ಜಿಲ್ಲಾ ಹಿಂದುಳಿದ ವರ್ಗ ಅಧಿಕಾರಿ ಕುಮಾರ್ ಹುಚ್ಚುತನಕ್ಕೆ ಬಲಿಪಶುಗಳಾದ ಮಹಿಳಾ ಅಡುಗೆಯವರು: ಹಣ್ಣು ತಿಂದವರಿಗಿಂತ ಸಿಪ್ಪೆ ತಿಂದವರಿಗೆ ಶಿಕ್ಷೆಯಾದ ಆನಂದಪುರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲಿನಲ್ಲಿ ನಡೆದ ರೋಚಕ ಸ್ಟೋರಿ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಸಿದ್ದೇಶ್ವರ ಕಾಲೊನಿಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಹಾಸ್ಟೆಲ್ ವಾರ್ಡನ್ ಮಮತಾ ವಿದ್ಯಾರ್ಥಿಗಳಿಗೆ ನೀಡಿದ ಮೂವತ್ತು ಕ್ಕೂ ಹೆಚ್ಚು ಬೆಡ್ ಶೀಟ್ ಗಳನ್ನು ಬಚ್ಚಿಟ್ಟಿದ್ದರು.ಇದರಿಂದ ಮನನೊಂದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಅವ್ಯವಹಾರ ನಡೆದಿದೆಯೆಂದು ಬಂದಂತಹ ಜನಪ್ರತಿನಿಧಿಗಳೆದರು ದೂರಿದ್ದರು ಜನ ಜನಪ್ರತಿನಿಧಿಗಳ ಎದುರು ವಿದ್ಯಾರ್ಥಿಗಳು ಹಾಸ್ಟೆಲ್ ನ ವಾರ್ಡನ್ ಮಮತಾ ವಿರುದ್ಧ ಹಲವು ದೂರುಗಳನ್ನು ನೀಡಿದ್ದರು. ಬೆಡ್ ಶೀಟ್ ಗಳನ್ನು ಕಳೆದ 1ವರ್ಷದಿಂದ ನೀಡಿಲ್ಲ ಹಾಗೂ ಬಕೆಟ್ ಹಾಗೂ ಜಗ್ಗು…