Headlines

ಸಾರ್ವಜನಿಕವಾಗಿ ಗನ್ ತೋರಿಸಿ ಬೆದರಿಕೆ ಹಾಕಿದ ಯುವಕ – ಪ್ರಕರಣ ದಾಖಲು|crime news

ಶಿವಮೊಗ್ಗ ನಗರ ದಲ್ಲಿ ವ್ಯಕ್ತಿಯೊಬ್ಬ ಗನ್​ ತೋರಿಸಿ ಬೆದರಿಕೆ ಹಾಕಿದ ಘಟನೆ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ.




ಸೆಕೆಂಡ್​ ಹ್ಯಾಂಡ್ ಬೈಕ್​ ಡೀಲರ್​ ಒಬ್ಬರಿಗೆ ಗನ್​ ತೋರಿಸಿದ ಯುವಕ ಅದರಿಂದಲೇ ಅವರ ಮೇಲೆ ಹಲ್ಲೆ ಸಹ ಮಾಡಿದ್ಧಾನಂತೆ. ನಗರದ ಇಲಿಯಾಸ್ ನಗರದ ಬಳಿಇರುವ ಶಾದಿ ಮಹಲ್​ ಬಳಿಯಲ್ಲಿ ಈ ಘಟನೆ ನಡೆದಿದೆ. 

ನಡೆದಿದ್ದೇನು? 

ಇಲಿಯಾಸ್ ನಗರದಲ್ಲಿ ಮೊಹಮ್ಮದ್ ರಿಯಾಮ್​ ಎಂಬವರು ಬೈಕ್ ಡೀಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ಅಜರ್ ಎಂಬಾತ ಬಂದಿದ್ದನಂತೆ. ಅಲ್ಲದೆ ಬೈಕ್​ವೊಂದನ್ನ ಖರೀದಿಸಿ, ಅದರ ೪೦ ಸಾವಿರ ರೂಪಾಯಿ ಹಣವನ್ನು ೨ ತಿಂಗಳು ಬಿಟ್ಟು ಕೊಡುವುದಾಗಿ ತಿಳಿಸಿದ್ದಾನೆ.




ಆದರೆ ಎರಡು ತಿಂಗಳು ಕಳೆದರು ಹಣ ಕೊಡದ ಹಿನ್ನೆಲೆಯಲ್ಲಿ ರಿಯಾಬ್​ ಕಳೆದ ಶನಿವಾರ, ಅಜರ್​ನನ್ನ ಕರೆಸಿಕೊಂಡು ಹಣ ಕೊಡು ಇಲ್ಲ ಬೈಕ್ ವಾಪಸ್ ಕೊಡು ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೇ ರಾಂಗ್​ ಆದ ಅಜರ್​, ಪೈಸ ಸಹ ಕೊಡುವುದಿಲ್ಲ , ಏನ್ ಮಾಡ್ತೀಯಾ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ. 

ಕೇವಲ ಬೆದರಿಕೆ ಹಾಕಿದ್ದಷ್ಟೆ ಅಲ್ಲದೆ ಅಜರ್​, ತನ್ನ ಬೆನ್ನ ಹಿಂದೆ ಸಿಗಿಸಿಕೊಂಡಿದ್ದ ಗನ್​ನನ್ನ ತೆಗೆದು ರಿಯಾಬ್​ಗೆ ಹೆದರಿಸಿದ್ದಾನೆ. ಆತನ ಕಿವಿಗೆ ಅದರಿಂದಲೇ ಹಲ್ಲೆ ಮಾಡಿ, ಶೂಟ್ ಮಾಡ್ತೀನಿ ಎಂದು ಬೆದರಿಸಿದ್ದಾನೆ.. ಅಷ್ಟೊತ್ತಿಗೆ ಅಲ್ಲಿಗೆ ಕೆಲವರು ಬರುವುದನ್ನ ಗಮನಿಸಿದ ಅಜರ್, ಗನ್​ ಸಮೇತ ಪರಾರಿಯಾಗಿದ್ಧಾನೆ.




ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಆಗಿದೆ. ಆದರೆ ಶಿವಮೊಗ್ಗ ಸಿಟಿಯಲ್ಲಿ ಗನ್​ ಬಳಸಲಾಗುತ್ತಿದೆ ಎಂದರೆ, ಆತನ ಹಿಂದಿನ ಉದ್ದೇಶ ಏನಿರಬಹುದು ಎಂಬುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

Leave a Reply

Your email address will not be published. Required fields are marked *