WhatsApp Channel
Join Now
Telegram Channel
Join Now
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು. ಅವರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ಯುವ ಮುಖಂಡ ಅಭಿಷೇಕ್ ಹುಂಚ ಹೇಳಿದರು.
ಹುಂಚದಲ್ಲಿ(HUMCHA) ಇಂದು ಪಂಡಿತ್ ದೀನ್ ದಯಾಳ್ ಜೀ ಅವರ ಜನ್ಮದಿನಾಚರಣೆ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ದೀನ್ ದಯಾಳ್ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವ ಕಳಕಳಿ ಹೊಂದಿದ್ದರು. ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದ್ದರು. ಸರಕಾರಿ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪುತ್ತಿಲ್ಲ, ಬಡವರು ಸ್ವಯಂ ಪ್ರೇರಣೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕು, ಕಷ್ಟ ಮತ್ತು ಸುಖಕ್ಕೆ ಒಲಿಯುವುದೇ ನಾಗರಿಕತೆ. ಯುವಜನತೆ ದುಶ್ಚಟಗಳ ದಾಸರಾಗುವುದರ ಬದಲು ಪರಂಪರೆಯ ಮೌಲ್ಯಗಳ ದಾಸರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಆಶಾ ಯದುಕುಮಾರ್ ಪಂಡಿತ್ ದೀನ್ ದಯಾಳ್ ರವರ ಕಿರುಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಯದು ಕುಮಾರ್ ಹೊಂಡಲಗದ್ದೆ, ಜಗದೀಶ್ ಹುಂಚ, ವೀರೇಶ್ ಆನೆಗದ್ದೆ, ನಾಗೇಶ್ ಕುಬಟಹಳ್ಳಿ,ಹರೀಶ್ ಹೊನ್ನೇಬೈಲು, ನಟೇಶ್ ಬಿಲ್ಲೇಶ್ವರ, ಸಂಜಯ್, ಶ್ರಿನಿವಾಸ್ ಹಾಗೂ ಪುಟಾಣಿ ಮಕ್ಕಳು ಹಾಜರಿದ್ದರು