Headlines

ಆನ್‌ಲೈನ್‌ನಲ್ಲಿ 1000 ಬ್ಯಾಗ್ ಸಿಮೆಂಟ್‌ಗೆ ಆರ್ಡರ್ –  4.15 ಲಕ್ಷ ಕಳೆದುಕೊಂಡ  ಸಾಗರದ ವ್ಯಕ್ತಿ

ಆನ್‌ಲೈನ್‌ನಲ್ಲಿ 1000 ಬ್ಯಾಗ್ ಸಿಮೆಂಟ್‌ಗೆ ಆರ್ಡರ್ –  4.15 ಲಕ್ಷ ಕಳೆದುಕೊಂಡ  ಸಾಗರದ ವ್ಯಕ್ತಿ ಶಿವಮೊಗ್ಹ:  ಆನ್‌ಲೈನ್‌ನಲ್ಲಿ ವಸ್ತುಗಳನ್ನು ತಲುಪಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡುವ ಜಾಲಗಳು ಸಕ್ರಿಯವಾಗಿದ್ದು ಇಂತಹ ವಂಚನೆಗೆ ಸಾಗರದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಸಿಮೆಂಟ್ ಖರೀದಿಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಕಾಮಗಾರಿ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ 1000 ಬ್ಯಾಗ್ ಸಿಮೆಂಟ್‌ ಅಗತ್ಯವಿತ್ತು. ಆದರೆ, ಅವರು ಯಾವಾಗಲೂ ಖರೀದಿ ಮಾಡುತ್ತಿದ್ದ ಸಿಮೆಂಟ್ ಅಂಗಡಿಯಲ್ಲಿ ಸ್ಟಾಕ್ ಲಭ್ಯವಿರದ ಕಾರಣ, ಆನ್‌ಲೈನ್‌ನಲ್ಲಿ ಖರೀದಿಸಲು ಮುಂದಾಗಿದ್ದಾರೆ….

Read More

ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು

ಅಪಘಾತವಾಗಿ ಬಿದ್ದವರ ಮೇಲೆ ಟ್ರ್ಯಾಕ್ಟರ್ ಹರಿದು ಯುವಕರಿಬ್ಬರು ಸಾವು ಶಿವಮೊಗ್ಗ:  ಆಯನೂರು ಮತ್ತು ಹಾರನಹಳ್ಳಿ ಮಾರ್ಗ ಮಧ್ಯೆ ಶುಕ್ರವಾರ ಸಂಜೆ ಟ್ರ್ಯಾಕ್ಟರ್ ಹರಿದು ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಲ್ಲಾಪುರ ಗ್ರಾಮದ ಆಕೀಬ್ (25) ಮತ್ತು ಚಾಂದ್ ಪೀರ್ (18) ಮೃತಪಟ್ಟವರು. ಘಟನೆಯಲ್ಲಿ ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಚಾಲಕ ಮತ್ತು ಹಿಂಬದಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ  ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ಕೆಳಕ್ಕೆ ಬಿದ್ದವರ ಮೇಲೆ ಹರಿದಿದೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ…

Read More

ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು

ವಿಶ್ವಕಪ್ ವಿಜೇತ ಕಾವ್ಯಾಳಿಗೆ ಬೇಕಿಲ್ಲ ಹಾರ ತುರಾಯಿ – ಟಾರ್ಪಲ್ ಶೆಡ್ ನಲ್ಲಿ ಬೆಳೆದು ವಿಶ್ವಕಪ್ ಗೆ ಮುತ್ತಿಕ್ಕಿದ ಬಡ ಪ್ರತಿಭೆಗೆ ಬೇಕು ನಿಮ್ಮೆಲ್ಲರ ಆರ್ಥಿಕ ನೆರವು ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಎಂಬ ಹೆಸರಿದೆ—ಆದರೆ ಆ ಹೆಸರಿನ ಹಿಂದೆ ಅಡಗಿರುವ ಬದುಕಿನ ನೋವು, ಹೋರಾಟ, ಕನಸುಗಳ ಕಥೆ ಯಾರಿಗೂ ಕಾಣುವುದಿಲ್ಲ. ದೇಶಕ್ಕೆ ವಿಶ್ವಕಪ್‌ ಗೆಲುವು ತಂದುಕೊಟ್ಟ ಈ ಯುವತಿಯ ಕಣ್ಣುಗಳಲ್ಲಿ ಇಂದಿಗೂ “ಮನೆ ಹಾಗೂ ಜೀವನ ಹೇಗೆ…

Read More

T20 ವಿಶ್ವಕಪ್ ಚಾಂಪಿಯನ್ ಕಾವ್ಯಾರವರಿಗೆ ಸ್ನೇಹ ಬಳಗದ ವತಿಯಿಂದ ಸನ್ಮಾನ

T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಸ್ನೇಹ ಬಳಗದ ವತಿಯಿಂದ ಸನ್ಮಾನ ಟಿ–20 ಅಂಧರ ವಿಶ್ವಕಪ್‌ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಕೂಡ ಪ್ರಮುಖ ಪಾತ್ರವಹಿಸಿದ್ದರು. ಈ ಅಂತರಾಷ್ಟ್ರೀಯ ಪ್ರಶಸ್ತಿಯಿಂದ ದೇಶವನ್ನು ಬೆಳಗಿಸಿದ ಗೌರವದ ಸಾಧನೆಗೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 95-96 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಬರುವೆ ಗ್ರಾಮದ ಬ್ರಹ್ಮೇಶ್ವರ ದೇವಸ್ಥಾನ ಆವರಣದಲ್ಲಿ ದೇವಸ್ಥಾನದ ಸಮಿತಿಯವರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ…

Read More

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆಯ ವಿದ್ಯಾರ್ಥಿಗಳು ಆಯ್ಕೆ

ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆಯ ವಿದ್ಯಾರ್ಥಿಗಳು ಆಯ್ಕೆ ರಿಪ್ಪನ್‌ಪೇಟೆ : ಆಂಧ್ರಪ್ರದೇಶದಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಗೆ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಡಿಸೆಂಬರ್ 10 ರಿಂದ 14 ರವರೆಗೆ ಆಂಧ್ರಪ್ರದೇಶದ ಖಾಕಿನಾಡ ನಗರದಲ್ಲಿ ನಡೆಯುವ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಕುವೆಂಪು ವಿಶ್ವವಿದ್ಯಾಲಯದ ತಂಡಕ್ಕೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿಗಳಾದ ಮಹಮ್ಮದ್ ಝಿಯಾದ್ ಎಂ , ಆದರ್ಶ್…

Read More

ಶ್ರೀಗಂಧ ಮರ ಕಡಿತಲೆ : ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ , ಓರ್ವನ ಬಂಧನ

ಶ್ರೀಗಂಧ ಮರ ಕಡಿತಲೆ : ಪೊಲೀಸ್ ಅರಣ್ಯ ಸಂಚಾರಿ ದಳ ದಾಳಿ , ಓರ್ವನ ಬಂಧನ ಸಾಗರ: ಸಾಗರ ಪೊಲೀಸ್ ಅರಣ್ಯ ಸಂಚಾರ ದಳ ಮತ್ತು ವಲಯ ಅರಣ್ಯಾಧಿಕಾರಿಗಳು ಜಂಟಿಯಾಗಿ ನಡೆಸಿದ ದಾಳಿಯಲ್ಲಿ, ಬರದವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಶ್ರೀಗಂಧ ಮರವನ್ನು ಕಡಿದಿದ್ದ ಆರೋಪದ ಮೇಲೆ ಒಬ್ಬರನ್ನು ಬಂಧಿಸಿದ್ದಾರೆ. ಮುಬಾರಕ್ ಬಿನ್ ಮಹಮ್ಮದ್ ಪಾಷಾ (ಎಸ್‌ಎನ್ ನಗರ, ಸಾಗರ) ಅವರನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಅವರ ಬಳಿಯಿಂದ 35.107 ಕೆ.ಜಿ. ಶ್ರೀಗಂಧದ ತುಂಡುಗಳು, ಒಂದು ಕೈ ಗರಗಸ ಮತ್ತು ದ್ವಿಚಕ್ರ…

Read More

ಅವ್ಯಹಾರ ಆರೋಪ : ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಸದಸ್ಯರ ಪ್ರತಿಭಟನೆ

ಅವ್ಯಹಾರ ಆರೋಪ : ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಸದಸ್ಯರ ಪ್ರತಿಭಟನೆ ಶಿಕಾರಿಪುರ  :  ತೆರಿಗೆ ಸಂಗ್ರಹ ಹಣ ಅಂದೇ ಬ್ಯಾಂಕ್‌ಗೆ ಜಮೆ ಮಾಡದೆ ಅವ್ಯವಹಾರ ನಡೆಸಿದ್ದಾರೆ, ನೀರುಗಂಟಿ ಹುದ್ದೆಯಲ್ಲಿದ್ದವರಿಗೆ ಬಿಲ್‌ಕಲೆಕ್ಟರ್ ಹುದ್ದೆ ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಿ ಗೊದ್ದನಕೊಪ್ಪ ಗ್ರಾ.ಪಂ. ಸದಸ್ಯರು ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿದ್ದ ಇಮ್ತಿಯಾಜ್ ಅಹಮದ್ ನಾಲ್ಕು ಹಳ್ಳಿಗಳ ತೆರಿಗೆ ಸಂಗ್ರಹ ಹಣ ಬ್ಯಾಂಕ್‌ಗೆ ಕಟ್ಟದೇ  ೮ರಿಂದ ೩೦ದಿನದವರೆಗೂ ಹಣ ಕೈಯಲ್ಲಿ ಇಟ್ಟುಕೊಂಡಿರುವ ದಾಖಲೆಗಳಿವೆ,…

Read More

ಅಂಧ ಮಹಿಳೆಯರ T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಅವರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ

ಅಂಧ ಮಹಿಳೆಯರ T20 ವಿಶ್ವಕಪ್ ಚಾಂಪಿಯನ್ ಕಾವ್ಯಾ.ವಿ ಅವರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನ ಟಿ–20 ಅಂಧರ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮಹಿಳಾ ತಂಡವಾಗಿ ಭಾರತಕ್ಕೆ ಕೀರ್ತಿ ತಂದ ತಂಡದಲ್ಲಿ ರಿಪ್ಪನ್‌ಪೇಟೆಯ ಕಾವ್ಯಾ.ವಿ ಕೂಡ ಭಾಗಿಯಾಗಿದ್ದರು. ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ತಂದುಕೊಟ್ಟ ಈ ಸಾಧನೆಯನ್ನು ಗುರುತಿಸಿ ಹೊಸನಗರ ತಾಲ್ಲೂಕು ತಹಶೀಲ್ದಾರ್ ಭರತ್ ರಾಜ್ ಅವರು ತಾಲ್ಲೂಕು ಆಡಳಿತದ ಪರವಾಗಿ ಕಾವ್ಯಾ ಅವರನ್ನು ಅವರ ಸ್ವಗೃಹವಾದ ಬರುವೆ ಗ್ರಾಮಕ್ಕೆ ಭೇಟಿ ನೀಡಿ ಸನ್ಮಾನಿಸಿದರು. ಕರ್ನಾಟಕದಿಂದ ಈ ವಿಶ್ವಕಪ್ ಚಾಂಪಿಯನ್‌ಷಿಪ್…

Read More

ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡ ನಿಧನ

ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡ ನಿಧನ ಹೊಸನಗರ ತಾಲೂಕ್ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕರು ಹಾಗೂ ಸಮಾಜಮುಖಿ ವ್ಯಕ್ತಿತ್ವದ ಹಾಲುಗುಡ್ಡೆಯ ಕೇಶವ್ ಮೂರ್ತಿ ಗೌಡರು ಇಂದು ಬೆಳಗ್ಗೆ ನಿಧನರಾದರು. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತರು ಪತ್ನಿ , ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರ ಹೊಸನಗರ ತಾಲೂಕು ಒಕ್ಕಲಿಗ ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಕುಲಬಾಂಧವರು ಆಘಾತ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು…

Read More

ಮದುವೆಯಾದ ಒಂದೇ ದಿನಕ್ಕೆ ಮದುಮಗ ಹೃದಯಾಘಾತದಿಂದ ಸಾವು

Groom dies of heart attack just one day after wedding ಮದುವೆಯಾದ ಒಂದೇ ದಿನಕ್ಕೆ ಮದುಮಗ ಹೃದಯಾಘಾತದಿಂದ ಸಾವು Groom dies of heart attack just one day after wedding ಶಿವಮೊಗ್ಗ: ಮದುವೆಯಾಗಿ ಒಂದೇ ದಿನದಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಭದ್ರಾವತಿ ತಾಲೂಕಿನ ಹನುಮಂತಾಪುರದಲ್ಲಿ ನಡೆದಿದೆ. ನವವಿವಾಹಿತ ರಮೇಶ್‌ (28) ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹರಪನಹಳ್ಳಿಯ ಬಂಡ್ರಿಯ ಮಧುವನ್ನು ರಮೇಶ್ ಭಾನುವಾರ ಶಿವಮೊಗ್ಗದ ಬಿ.ಹೆಚ್ ರಸ್ತೆ ಗಂಗಾಪ್ರಿಯಾ ಕಲ್ಯಾಣ…

Read More