ತೀರ್ಥಹಳ್ಳಿಯಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ
ತೀರ್ಥಹಳ್ಳಿ : ಶಾಂತಿ,ಸೌಹಾರ್ಧತೆಗೆ ಹೆಸರಾದ ಊರು ಎಂದರೆ ತೀರ್ಥಹಳ್ಳಿ ಈ ಹೆಸರೇ ಎಲ್ಲರಿಗೂ ಅಚ್ಚು ಮೆಚ್ಚು. ಈ ನಡುವೆ
– ತೀರ್ಥಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೌಹಾರ್ದತೆ ಮೆರೆದಿದ್ದಾರೆ.
ಹೌದು.ಸೋಮವಾರ ಛತ್ರಕೆರಿ ಗಣಪತಿ ವಿಸರ್ಜನೆ ವೇಳೆ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಸೀಬಿನಕೆರೆ ಸರ್ಕಲ್
ನಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬದ ಅಂಗವಾಗಿ ತಿಂಡಿ ಉಪಹಾರದ ವ್ಯವಸ್ಥೆ – ಮಾಡಿದ್ದು, ಎಲ್ಲರೂ ಸೌಹಾರ್ದಯುತವಾಗಿ
ಹಬ್ಬದಲ್ಲಿ ಪಾಲ್ಗೊಂಡರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸುವ ಮೂಲಕ ತೀರ್ಥಹಳ್ಳಿಯ ಹಿಂದೂ ಮುಸ್ಲಿಂ ಬಾಂಧವರು
ಸೌಹಾರ್ದತೆ ಮೆರೆದಿದ್ದಾರೆ. ಇನ್ನು ಈ ಒಂದು ಸೌಹಾರ್ದತೆಗೆ ಛತ್ರಕೇರಿ ಗೆಳೆಯರ ಬಳಗ,ತೀರ್ಥಹಳ್ಳಿಯ ಮೆರವಣಿಗೆಯಲ್ಲಿ – ಪಾಲ್ಗೊಂಡವರು ಧನ್ಯವಾದ ಅರ್ಪಿಸಿದ್ದಾರೆ.
ಶ್ರೀ ಸಿದ್ದಿ ವಿನಾಯಕ ಯುವಕ ಸಂಘದ 40ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ರಾಜಭೀದಿ ಉತ್ಸವದ ಸಮಯದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲಾ ಕಲಾತಂಡ ಹಾಗೂ ಸಂಘದ ಸದಸ್ಯರುಗಳಿಗೆ ಸೀಬಿನಕೆರೆ ಮಿಲ್ಲತೆ ಮೊಹರಂ ಕಮಿಟಿ, ಹಾಗೂ ಸ್ಥಳೀಯರು ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು.