ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು -ಡಾ|| ಧನಂಜಯ ಕೆ ಬಿ|gfgc

ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು  -ಡಾ|| ಧನಂಜಯ ಕೆ .ಬಿ.
ರಿಪ್ಪನ್‌ಪೇಟೆ : ಸರ್ಕಾರದ ಮುಂಗಡ ಪತ್ರದ ಕಾರ್ಯಕ್ರಮಗಳು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಎನ್. ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ  ಡಾ|| ಧನಂಜಯ ಕೆ .ಬಿ
ಅಭಿಪ್ರಾಯಪಟ್ಟರು. 

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಿಪ್ಪನ್ ಪೇಟೆಯ ಅರ್ಥಶಾಸ್ತ್ರ ವೇದಿಕೆ ಹಾಗೂ ಐಕ್ಯೂಎಸಿ ಘಟಕದ  ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ “ಕರ್ನಾಟಕ  ರಾಜ್ಯ ಮುಂಗಡ ಪತ್ರ- 2023-24 ವಿಶ್ಲೇಷಣೆ” ಕಾರ್ಯಕ್ರಮದಲ್ಲಿ ಮುಂಗಡ ಪತ್ರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅರ್ಥಶಾಸ್ತ್ರದ ವಿದ್ಯಾರ್ಥಿಗಳಿಗೆ ಮುಂಗಡ ಪತ್ರದ ಪರಿಪೂರ್ಣ ಜ್ಞಾನವಿರಬೇಕು.ಉತ್ತಮ ಮುಂಗಡ  ಪತ್ರ  ಮಂಡಿಸಿದಾಗ ಉತ್ತಮ ಆಡಳಿತವನ್ನು ಜನರಿಗೆ  ನೀಡಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ. ಟಿ. ವಹಿಸಿದ್ದರು. 

ಈ ಕಾರ್ಯಕ್ರಮದಲ್ಲಿ ಡಾ. ಎಚ್. ಎಸ್. ವಿರೂಪಾಕ್ಷಪ್ಪ, ರಜನಿಕಾಂತ್, ಹರ್ಷ ಕುಮಾರ್ ಕೆ. ಆರ್, ಹರೀಶ್ ಕೆ.ಎಂ. ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *