ರಿಪ್ಪನ್ ಪೇಟೆ: ಕಾಂಗ್ರೆಸ್ ಮುಖಂಡ ಸುಳುಕೋಡು ನಾರಾಯಣಪ್ಪ ನಿಧನ : ಗಣ್ಯರ ಸಂತಾಪ
ರಿಪ್ಪನ್ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಕೋಡು ಗ್ರಾಮದ ನಾರಾಯಣಪ್ಪ (68) ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ ಅವರ ಆತ್ಮೀಯರಾಗಿದ್ದ ಸುಳುಗೋಡು ನಾರಾಯಣಪ್ಪ ಅವರು ಕಾಂಗ್ರೆಸ್ ಪಕ್ಷ ಹಾಗೂ ಈಡಿಗ ಸಮಾಜದಲ್ಲಿ ಪ್ರಮುಖ ನಾಯಕರಿಂದ ಗುರುತಿಸಿಕೊಂಡಿದ್ದರು. ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅವರು ಕೃಷಿಕರಾಗಿದ್ದರೂ ಸಹ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು,…