RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ

RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ ರಿಪ್ಪನ್‌ಪೇಟೆ : ಪಟ್ಟಣಕ್ಕೆ ತರಕಾರಿ ತರಲು ಬಂದ ಬಡ ಕಾರ್ಮಿಕ ಮಹಿಳೆಯೊಬ್ಬಳು ರಸ್ತೆಯಲ್ಲಿ ತನಗೆ ಸಿಕ್ಕ ₹ 20 ಸಾವಿರ ಮೌಲ್ಯದ ಮೊಬೈಲ್‌ ಅನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ರಿಪ್ಪನ್‌ಪೇಟೆ ಪಟ್ಟಣದಲ್ಲಿ ದಿನಗೂಲಿ ನೌಕರಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೋಹಿಣಿ‌ ಮರಿಯಾ ಎಂಬುವವರಿಗೆ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ರೂ ಮೌಲ್ಯದ ಮೊಬೈಲ್ ಸಿಕ್ಕಿದೆ…

Read More

ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ KSRTC ಬಸ್

ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಕೆ ಎಸ್ಸಾರ್ಟಿಸಿ ಬಸ್ ಶಿವಮೊಗ್ಗ : ಸಾಗರದಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತವಾಗಿದ್ದು, ಹಲವರಿಗೆ ಸಣ್ಣಪುಟ್ಟ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊನ್ನಾವರ ಹೈವೆಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸೂಳೆಮುರ್ಕಿ ಕ್ರಾಸ್‌‌ನಲ್ಲಿ ಆಕ್ಸಿಡೆಂಟ್‌ ಆಗಿದೆ.  ಬಸ್‌ನಲ್ಲಿ 49 ಪ್ರಯಾಣಿಕರಿದ್ದರು. ಬಸ್‌ ಸಾಗರದಿಂದ ಹೊರಟು, ಮಾವಿನಗುಂಡಿಯಿಂದ ಇಳಿದು ಗೇರುಸೊಪ್ಪ ಬಳಿ ಸಿಗುವ ಕ್ರಾಸ್‌ನಲ್ಲಿ ಕಂಟ್ರೋಲ್‌ ತಪ್ಪಿ ರಸ್ತೆಗೆ ಹೊಂದಿಕೊಂಡಿದ್ದ ಧರೆಗೆ ಬಸ್‌ ಡಿಕ್ಕಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ…

Read More

ಚರ್ಚ್ ಆವರಣದಲ್ಲೇ ಹೊಡೆದಾಟ: ಓರ್ವ ನಿಗೆ ತೀವ್ರ ಪೆಟ್ಟು

ಚರ್ಚ್ ಆವರಣದಲ್ಲೇ ಹೊಡೆದಾಟ : ಓರ್ವ ನಿಗೆ ತೀವ್ರ ಪೆಟ್ಟು ಶಿವಮೊಗ್ಗ :  ಹೊಳೆಹೊನ್ನೂರು ಸಮೀಪದ ಸದಾಶಿವ ಕ್ಯಾಂಪ್‌ ನಲ್ಲಿ ಚರ್ಚ್‌ನ ಹಣಕಾಸಿನ ವಿಚಾರಕ್ಕೆ ಎರಡು ಬಣಗಳ ನಡುವೆ ನಿನ್ನೆ ಭಾರೀ  ಹೊಡೆದಾಟ ನಡೆದಿದೆ. ಚರ್ಚ್‌ನ್ನು ನೋಡಿಕೊಳ್ಳುತ್ತಿರುವ ಒಂದು ಗುಂಪು ಹಾಗೂ ಭಕ್ತರ ಪರವಾದ ಇನ್ನೊಂದು ಗುಂಪಿನ ನಡುವೆ ಚರ್ಚ್‌ಗೆ ಬಂದಿರುವ ಹಣಕಾಸಿನ ವಿಚಾರವಾಗಿ ವಿವಾದವಿತ್ತು. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು.  ನಡುವೆ ಚರ್ಚ್‌ನಲ್ಲಿ ಪ್ರತಿ ಭಾನುವಾರ ಪ್ರಾರ್ಥನೆ ಎಂದಿನಂತೆ ನಡೆದುಕೊಂಡು ಬಂದಿತ್ತು. ನಿನ್ನೆ…

Read More

ಯುವ ಕಾಂಗ್ರೆಸ್ ಸಾಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮಹೇಂದ್ರ ಆಯ್ಕೆ

ಯುವ ಕಾಂಗ್ರೆಸ್ ಸಾಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಮಹೇಂದ್ರ ಆಯ್ಕೆ ಹೊಸನಗರ ತಾಲೂಕ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆ ಸಾಗರ ವಿಧಾನಸಭಾ ಕ್ಷೇತ್ರದ ಬಹು ನಿರೀಕ್ಷಿತ ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಇಬ್ಬರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಲವು ತಿಂಗಳಿನಿಂದ ಗೊಂದಲದ ಗೂಡಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಹೇಂದ್ರ ಬುಕ್ಕಿವರೆ ಆಯ್ಕೆಯಾಗಿದ್ದಾರೆ. ಹೊಸನಗರ ತಾಲೂಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ್ ಮಳವಳ್ಳಿ ಆಯ್ಕೆಯಾಗಿದ್ದಾರೆ….

Read More

ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಅಗತ್ಯ – ಧನಲಕ್ಷ್ಮಿ ಗಂಗಾಧರ್

ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಅಗತ್ಯ – ಧನಲಕ್ಷ್ಮಿ ಗಂಗಾಧರ್ ರಿಪ್ಪನ್‌ಪೇಟೆ : ಮಕ್ಕಳಿಗೆ ಶೈಕ್ಷಣಿಕ ಹಂತದಲ್ಲಿಯೇ ವ್ಯವಹಾರ ಜ್ಞಾನ ಕಲಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು. ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಶನಿವಾರ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅತಿ ವೇಗದಲ್ಲಿ ಸಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ಶಿಕ್ಷಣದ ಜತೆಗೆ ವ್ಯವಹಾರ ಹಾಗೂ ಸಾಮಾನ್ಯ ಜ್ಞಾನ ಅತ್ಯಗತ್ಯವಿದೆ. ವಸ್ತುಗಳನ್ನು ಖರೀದಿಸುವ ಹಾಗೂ…

Read More

ಹುತಾತ್ಮ ಯೋಧ ಮಂಜುನಾಥ್ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ – ನಾಳೆ ಸಾರ್ವಜನಿಕ ದರ್ಶನ, ಅಂತ್ಯಕ್ರಿಯೆ :

ಹುತಾತ್ಮ ಯೋಧ ಮಂಜುನಾಥ್ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ – ನಾಳೆ ಸಾರ್ವಜನಿಕ ದರ್ಶನ, ಅಂತ್ಯಕ್ರಿಯೆ : ಸಿದ್ದತೆ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ಹೇಳಿದ್ದೇನು..!? ಹೊಸನಗರ : ಪ್ಯಾರಚೂಟ್ ನಿಷ್ಕ್ರಿಯಗೊಂಡು ಹುತಾತ್ಮರಾದ ಪ್ಯಾರಾ ಇನ್ಸ್ಟ್ರಕ್ಟರ್ ಮಂಜುನಾಥ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು ನಾಳೆ ಬೆಳಿಗ್ಗೆ ಹೊಸನಗರದ ಮಾವಿನಕೊಪ್ಪದಿಂದ ಸಂಕೂರಿನಲ್ಲಿರುವ ಅವರ ಮನೆಯವರೆಗೂ ಪಾರ್ಥೀವ ಶರೀರದ ಮೆರವಣಿಗೆ ಸಾಗಲಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ…

Read More

ರಿಪ್ಪನ್‌ಪೇಟೆ ಸೇರಿದಂತೆ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (09/02/2025) ವಿದ್ಯುತ್ ವ್ಯತ್ಯಯ

ರಿಪ್ಪನ್‌ಪೇಟೆ ಸೇರಿದಂತೆ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ (09/02/2025) ವಿದ್ಯುತ್ ವ್ಯತ್ಯಯ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 09/02/25 ರಂದು ಬೆಳಿಗ್ಗೆ 08-00 ರಿಂದ ಸಂಜೆ 6.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ರಿಪ್ಪನ್‌ಪೇಟೆ ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿಯ ನಿಮಿತ  ನಾಳೆ ಬೆಳಿಗ್ಗೆ 08-00 ರಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ರಿಪ್ಪನ್‌ಪೇಟೆ ಮೆಸ್ಕಾಂ ಇಲಾಖೆಯ…

Read More

ಹೊಸನಗರ ಮೂಲದ ಏರ್ ಫೋರ್ಸ್ ಅಧಿಕಾರಿ ಆಗ್ರಾದಲ್ಲಿ ಸಾವು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಏರ್ ಫೋರ್ಸ್ ಅಧಿಕಾರಿಯೊಬ್ಬರು ಸ್ಕೈ ಡೈವಿಂಗ್ ವೇಳೆಯಲ್ಲಿ ಪ್ಯಾರಚೂಟ್ ನಿಷ್ಕ್ರಿಯವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಪಟಗುಪ್ಪ ಬಳಿಯ ಸಂಕೂರು ನಿವಾಸಿ  ಮಂಜುನಾಥ್ ಜಿ ಎಸ್(36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಆಗ್ರಾದ ಪ್ಯಾರಾ ಟ್ರೈನಿಂಗ್ ಸ್ಕೂಲ್ ನಲ್ಲಿ ವಾರಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದ ಮಂಜುನಾಥ್ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಾಚೂಟ್ ನಿಷ್ಕ್ರಿಯವಾದ ಕಾರಣ ನಿಯಂತ್ರಣ ಕಳೆದುಕೊಂಡು ಸುಮಾರು 13 ಸಾವಿರ…

Read More

ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ

ಕಾಡುಕೋಣ ಭೇಟೆಯಾಡಿದ್ದ ಮೂವರ ಬಂಧನ ಹೊಸನಗರ : ತಾಲ್ಲೂಕಿನ  ನಗರ ವಲಯಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾಡುಕೋಣ ಬೇಟೆಯಾಡಿ ಕಾಲು ತಲೆ ಮಾಂಸವನ್ನು ಬಿಡಿಸಿ ಕಾರಿನಲ್ಲಿ ಅಕ್ರಮ ಸಾಗಾಣಿಕೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಅರೋಪಿಗಳು ನಾಪತ್ತೆಯಗಿದ್ದು  ಅರೋಪಿಗಳ ಪತ್ತೆ ಹಚ್ಚುವಲ್ಲಿ ನಗರ ವಲಯ ಅರಣ್ಯದಿಕಾರಿಗಳ ತಂಡ ಯಶ್ವಸಿಯಾಗಿದೆ. ಆರೋಪಿಗಳಾದ ಮಹ ಮ್ಮದ್ ಆಶ್ರಫ್ ಮುಂಡಳ್ಳಿ ವಾಸಿ, ಭಟ್ಕಳ ತಾಲ್ಲೂಕು, ಉತ್ತರ ಕನ್ನಡ ಎ೨) ಯಾಸೀನ್, ಹಣಬರಕೇರಿ, ಶಿರೂರು ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ…

Read More

ಜೆಎನ್‌ಎನ್ ಸಿಇ ಕಾಲೇಜಿಗೆ ನಾಲ್ಕು ರ್‍ಯಾಂಕ್

ಜೆಎನ್‌ಎನ್ ಸಿಇ ಕಾಲೇಜಿಗೆ ನಾಲ್ಕು ರ್‍ಯಾಂಕ್ ಶಿವಮೊಗ್ಗ: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಪರೀಕ್ಷೆಯಲಿ ಜೆಎನ್‌ಎನ್ ಸಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಟೆಕ್‌ನಲ್ಲಿ ಆಲಿಯಾ ವಸೀಮ್ ಪ್ರಥಮ ರ್‍ಯಾಂಕ್‌ನೊಂದಿಗೆ ಚಿನ್ನದ ಪದಕವನ್ನು, ಸ್ನೇಹಾ ಎಸ್. ಆರನೆಯ ರ್‍ಯಾಂಕನ್ನು ಪಡೆದಿದ್ದಾರೆ. ಎಂಬಿಎ ವಿಭಾಗದ ವಿದ್ಯಾರ್ಥಿನಿಯರಾದ ಮೇಘಾ ಕೆ.ಪಿ ಹಾಗೂ ಅಮೃತಾ ಶ್ರೀಕಾಂತ್ ಜಾಧವ್ ಹತ್ತನೆಯ ರ್‍ಯಾಂಕನ್ನು ಪಡೆದಿದ್ದಾರೆ. ಇವರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಜಿಎಸ್ ನಾರಾಯಣರಾವ್ ಕಾರ್ಯದರ್ಶಿ ಎಸ್ ಎನ್ ನಾಗರಾಜ ಹಾಗೂ ಆಡಳಿತ ಮಂಡಳಿಯ ಸದಸ್ಯರು,…

Read More