WhatsApp Channel
Join Now
Telegram Channel
Join Now
ಶಿವಮೊಗ್ಗ : ಸ್ನಾನಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಸಾವು ಕಂಡಿರುವ ಘಟನೆ ಹಾಯ್ ಹೊಳೆ ಕೆರೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅರಣ್ಯ ಇಲಾಖೆಯಲ್ಲಿ ಎಫ್ ಡಿ ಎ ಕೆಲಸ ಮಾಡುತ್ತಿದ್ದ ಅಲ್ಲಾಭಕ್ಷಿ(30) ಅವರು ಶಿವಮೊಗ್ಗ ತಾಲೂಕಿನಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬದೊಂದಿಗೆ ಬಂದಿದ್ದರು.
ಹಾಯ್ ಹೊಳೆ ಕೆರೆಯ ನೀರಿನ ಆಳದ ಅರಿವಿಲ್ಲದೆ ಸ್ನಾನಕ್ಕಾಗಿ ನೀರಿಗೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ತಮ್ಮ ಕಾರನ್ನು ಇದೇ ಹಾಯ್ ಹೊಳೆ ಕೆರೆಯಲ್ಲಿ ತೊಳೆದಿದ್ದರು. ಸುಮಾರು 11 ಗಂಟೆಯ ವೇಳೆಗೆ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಸ್ಲಿಪ್ ಆಗಿ ನೀರಿಗೆ ಬಿದ್ದು ಮೃತಪಟ್ಟರು ಎನ್ನಲಾಗಿದೆ.
ಪ್ರಕರಣ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.