಪುರದ ಪುರೋಹಿತರಾದ  ಶ್ರೀಧರ್ ಭಟ್ ವರ ಮನೆಗೆ ಹಾಡುಹಗಲೇ ಮೂವರು ದರೋಡೆಕೋರರು ನುಗ್ಗಿ ಶ್ರೀಧರ್ ಭಟ್ ರವರ ಅಕ್ಕನಾದ ವೃದ್ದೆ ಜಯಮ್ಮರವರ ಮೇಲೆ ಹಲ್ಲೆ ಮಾಡಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ  ಹಣವನ್ನು ದರೋಡೆಕೋರರು ದೋಚಿದ್ದಾರೆ.

ಸ್ವಿಫ್ಟ್ ಕಾರ್ ನಲ್ಲಿ ಬಂದಂತಹ ದರೋಡೆ ಕೋರರ ತಂಡವು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಹಣದ ಚೀಲವನ್ನು ಕದ್ದೊಯ್ದಿದ್ದಾರೆ.

ಈ ಸಂಬಂಧ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಪವನ್ ಕುಮಾರ್ ಕಠಾರೆ.


ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *