ರಿಪ್ಪನ್ಪೇಟೆ; ಶರನ್ನವರಾತ್ರಿ ಸಂಭ್ರಮಾಚರಣೆಯೊಂದಿಗೆ ಸಂಪನ್ನ
ರಿಪ್ಪನ್ಪೇಟೆ; ಶರನ್ನವರಾತ್ರಿ ಸಂಭ್ರಮಾಚರಣೆಯೊಂದಿಗೆ ಸಂಪನ್ನ ರಿಪ್ಪನ್ಪೇಟೆ;-ಇತಿಹಾಸ ಪ್ರಸಿದ್ದ ಶ್ರೀ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಆನ್ನಪೂರ್ಣೇಶವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಆಯುಧ ಪೂಜೆ ಹಾಗೂ ವಿಜಯದಶಮಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ `ಚಂಡಿಕಾ ಹೋಮ’ಇನ್ನಿತರ ಪೂಜಾ ಕೈಂಕರ್ಯಗಳು ಸಂಭ್ರಮಾಚರಣೆಯೊಂದಿಗೆ ಸಂಪನ್ನಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕ ಗುರುರಾಜ ಭಟ್ ಇವರ ನೇತೃತ್ವದಲ್ಲಿ ನಿತ್ಯ ಅಮ್ಮನವರ ಸನ್ನಿಧಾನದಲ್ಲಿ ಚಂಡಿಕಾ ಪಾರಾಯಣ ಮತ್ತು ವಿಶೇಷ ಪೂಜಾ ಕಾರ್ಯಗಳು ನಡೆದು ವಿಜಯ ದಶಮಿಯಂದು ಲೋಕಕಲ್ಯಾಣಾರ್ಥವಾಗಿ “ಚಂಡಿಕಾ ಹೋಮ’’ ನಂತರ ತೀರ್ಥಪ್ರಸಾದ…