Headlines

ಹಸರೀಕರಣ ಕಾರ್ಯಕ್ರಮ;;

ಸೊರಬ:: ತಾಲೂಕಿನ ನೆಲ್ಲೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಊರ ಗ್ರಾಮಸ್ಥರು ಹಾಗೂ S,K,D,R,D,P ಯೋಜನಾ ಕಚೇರಿ ಶಿರಸಿ ಮತ್ತು ಗ್ರಾಮ ಪಂಚಾಯತ್ ಹರಿಶಿ ಅರಣ್ಯ ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ ಹಸರೀಕರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಫಾರೆಸ್ಟರ್ ರಾಮಪ್ಪ,ಕಿರಣ್ ಗಾರ್ಡ್,ಪಂಚಾಯತ್ ಸದ್ಯಸ್ಯರು  ಕೃಷ್ಣಮೂರ್ತಿ,ಆರಾಧನಾ ಸಮಿತಿ ಸದ್ಯಸ್ಯೆ ವಸುಂದರಾ ಭಟ್,ಗ್ರಾಮದ ಅಧ್ಯಕ್ಷರು ನಾರಾಯಣಪ್ಪ,ಒಕ್ಕೂಟ ಅಧ್ಯಕ್ಷರು ಮಂಜಪ್ಪ,PDO  ಸಂತೋಷ,ಅರಣ್ಯಾಧಿಕಾರಿ ರಾಘವೇಂದ್ರ,ವಾಚರ್ ಆನಂದ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವರದಿ:ಪ್ರಸನ್ನ ಶೇಟ್ ಚಂದ್ರಗುತ್ತಿ

Read More

ಕರೋನಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಅಗತ್ಯ: ಡಾ ರಾಘವೇಂದ್ರ

ಚಂದ್ರಗುತ್ತಿ :: ಇಲ್ಲಿ ಪ್ರಾಥಮಿಕ ಅರೋಗ್ಯ  ಕೇಂದ್ರದಲ್ಲಿ ವೈದ್ಯರ ದಿನಾಚರಣೆಯನ್ನು  ಕೇಕ್ ಕತ್ತರಿಸುವ ಮೂಲಕ  ಆಚರಿಸಲಾಯಿತು,ಈ ಸಮಯದಲ್ಲಿ ಡಾ ರಾಘವೇಂದ್ರರವರು ಮಾತನಾಡಿ ಕರೋನಾ ನಿಯಂತ್ರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಮತ್ತು ಆಶಾಕಾರ್ಯಕರ್ತೆಯರು  ಅಂಗನವಾಡಿ ಕಾರ್ಯಕರ್ತೆಯರ  ಪಾತ್ರ ಮಹತ್ತರವಾದದ್ದದ್ದು ,ಕರೋನ  ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲರೂ ತಪ್ಪದೇ ಕರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು. ಸೊರಬ ತಾಲೂಕಿನಲ್ಲಿ ಕರೋನ ತಡೆಗಟ್ಟುವಿಕೆಯಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ಮತ್ತು ತಾಲೂಕ್ ವೈದ್ಯಾಧಿಕಾರಿ ಅಕ್ಷತಾ…

Read More

ರಿಪ್ಪನ್ ಪೇಟೆ ಜಿಪಂ,ತಾಪಂ ಮೀಸಲಾತಿ ಪ್ರಕಟ: ಟವೆಲ್ ಹಾಕಲು ಸಿದ್ದರಾದ ಆಕಾಂಕ್ಷಿಗಳು

ರಿಪ್ಪನ್ ಪೇಟೆ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಯ ಚುನಾವಣಾ ಮೀಸಲಾತಿ ಪ್ರಕಟಗೊಂಡಿದ್ದು ಜಿಲ್ಲಾ ಪಂಚಾಯತ್ ಗೆ ಸಾಮಾನ್ಯ ಹಾಗೂ ತಾಲೂಕ್ ಪಂಚಾಯತ್ ಗೆ ಸಾಮಾನ್ಯ ಮಹಿಳೆ ಕೆಟಗೆರಿ ಬಂದಿದ್ದು ಚುನಾವಣ ಕಣ ರಂಗೇರಿದೆ. ರಿಪ್ಪನ್ ಪೇಟೆ ಜಿಪಂ ಮತ್ತು ತಾಪಂ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು ಕೊನೆಯಲ್ಲಿ ಯಾರಿಗೇ ಟಿಕೇಟ್ ಖಾತ್ರಿಯಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಬಿಜೆಪಿ ಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ ಅದರಲ್ಲಿ ಮುಂಚೂಣಿಯಲ್ಲಿ ಕಳೆದ ಬಾರಿ…

Read More

ಬಿಳ್ಕೊಡುಗೆ ಸಮಾರಂಭ::

  ಹುಲ್ತಿಕೊಪ್ಪ:ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ  ಸಿಬ್ಬಂದಿಗಳು ಪದೋನ್ನತಿ ಹೊಂದಿ ಬೇರೆ ಕಡೆಗೆ ವರ್ಗಾವಣೆಗೊಂಡ  ಶ್ರೀಮತಿ ಲಕ್ಷ್ಮಿ ,ಶ್ರೀಮತಿ ಕುಸುಮ ಸಿಸ್ಟರ್ ಹಾಗೂ  ಹೆಚ್ ಪಿ ನಾಗರಾಜ್  ಅವರನ್ನು ಗೌರವ ಪೂರ್ಣವಾಗಿ  ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಚಂದ್ರಗುತ್ತಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದ ಇಂದುಧರ್ ಪಾಟೀಲ್ ಸರ್ ಅವರ ಕಾರ್ಯವನ್ನು ಸ್ಮರಿಸಿ ಅಭಿನಂದಿಸಲಾಯಿತು,  ಈ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ವಿನಯ್ ಕುಮಾರ್ ಪಾಟೀಲ್ ರವರು ಮಾತನಾಡಿ ಯಾವುದೇ ಒಂದು ಆಡಳಿತ ವ್ಯವಸ್ಥೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಸೇವೆ…

Read More

ಕೆಂಚನಾಲ ಗ್ರಾಮದಲ್ಲಿ ರೈಲು ನಿಲುಗಡೆಗೆ ಆಗ್ರಹಿಸಿ ಮನವಿ::

ರಿಪ್ಪನ್ ಪೇಟೆ: ಕೆಂಚನಾಲ ರೈಲ್ವೆ ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು- ಶಿವಮೊಗ್ಗ- ತಾಳಗುಪ್ಪ ಪ್ಯಾಸೆಂಜರ್ ರೈಲು ನಿಲ್ದಾಣಕ್ಕೆ ಆಗ್ರಹಿಸಿ ಮಾನ್ಯ ಸಂಸದರಾದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಮತ್ತು MSIL ಅಧ್ಯಕ್ಷರಾದ ಶ್ರೀ ಹರತಾಳು ಹಾಲಪ್ಪ ನವರಿಗೆ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ಮತ್ತು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ರಿಪ್ಪನ್ ಪೇಟೆ ಸಭಾಭವನದಲ್ಲಿ ಪತ್ರೀಕಾಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಶಾಸಕರಾದ ಬಿ ಸ್ವಾಮಿರಾವ್ ರವರು…

Read More

ಬಾರ್ ಅಂಡ್ ರೆಸ್ಟೋರೆಂಟ್ ಸ್ಥಳಾಂತರ ವಿರೋದಿಸಿ ರಿಪ್ಪನ್ ಪೇಟೆ ಸಾರ್ವಜನಿಕರ ವೇದಿಕೆಯಿಂದ ಪ್ರತಿಭಟನೆ: ಶಾಸಕರಾದ ಹರತಾಳು ಹಾಲಪ್ಪರ ಮಧ್ಯಸ್ಥಿಕೆಯಿಂದ ಪರಿಹಾರ

ರಿಪ್ಪನ್ ಪೇಟೆ:: ಇಲ್ಲಿನ ಗ್ರಾ.ಪಂ ವ್ಯಾಪ್ತಿಯಲ್ಲಿ ಪಟ್ಟಣದಿಂದ ಹೊರಗಿದ್ದ ಬಾರ್ ಗಳನ್ನು ಏಕಾಏಕಿ ವಿನಾಯಕ ವೃತ್ತದ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ತೆರೆದಿದ್ದು ಹಾಗೂ ತೀರ್ಥಹಳ್ಳಿ ರಸ್ತೆಯಲ್ಲಿ ಮತ್ತೊಂದು ಬಾರ್ ಅನ್ನು ತೆರೆಯಲು ಕಾಮಗಾರಿ ನೆಡೆಸುತ್ತಿದ್ದು. ಇದರಿಂದ ಸಾರ್ವಜನಿಕರಿಗೆ, ಶಾಲಾ-ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ರಿಪ್ಪನ್ ಪೇಟೆ ಸಾರ್ವಜನಿಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಹರತಾಳು ಹಾಲಪ್ಪ ನವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಅಬಕಾರಿ ಜಿಲ್ಲಾಧಿಕಾರಿ ಮತ್ತು ತಾಲೂಕು ಅಬಕಾರಿ…

Read More

ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ದ ಜೆಡಿಎಸ್ ಪ್ರತಿಭಟನೆ::

ರಿಪ್ಪನ್ ಪೇಟೆ:: ಕರ್ನಾಟಕ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ತೈಲ ಬೆಲೆ ಏರಿಕೆ ಹಾಗೂ ಜನಸಾಮಾನ್ಯರು ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇದರಿಂದ ಬಡವರು, ರೈತರು,ಕೂಲಿಕಾರ್ಮಿಕರು ಹೈರಾಣಾಗಿ ಹೋಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ವತಿಯಿಂದ ಇಂದು ರಿಪ್ಪನ್ ಪೇಟೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ರಾಜ್ಯ ಜ್ಯಾತ್ಯಾತೀತ ಜನತಾದಳದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಆರ್ ಎ…

Read More

ಅಕಾಲಿಕ ಖಾಯಿಲೆಯಿಂದ ಬಳಲುತಿದ್ದ ಯುವತಿಗೆ ಸಹಾಯ ಹಸ್ತ::

ರಿಪ್ಪನ್ ಪೇಟೆ: ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯತ್ ನ ಚಂದಳ್ಳಿ ಗ್ರಾಮದ ಚಂದ್ರಮ್ಮ ರವರ 28 ವಯಸ್ಸಿನ ಪುತ್ರಿ ಚೇತನಳಿಗೆ ಬಾಲ್ಯದಿಂದಲು ಮದುಮೇಹ ಕಾಯಿಲೆ ಆವರಿಸಿದ್ದು,ಈ ಖಾಯಿಲೆಯಿಂದ ದೃಷ್ಟಿಯನ್ನು ಕಳೆದುಕೊಂಡಿದ್ದು,ನಡೆದಾಡುವ ಸ್ಥಿತಿಯಲ್ಲಿರದ ಮಗಳನ್ನು 28 ವರ್ಷದಿಂದ ತಾಯಿಯೊಬ್ಬರೇ ಕಷ್ಟದಿಂದ ಸಾಕುತಿದ್ದಾರೆ.ಈ ವಿಚಾರ ತಾ ಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲವಳ್ಳಿ ರವರ ಗಮನಕ್ಕೆ ಬಂದ ತಕ್ಷಣ ಹುಂಚ ಮಠದ ಪರಮಪೂಜ್ಯ ಗುರುಗಳಾದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹಾಗೂ ಮೂಲೆಗದ್ದೆ ಮಠದ ಪರಮಪೂಜ್ಯ…

Read More

Veeresh Aluvalli, a politician without theory:: block congress Ripponpet

Ripponpet:: Former legislator Shri Belur Gopalakrishna has vindicated Veerash Aluvalli, who has no qualms about either Gopalakrishna or Congress leaders.  He is also a person who has not worked for the BJP in the marine constituency and the JDS in the Tirthahalli assembly constituency in the last assembly elections. Ripponpet congress block committee drew a…

Read More

ಬೇಳೂರು ಗೋಪಾಲಕೃಷ್ಣ ಒಬ್ಬ ಶೋಕಿಲಾಲ ರಾಜಕಾರಣಿ:: ವೀರೇಶ್ ಆಲುವಳ್ಳಿ

ಹೊಸನಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಒಬ್ಬ ಶೋಕಿಲಾಲ ರಾಜಕಾರಣಿ ಅವರಿಗೆ ಕಿಂಚಿತ್ತು ಸಾಮಾಜಿಕ ಬದ್ದತೆ ಇಲ್ಲ ಎಂದು ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ರವರು ವಾಗ್ದಾಳಿ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿ, ಮಾಜಿ ಶಾಸಕರು ಸುತ್ತಾ ಗ್ರಾಮದಲ್ಲಿ  ಮರಳು ಮಾಫ಼ಿಯ ನಡೆಯುತ್ತಿದೆ ಎಂದು ತಮ್ಮ ಹಾಗೂ ಸುರೇಶ್ ಸ್ವಾಮಿರಾವ್ ವಿರುದ್ದ ಗಂಭೀರ ಆರೋಪ ಹೊರಿಸಿದಲ್ಲದೇ ಇದರ ಹಿಂದೆ ಶಾಸಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ ಇದು ಸತ್ಯಕ್ಕೆ ದೂರವಾಗಿದ್ದು…

Read More