Headlines

ಕಾಂಗ್ರೆಸ್ಸಿಗರು ಹತಾಶರಾಗಿ‌ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ : ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ : ರಾಜ್ಯದ ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಇದನ್ನು ಅರಿತಿರುವ ಕಾಂಗ್ರೆಸ್ಸಿಗರು ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಭೀತಿಯಿಂದಾಗಿ ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ ನಾಯಕರ ಅಪ ಪ್ರಚಾರ ಇಲ್ಲದಿದ್ದರೆ ಕೋವಿಡ್ 2ನೇ ಡೋಸ್​ ನೀಡಿಕೆಯಲ್ಲಿ ಇನ್ನಷ್ಟು ಪ್ರಗತಿ ಆಗುತ್ತಿತ್ತು. ಆದಾಗ್ಯೂ, ಇಡೀ ವಿಶ್ವವೇ ಮೆಚ್ಚುವಂತಹ ರೀತಿ ಕೊರೊನಾ ಲಸಿಕೆ…

Read More

ಹೊಸನಗರ ಪೊಲೀಸರ ಭರ್ಜರಿ ಭೇಟೆ : ಮೀನು ಗಾಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ :

ಹೊಸನಗರ: ಇಲ್ಲಿನ ಸಮೀಪದ ಮಾವಿನಕೊಪ್ಪ ಬಳಿ ಇಂದು ಬೆಳಗಿನ ಜಾವ ಮೀನು ತುಂಬಿದ್ದ ಗೂಡ್ಸ್ ಗಾಡಿಯಲ್ಲಿ ಸುಮಾರು ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.  ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ನಾಯ್ಕ್ ರವರ ನೇತೃತ್ವದ ತಂಡ ಇಂದು ಬೆಳಗಿನಜಾವ ಮಿಂಚಿನ ದಾಳಿ ನಡೆಸಿ ಒಂದು ಕೆ.ಜಿ ಗಾಂಜಾ ಹಾಗೂ ಆರೋಪಿ ಸಹಿತ ಒಂದು ಗೂಡ್ಸ್ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಡಿ.ವೈ.ಎಸ್.ಪಿಯವರ ಆದೇಶದ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂಧನ್‌ರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ನಡೆಸಲಾಗಿದ್ದು ಬಟ್ಟೆಮಲ್ಲಪ್ಪದಿಂದ ಬರುತ್ತಿದ್ದ ಮೀನು ತುಂಬಿದ್ದ ಗೂಡ್ಸ್ ಆಟೋದಲ್ಲಿ…

Read More

ರಿಪ್ಪನ್ ಪೇಟೆ : ಕೃಷಿ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿ ಸಾವು

 ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿಯಲ್ಲಿ  ಮನೆಯ ಸಮೀಪದಲ್ಲಿದ್ದ ಕೃಷಿ ಹೊಂಡದಲ್ಲಿ ಬಿದ್ದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದಾನೆ. ವಾಸು ಎಂಬುವರ ಪುತ್ರ  ಭರತ್ ರಾಜ್ (15) ಸಾವನ್ನಪ್ಪಿದ ದುರ್ಧೈವಿ. ಈತ ರಿಪ್ಪನ್ ಪೇಟೆಯ ಮೇರಿ ಮಾತ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು,ಈತನ ತಂದೆ ವಾಸು ಇದೇ ಶಾಲೆಯಲ್ಲಿ ಕಚೇರಿ ಸಹಾಯಕರಾಗಿ  ಕಾರ್ಯನಿರ್ವಹಿಸುತ್ತಿದ್ದರು. ಭರತ್ ರಾಜ್ ಶಾಲೆ ಮುಗಿಸಿಕೊಂಡು ಮನೆಯ ಬಳಿ ಆಟವಾಡಲು ತೆರಳಿದ್ದ ಸಮಯದಲ್ಲಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ರಿಪ್ಪನ್ ಪೇಟೆ ಪೋಲೀಸ್ ಠಾಣಾ…

Read More

ಶಿವಮೊಗ್ಗ : ಶೌಚಾಲಯದ ಗುಂಡಿಯಲ್ಲಿ ಹಸುಗೂಸಿನ ಶವ ಪತ್ತೆ :

ಶಿವಮೊಗ್ಗ : ಶೌಚ ಗುಂಡಿಯಲ್ಲಿ ನವಜಾತ ಶಿಶುವಿನ‌ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಹೊಳೆಹೊನ್ನೂರಿನ ಸಿದ್ದರ ಕಾಲೋನಿಯಲ್ಲಿ ನಡೆದಿದೆ. ಸಿದ್ದರ ಕಾಲೋನಿಯ ಮಹದೇವ ಎಂಬುವ ವ್ಯಕ್ತಿ ಮನೆಯ ಹಿಂಬದಿಯಲ್ಲಿ  ಶೌಚಾಲಯದ ಉದ್ದೇಶಕ್ಕಾಗಿ ಗುಂಡಿ ತೆಗೆಯಿಸಲಾಗಿತ್ತು.ಮಳೆ ಬಂದ ಹಿನ್ನಲೆಯಲ್ಲಿ ಗುಂಡಿಯಲ್ಲಿ ನೀರು ತುಂಬಿಕೊಂಡಿತ್ತು. ಇಂದು ಈ ಗುಂಡಿಯ ನೀರಿನಲ್ಲಿ ನವಜಾತ ಶಿಶುವಿನ‌ ಮೃತದೇಹವೊಂದು ತೇಲುತ್ತಿರುವುದು ಮಹದೇವ ಎನ್ನುವವರಿಗೆ ಕಾಣಿಸಿದೆ. ಮಗುವಿನ ಜನನವನ್ನ ಮುಚ್ಚಿಡಲು ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ.  ಮಗು ಜೀವಂತವಾಗಿರುವಾಗಲೇ ಗುಂಡಿಗೆ ಎಸೆಯಲಾಗಿದೆಯೋ ಅಥವ ಸಾಯಿಸಿ ಎಸೆಯಲಾಗಿದೆಯೋ ಎಂದು ಇನ್ನಷ್ಟೆ…

Read More

ರಿಪ್ಪನ್ ಪೇಟೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಜೆ ಎನ್ ಷಣ್ಮುಖಪ್ಪ ಗೌಡ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜಯದೇವ ರೈಸ್ ಮಿಲ್ ನ ಮಾಲೀಕರಾದ ಜೆ ಎನ್ ಷಣ್ಮುಖಪ್ಪ ಗೌಡರು(99) ಇಂದು ರಿಪ್ಪನ್ ಪೇಟೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮಧ್ಯಾಹ್ನ ತಮ್ಮ ರಿಪ್ಪನ್ ಪೇಟೆಯ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರು ಏಳು ಪುತ್ರರು,ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸ್ವಾತಂತ್ರ್ಯ ಹೋರಾಟಗಾರ ಜೆ ಎನ್…

Read More

ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಆಗ್ರಹಿಸಿ ಮನವಿ ಸಲ್ಲಿಸಿದ ತೀರ್ಥಹಳ್ಳಿ ಭಜರಂಗದಳದ ಕಾರ್ಯಕರ್ತರು

ತೀರ್ಥಹಳ್ಳಿ : ರಾಜ್ಯದಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಹಲವಾರು ಕಡೆ ಜನರ ಬಡತನ, ಅನಾರೋಗ್ಯವನ್ನೇ ದುರುಪಯೋಗಪಡಿಸಿ, ಜನರ ಭಾವನೆಯೊಂದಿಗೆ ಆಟವಾಡಿ, ಆಸೆ ಆಮಿಷಗಳನೊಡ್ಡಿ `ಮತಾಂತರದಿಂದ ನಿಮ್ಮ ಮೋಸದ ಪ್ರಚಾರ,ಮಾತಿನ ಮೋಡಿಗಳಿಂದ ಭ್ರಮೆಗೊಳಪಟ್ಟು ಸಮಸ್ಯೆಗಳು ನೀಗುತ್ತವೆ ಎಂದು ಮತಾಂತರಗೊಳಿಸಿ “ಸ್ವಇಚ್ಚೆಯ ಮತಾಂತರ” ಎಂದು ಬಿಂಬಿಸಲಾಗುತ್ತಿದೆ.  ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಕುಟುಂಬದಲ್ಲಿ ಒಬ್ಬರು ಮತಾಂತರಗೊಂಡರೆ ಕುಟುಂಬದ ಇತರ ವ್ಯಕ್ತಿಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ಬಂದು ಮನೆಯ ಸದಸ್ಯರು ತೀವ್ರ ಮಾನಸಿಕ ಆಘಾತಕ್ಕೊಳಗಾಗುತ್ತಿರುವುದು ಕಂಡು ಬರುತ್ತಿದ್ದು ಅವರ ಮಾನಸಿಕ…

Read More

ಆಯನೂರು ಸಮೀಪ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಕಾರು ಚಾಲಕ ಸ್ಥಳದಲ್ಲೇ ಸಾವು

ಶಿವಮೊಗ್ಗ : ಇಲ್ಲಿನ ಸಮೀಪದ ಮುದ್ದಿನಕೊಪ್ಪದ ಬಳಿ  ಕಾರು ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.   ನಿತ್ಯದ ಕೆಲಸದ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ಯುವಕನಿಗೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿ ಸಾವು ಸಂಭವಿಸಿರುವ ದುರಂತದ ಘಟನೆ ನಡೆದಿದೆ.  ಇದರಲ್ಲಿ ಕಾರು‌ಚಾಲಕ ಆಗಿದ್ದ ಶಿವಮೊಗ್ಗ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿ ಅತ್ತೆ ಮನೆಗೆ ಹೋಗುತ್ತಿದ್ದ ಅಳಿಯ ಸ್ಥಳದಲ್ಲೆ ಸಾವು ಕಂಡಿರುವ ಘಟನೆ ನಡೆದಿದೆ.ಹೊನ್ನಾಳ್ಳಿ ತಾಲ್ಲೂಕಿನ ಗೋಣಗೇರೆ ನಿವಾಸಿ…

Read More

ಶಿವಮೊಗ್ಗ : ಕೆರೆಯಲ್ಲಿ ಈಜಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಶಿವಮೊಗ್ಗ : ಸ್ನಾನಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಸಾವು ಕಂಡಿರುವ ಘಟನೆ ಹಾಯ್ ಹೊಳೆ ಕೆರೆಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅರಣ್ಯ ಇಲಾಖೆಯಲ್ಲಿ ಎಫ್ ಡಿ ಎ ಕೆಲಸ ಮಾಡುತ್ತಿದ್ದ ಅಲ್ಲಾಭಕ್ಷಿ(30) ಅವರು ಶಿವಮೊಗ್ಗ ತಾಲೂಕಿನಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬದೊಂದಿಗೆ ಬಂದಿದ್ದರು. ಹಾಯ್ ಹೊಳೆ ಕೆರೆಯ ನೀರಿನ ಆಳದ ಅರಿವಿಲ್ಲದೆ ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಂದು ಬೆಳಿಗ್ಗೆ ತಮ್ಮ ಕಾರನ್ನು ಇದೇ ಹಾಯ್ ಹೊಳೆ ಕೆರೆಯಲ್ಲಿ…

Read More

ಡಾ. ರಾಜ್ ಸ್ವರ ಸಂಭ್ರಮ ಸಂಗೀತ ಸ್ಪರ್ಧೆಯಲ್ಲಿ ಸ್ಪರ್ದಿಸಿರುವ ರಿಪ್ಪನ್ ಪೇಟೆಯ ಯುವ ಪ್ರತಿಭೆ ಪ್ರಣತಿ ಪ್ರವೀಣ್ ಗೆ ಬೆಂಬಲಿಸಿ:

ರಿಪ್ಪನ್ ಪೇಟೆ : ಸಾಗರದ ಯೂತ್ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗ ಇವರ ಆಶ್ರಯದಲ್ಲಿ ನಡೆಯುತ್ತಿರುವ “ಡಾ ರಾಜ್ ಸ್ವರ ಸಂಭ್ರಮ” ಕಾರ್ಯಕ್ರಮದ ಅಂತರ್ಜಾಲ ಸಂಗೀತ ಸ್ಪರ್ಧೆಯಲ್ಲಿ ರಿಪ್ಪನ್ ಪೇಟೆಯ ಪ್ರಣತಿ ಪ್ರವೀಣ್ ಸ್ಪರ್ಧಿಸಿದ್ದು  ಈ ಯುವ ಪ್ರತಿಭೆಯು ಸ್ಪರ್ಧೆಯಲ್ಲಿ ಮುಂದಿನ ಹಂತಕ್ಕೆ ತೆರಳಲು ವೀಕ್ಷಕರ ಸಹಕಾರದ ಅಗತ್ಯವಿದೆ. ರಿಪ್ಪನ್ ಪೇಟೆಯ ಮಹಾಲಕ್ಷ್ಮಿ ಹಾಗೂ ಪ್ರವೀಣ್ ದಂಪತಿಗಳ ಪುತ್ರಿಯಾದ ಪ್ರಣತಿ ಪ್ರವೀಣ್ ಸಂಗೀತ ಲೋಕದಲ್ಲಿ ಅಧ್ಬುತ ಸಾಧನೆಗೈದಿದ್ದು ಪ್ರಸ್ತುತ ಸಾಗರದ ಯೂತ್ ಐಕಾನ್…

Read More

ರಿಪ್ಪನ್ ಪೇಟೆ: ಗುರುವಾರದಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ:

ರಿಪ್ಪನ್ ಪೇಟೆ : ದಿನಾಂಕ 21ರ ಗುರುವಾರ,ಸಮಯ ಸಂಜೆ 5:00 ಗಂಟೆಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಭಾಭವನ ದಲ್ಲಿ ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ ಎಂದು ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಪ್ ಭಾಷಾಸಾಬ್ ಪತ್ರೀಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಭೆಯಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ, ಬಿ,ಜಿ, ನಾಗರಾಜ್, ತಾಲ್ಲೂಕು ವೀಕ್ಷಕರಾದ  ಮಲ್ಲಿಕಾರ್ಜುನ್ ಹಕ್ರೆ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡ್ ರತ್ನಕರ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ, ಬಿ ಪಿ ರಾಮಚಂದ್ರ,ಜಿಲ್ಲಾ ಪಂಚಾಯತ್…

Read More