Headlines

ಹೊಸನಗರ : ಅಗ್ನಿ ಅವಘಡ – 600 ಅಡಿಕೆ ಗಿಡಗಳು ಸುಟ್ಟು ಭಸ್ಮ!!!!!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಾಳಿಕಾಪುರ ಗ್ರಾಮದ ಸರ್ವೆನಂಬರ್ 32/1ರಲ್ಲಿ ಬಿ. ಸೀನಪೂಜಾರಿ ಬಿನ್ ಮಾಚಪೂಜಾರಿಯವರ ಅಡಿಕೆ ಮರಕ್ಕೆ ಬೆಂಕಿ ತಗುಲಿ ಸುಮಾರು 600 ಅಡಿಕೆ ಮರಗಳು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಸೀನಪೂಜಾರಿಯವರು ತಮ್ಮ ಸ್ವಂತ ಜಾಗದಲ್ಲಿ ಸುಮಾರು 600 ಅಡಿಕೆ ಸಸಿಗಳನ್ನು ನೆಟ್ಟಿದ್ದು ಅದಕ್ಕೆ ಡ್ರಿಪ್ ಪೈಪ್ ಹಾಕಲಾಗಿತ್ತು. ಏಕಾಏಕಿ ಗಾಳಿಯ ಮೂಲಕ ಬೆಂಕಿ ತಗಲಿದ್ದರಿಂದ 600 ಅಡಿಕೆ ಮರಗಳು ಸುಟ್ಟು ಕರಕಲಾಗುವ ಜೊತೆಗೆ ನೀರಿನ ಸೌಲಭ್ಯಕ್ಕಾಗಿ ಮಾಡಿದ ಡ್ರಿಪ್ ಪೈಪ್ ಸಹ ಸುಟ್ಟು…

Read More

ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷರಾಗಿ ಎನ್ ವರ್ತೇಶ್ ನೇಮಕ :

ಹೊಸನಗರ : ಜೆಡಿಎಸ್ ಪಕ್ಷದ ಹೊಸನಗರ ತಾಲೂಕು ಅಧ್ಯಕ್ಷರನ್ನಾಗಿ ರಿಪ್ಪನ್‌ಪೇಟೆಯ ಎನ್ ವರ್ತೇಶ್ ರವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ  ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ನೇಮಕ ಮಾಡಿದ್ದಾರೆ. ರಿಪ್ಪನ್‌ಪೇಟೆಯ  ಎನ್ ವರ್ತೇಶ್ ಜೆಡಿಎಸ್ ನ ಹಿರಿಯ ಮುಖಂಡರಾಗಿದ್ದು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಸಮಿತಿಯವರು ಸಂಘಟನಾ ಚತುರ ಎನ್ ವರ್ತೇಶ್ ರವರನ್ನು ತಾಲೂಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿದೆ. ಎನ್ ವರ್ತೇಶ್ ರವರನ್ನು ಹೊಸನಗರ ತಾಲೂಕ್ ಜೆಡಿಎಸ್…

Read More

Thirthahalli | ಗುಡ್ಡೆಕೊಪ್ಪ ಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದ ಆರಗ ಜ್ಞಾನೇಂದ್ರ

Thirthahalli | ಗುಡ್ಡೆಕೊಪ್ಪ ಶಾಲೆಯಲ್ಲಿ ಕುಟುಂಬಸ್ಥರೊಂದಿಗೆ ಮತದಾನ ಮಾಡಿದ ಆರಗ ಜ್ಞಾನೇಂದ್ರ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ರವರು ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕುಟುಂಬಸ್ಥರೊಂದಿಗೆ ಗುಡ್ಡೆಕೊಪ್ಪ ಸರ್ಕಾರಿ ಶಾಲೆಗೆ ಆಗಮಿಸಿದ ಅವರು ಮತ ಚಲಾಯಿಸಿ ಮಾತನಾಡಿ ಎಲ್ಲಾರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಆಚರಿಸೋಣ ಎಂದರು. ಈ ಸಂಧರ್ಭದಲ್ಲಿ ಪತ್ನಿ , ಪುತ್ರ ಅಭಿನಂದನ್ ,ಸೊಸೆ ಶ್ರುತಿ ಅಭಿನಂದನ್ ಹಾಗೂ…

Read More

ಹಿರೇಮನೆ ಗಿರಿಜನ ಆಶ್ರಮ ಶಾಲೆ ಹೆಸರು ಬದಲಾವಣೆಗೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟ ವಿರೋಧ

ಸಾಗರ :ತಾಲ್ಲೂಕಿನ ತಾಳಗುಪ್ಪ ಹೋಬಳಿ ಹಿರೇಮನೆಯಲ್ಲಿ 50 ವರ್ಷಗಳ  ಹಿಂದೆ ಪ್ರಾರಂಭಗೊಂಡ ಮಹಾತ್ಮಾಗಾಂಧಿ ಗಿರಿಜನ ಆಶ್ರಮ ಶಾಲೆ ಈ ಹೆಸರನ್ನು ಸರ್ಕಾರ ಏಕಾಏಕಿ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ ಮಾಡಿರುವ ಕ್ರಮವನ್ನು  ವಿರೋಧಿಸಿ ಕರ್ನಾಟಕ ಅರಣ್ಯ  ಮೂಲ ಬುಡಕಟ್ಟುಗಳ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕ ಇಂದು ಸಾಗರ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತು.   ಸರ್ಕಾರದ ಈ ನೀತಿಯನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ…

Read More

Koduru | ಭಾರಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನಮರ – ಅಪಾರ ಹಾನಿ

Koduru | ಭಾರಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನಮರ – ಅಪಾರ ಹಾನಿ ಕೋಡೂರು ಗ್ರಾಪಂ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಅರಗೋಡಿ ನಾಗರಾಜ್ ಎಂಬುವವರ ವಾಸದ ಮನೆ ಮೇಲೆ ಮಂಗಳವಾರ ಮಧ್ಯಾಹ್ನ ತೆಂಗಿನಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ. ಭಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಮನೆ ಮುಂದೆ ಇದ್ದ ತೆಂಗಿನಮರ ಬುಡ ಸಮೇತವಾಗಿ ಮನೆಯ ಮೇಲೆ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕೋಡೂರು ಗ್ರಾಪಂ ಸದಸ್ಯ ಯೋಗೇಂದ್ರಪ್ಪ, ಪಿಡಿಒ…

Read More

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು

Murder suspect shot in leg after attempting to attack police Murder suspect shot in leg after attempting to attack police ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕೊ*ಲೆ ಆರೋಪಿ ಕಾಲಿಗೆ ಗುಂಡು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಕೊಪ್ಪದಲ್ಲಿ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯನ್ನು ಕೊ*ಲೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಕೊಪ್ಪದಲ್ಲಿ ಮೇ 09 ರಂದು ಹೇಮಣ್ಣ…

Read More

ಅರಣ್ಯಪ್ರದೇಶದಲ್ಲಿ ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ !!lightning

ಅರಣ್ಯಪ್ರದೇಶದಲ್ಲಿ ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ! ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ  ಸಮೀಪದ ಬೆಳಂದೂರು ಚೆನ್ನಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೃತದೇಹ  ಅರೆಬರೆ ಸುಟ್ಟು ಕೊಳೆತ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತನನ್ನು ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ(55) ಎಂದು ಗುರುತಿಸಲಾಗಿದೆ. ಬೆಳಂದೂರು ಗ್ರಾಮದ ಬತ್ತಿ ರಮೇಶಪ್ಪ ಎಂಬ ವ್ಯಕ್ತಿ  ಕಳೆದ ೪ ದಿನಗಳಿಂದ ಕಾಣೆಯಾಗಿದ್ದು  ಎಲ್ಲಾ ಕಡೆ ಹುಡುಕಿ ಸಂಬಂಧಿಕರ ಮನೆಗೆ ಹೋಗಿರಬಹುದು ತಿರುಗಿ…

Read More

ಪ್ರೇಮ ಪ್ರಕರಣದ ಬೇಸರ: ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮ*ಹತ್ಯೆ

A 26-year-old youth, Srijith Naik from Gandralli village in Hosanagar taluk, allegedly died by suicide by hanging from a tree near his house. Family members suspect mental distress following a past love case and alcohol addiction. ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಸಮೀಪದ ಗಂದ್ರಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶ್ರೀಜಿತ್ ನಾಯ್ಕ (26) ಎಂದು…

Read More

ಸಾಗರದ ಎಲ್​ಬಿ ಕಾಲೇಜಿನಲ್ಲಿ ಶಿಮುಲ್​ ಅಧ್ಯಕ್ಷ ಶ್ರೀಪಾದ್​ ಹೆಗೆಡೆ ಮೇಲೆ ಸಾಗರ ಶಾಸಕ ಹರತಾಳು ಹಾಲಪ್ಪ & ಬೆಂಬಲಿಗರಿಂದ ನಡೆಯಿತಾ ಹಲ್ಲೆ!? ಇಲ್ಲಿದೇ ನೋಡಿ ಎಕ್ಸ್ ಕ್ಲೂಸಿವ್ ವೀಡಿಯೋ

ಸಾಗರದ ಎಲ್ ಬಿ ಕಾಲೇಜಿನಲ್ಲಿ ನಡೆಯುತ್ತಿದ್ದ ಜನರಲ್ ಬಾಡಿ ಮೀಟಿಂಗ್ ನಡೆಯುತ್ತಿದ್ದ ಸಂಧರ್ಭದಲ್ಲಿ ಶಾಸಕ ಹರತಾಳು ಹಾಲಪ್ಪ ಹಾಗೂ ಅವರ ಬೆಂಬಲಿಗರು ಅವರ ಮೇಲೆ ಹಲ್ಲೆ ಮಾಡಿದ್ದಾರೆ  ಆರೋಪವನ್ನ ಶ್ರೀಪಾದ್ ಹೆಗೆಡೆಯವರು ಮಾಡಿದ್ದಾರೆ.  ಶಿಮುಲ್​ ಅಧ್ಯಕ್ಷರಾದ ಶ್ರೀಪಾದ್​ ಹೆಗೆಡೆ ರವರು ಎಲ್​ಬಿ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷರಾಗಿದ್ದಾರೆ .ಸದ್ಯ ಅವರು ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಎಲ್​ಬಿ ಕಾಲೇಜಿನಲ್ಲಿ ಜನರಲ್​ ಬಾಡಿ ಮೀಟಿಂಗ್​ ನಡೆಸುತ್ತಿದ್ದ ಸಂದರ್ಭದಲ್ಲಿ, ಸ್ಥಳಕ್ಕೆ ಬಂದ ಸಾಗರ ಶಾಸಕ ಹರತಾಳು ಹಾಲಪ್ಪ…

Read More

ರಿಪ್ಪನ್ ಪೇಟೆ: ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಂಜೂರಾದ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸಿ : ಗ್ರಾಪಂ ಸದಸ್ಯ ಆಸಿಫ಼್ ಭಾಷಾಸಾಬ್

ರಿಪ್ಪನ್ ಪೇಟೆ: ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿರುವ ಜಾಗವನ್ನು ಒತ್ತುವರಿದಾರರಿಂದ ರಕ್ಷಿಸುವಂತೆ ಹಾಗೂ ಪೋಡಿ ಮಾಡಿಕೊಡುವಂತೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸದಸ್ಯರಾದ ಬಿ ಆಸೀಫ಼್ ಜಿಲ್ಲಾಧಿಕಾರಿಗಳಿಗೆ ರಿಪ್ಪನ್ ಪೇಟೆ ಉಪ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ 59 ರಲ್ಲಿ ರಿಪ್ಪನ್ ಪೇಟೆ ಜನತೆಯ ಬಹುದಿನಗಳ ಕನಸಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಈ ಹಿಂದೆ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ 5 ಎಕರೆ ಜಾಗ…

Read More