Headlines

ರಿಪ್ಪನ್ ಪೇಟೆ : ಐಟಿಐ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸುವಂತೆ ಬಿ ಪಿ ರಾಮಚಂದ್ರ ಆಗ್ರಹ

ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೆದಲುಗುಡ್ಡ ಗ್ರಾಮದಲ್ಲಿ ನೂತನ ಸರಕಾರಿ ಐಟಿಐ ಕಾಲೇಜು ಕಟ್ಟಡ ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಉದ್ಘಾಟನೆ ಭಾಗ್ಯ ಕಾಣದೆ ಐಟಿಐ ವಿದ್ಯಾರ್ಥಿಗಳು ಪರಿತಪಿಸುತಿದ್ದಾರೆ, ಆದಷ್ಟು ಬೇಗ ನೂತನ ಕಟ್ಟಡ ಉದ್ಘಾಟನೆ ಮಾಡಿ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲಕರ ಮಾಡಿಕೊಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಆಗ್ರಹಿಸಿದ್ದಾರೆ.  ಇಂದು ಕೆದಲುಗುಡ್ಡೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಐಟಿಐ ಕಾಲೇಜಿನ ಕಟ್ಟಡವನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ  ಸುಮಾರು…

Read More

ಚಲಿಸುತ್ತಿದ್ದ ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಬೈಕ್ ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ :

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಹೊರವಲಯದ ಉಳವಿ ರಸ್ತೆಯ ಪಡವಗೊಡು ಬಳಿ“ರಾಯಲ್ ಎನ್ಫಿಲ್ಡ್ ಬುಲ್ಲೆಟ್” ಬೈಕೊಂದು ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಬೈಕ್ ಸಂಪೂರ್ಣ ಸುಟ್ಟು ಹೋಗಿದ್ದು ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ತಕ್ಷಣ ಸ್ಥಳೀಯರು ವಾಹನಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ  ಸಹಕರಿಸಿದ್ದಾರೆ. ಎಂದು ತಿಳಿದು ಬಂದಿದೆ.  ಬೆಂಕಿ ಹೊತ್ತಿಕೊಂಡ ಬೈಕ್ ದಾವಣಗೆರೆ ನೊಂದಾಣಿಯ “KA 17 HQ 3482” ದಾವಣಗೆರೆ ಮೂಲದವರು ಎಂದು ಬಲ್ಲಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಸಾಗರ : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಅಕ್ರಮ ಗೋ ಕಳ್ಳರ ವಿರುದ್ಧ ಪ್ರತಿಭಟನೆ

ಸಾಗರ:ಗೋವು ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿ ಸಾಗರದ ಮಾರಿಕಾಂಬ ದೇವಸ್ಥಾನ ಎದುರು ಇಂದು ಸಾಗರದ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾಗರದ ಮಾರಿಕಾಂಬ ದೇವಸ್ಥಾನದ ತವರು ಮನೆ ಎದುರು ಗೋವು ಪೂಜೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು.   ಜಿಲ್ಲಾ ರಕ್ಷಣಾಧಿಕಾರಿಗಳು ಬರುವವರೆಗೂ ಪ್ರತಿಭಟನೆಯನ್ನು ಮುಂದುವರೆಸುವ ತೀರ್ಮಾನವನ್ನು ವಿಹಿಂಪ ಮತ್ತು ಬಜರಂಗದಳ ತೆಗೆದುಕೊಂಡಿದೆ. ಸಾಗರದ ಬಿ.ಹೆಚ್.‌ರಸ್ತೆಯ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆಯನ್ನು ಮಾಡಲಾಗುವುದೆಂದು    ಪ್ರತಿಭಟನಾಕಾರರು ಹೇಳಿದ್ದಾರೆ. ಸರಕಾರದ ವಿರುದ್ದ, ಪೋಲೀಸರ ವಿರುದ್ದ…

Read More

ರಿಪ್ಪನ್ ಪೇಟೆಯ ಮಹಿಳೆಯೊಬ್ಬರ ಮೊಬೈಲ್ ಗೆ ಅಶ್ಲೀಲ ಚಿತ್ರ ರವಾನೆ : ಅಪರಿಚಿತ ವ್ಯಕ್ತಿಗಳ ಪತ್ತೆಗೆ ಭರ್ಜರಿ ಬಲೆ ಬೀಸಿರುವ ಖಾಕಿ ಟೀಮ್

ರಿಪ್ಪನ್‌ಪೇಟೆಯ ಮಹಿಳೆಯೋರ್ವರ ಮೊಬೈಲ್ ಗೆ ಅಶ್ಲೀಲ ವಿಡಿಯೋ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಅಪರಿಚಿತರ ವಿರುದ್ಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದೆ.  ಗವಟೂರು ಗ್ರಾಮದ ನಿವಾಸಿಯಾಗಿರುವ ಮಹಿಳೆಯೊಬ್ಬರ ಮೊಬೈಲ್ ಗೆ ಮೇ.10 ರಂದು ಅಶ್ಲೀಲ ವಿಡಿಯೋಗಳನ್ನ ಎರಡು ಅಪರಿಚಿತ ನಂಬರ್ ನಿಂದ ರವಾನಿಸಿ ಮೇಲಿಂದ ಮೇಲೆ ಕರೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಅರ್ಜಿಯನ್ನೂ ಮೇ 10 ರಂದು ಮಹಿಳೆ ನೀಡಿದ್ದರು.  ಇದನ್ನು ತನಿಖೆ ನಡೆಸಿದ ಪೊಲೀಸರು ಎರಡು ಅಪರಿಚಿತ ಮೊಬೈಲ್…

Read More

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಚಿತ್ರ ನಟ ಪ್ರೇಮ್ ಕುಟುಂಬ ಸಮೇತ ಭೇಟಿ , ವಿಶೇಷ ಪೂಜೆ

ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಚಿತ್ರ ನಟ ಪ್ರೇಮ್ ಕುಟುಂಬ ಸಮೇತ ಭೇಟಿ , ವಿಶೇಷ ಪೂಜೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿ ಪ್ರಸಿದ್ಧ ದೇವಾಲಯವಾದ ಸಿಗಂದೂರು ಚೌಡೇಶ್ವರಿ ದೇವಿಯ ದೇಗುಲಕ್ಕೆ ಇಂದು ಸ್ಯಾಂಡಲ್ ವುಡ್ ನಟ ಪ್ರೇಮ್ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ, ದೇವಿಯ ದರ್ಶನವನ್ನು ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ದಸರಾ ಪ್ರಯುಕ್ತ ದಸರಾ ವೈಭವ ನಡೆಯುತ್ತಿದೆ. ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಪತ್ನಿ ಜ್ಯೋತಿ ಪ್ರೇಮ್…

Read More

ಬೆಳದಿಂಗಳ ಬಾಲೆಯ ಬೆನ್ನತ್ತಿ ಹೋಗಿ ಹಣ ಕಳೆದುಕೊಂಡ ಯುವಕ : ಸಾಮಾಜಿಕ ಜಾಲತಾಣದ ಮನ್ಮಥರು ನೋಡಲೇಬೇಕಾದ ಸ್ಟೋರಿ!!!!!

ಇನ್ ಸ್ಟಾ‌ಗ್ರಾಮ್ ನಲ್ಲಿ ಪರಿಚಯವಾದ ಬೆಳದಿಂಗಳ ಬಾಲೆಯೊಬ್ಬಳು ತನ್ನ‌ ಬೇಡಿಕೆ ಈಡೇರಿಕೆಗಾಗಿ ಸಹಚರರ ಮೂಲಕ ಸೊರಬ ತಾಲೂಕು ಕ್ಯಾಸನೂರು ಗ್ರಾಮ ಉಮಟೆಗದ್ದೆ ನಿವಾಸಿ ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡಿ, ಹಣ ಕಿತ್ತುಕೊಂಡು ವಂಚಿಸಿರುವ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ. ಸಾಗರದ ಸಂಜಯ್ ಮೆಮೋರಿಯಲ್ ಡಿಪ್ಲಮೋ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಯ ವಿವೇಕ್ ಎಂಬ ಯುವಕನಿಗೆ ಇನ್ಸ್ಟಾ ಗ್ರಾಮ್ ನಲ್ಲಿ ಅಣಲೇಕೊಪ್ಪದ ಸೌಜನ್ಯ ಎಂಬ ಯುವತಿ ಹಾಯ್ ಎಂಬ ಮೆಸೇಜ್ ಕಳುಹಿಸುವ ಮೂಲಕ ಪರಿಚಿತಳಾಗುತ್ತಾಳೆ. ಇಬ್ಬರು ಪರಸ್ಪರ ಮೊಬೈಲ್ ನಲ್ಲಿ…

Read More

ಅಡಿಕೆ ದರದಲ್ಲಿ ಏರಿಳಿತ: ಶಿವಮೊಗ್ಗ ಜಿಲ್ಲೆಯ ಫೆಬ್ರವರಿ 27ರ ಮಾರುಕಟ್ಟೆಯ ಧಾರಣೆ

Arecanut prices in Shivamogga district show fluctuations as on February 27. Check today’s complete market-wise arecanut rates in quintals, comparison with February 26 prices, and updates for Shivamogga and Bhadravati markets. ಅಡಿಕೆ ಧಾರಣೆಯಲ್ಲಿ ಹಾವು–ಏಣಿ ಆಟದಂತೆಯೇ ದಿನದಿಂದ ದಿನಕ್ಕೆ ಏರಿಳಿತ ಕಂಡುಬರುತ್ತಿದ್ದು, ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನ (ಫೆಬ್ರವರಿ 27) ಅಡಿಕೆ ಮಾರುಕಟ್ಟೆಯ ದರಗಳು ಬೆಳೆಗಾರರ ಗಮನ ಸೆಳೆಯುತ್ತಿವೆ. ರಾಜ್ಯದಲ್ಲಿ…

Read More

ಪವರ್ ಹೌಸ್ ನಲ್ಲಿ ದಿಡೀರ್ ಪ್ರತ್ಯಕ್ಷವಾದ ಚಿರತೆ : ಕೋಲಿನಿಂದ ಬೆದರಿಸಿ ಚಿರತೆ ಬಾಯಿಯಿಂದ ನಾಯಿಯನ್ನು ರಕ್ಷಿಸಿದ ಸೆಕ್ಯುರಿಟಿ ಗಾರ್ಡ್ : ವೀಡಿಯೋ ವೈರಲ್

ಮಾಸ್ತಿಕಟ್ಟೆ : ಮಲೆನಾಡಿನಾದ್ಯಂತ ಸೆಕ್ಯುರಿಟಿ ಗಾರ್ಡ್ ಒಬ್ಬರು ಚಿರತೆಯನ್ನು ಹೆದರಿಸಿ ನಾಯಿಯನ್ನು ರಕ್ಷಿಸಿದ  ವಿಡಿಯೋ ವೈರಲ್ ಆಗುತ್ತಿದೆ.  ಆ ರಾತ್ರಿ ಪವರ್ ಹೌಸ್ ನಲ್ಲಿ ನಡೆದಿದ್ದೇನು??? ಅವತ್ತು ರಾತ್ರಿ ಹೊಸಂಗಡಿ ಪವರ್ ಹೌಸ್ ಭದ್ರತಾ ಕೊಠಡಿಯಲ್ಲಿ ಸೆಕ್ಯುರಿಟಿ ಈರಪ್ಪ ಗೌಡ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಅಲ್ಲಿದ್ದ ಒಂದು ನಾಯಿಯನ್ನು ಎಲ್ಲಿಂದಲೋ ಬಂದ ಚಿರತೆಯೊಂದು ಹಿಡಿದು ಓಡಲು ಆರಂಭಿಸಿತು. ಅಷ್ಟರಲ್ಲಿ ಅಲ್ಲಿಯೇ ಇದ್ದ ಇನ್ನೊಂದು ಶ್ವಾನ ಜೋರಾಗಿ ಬೊಗಳಿದೆ. ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಈರಪ್ಪ…

Read More

ರಿಪ್ಪನ್‌ಪೇಟೆ : ಹಿರಿಯ ಸಾಹಿತಿ ನಾ ಡಿಸೋಜ ಅಂತಿಮ ದರ್ಶನ ಪಡೆದ ಅಭಿಮಾನಿಗಳು

ರಿಪ್ಪನ್‌ಪೇಟೆ : ಭಾನುವಾರ ಅಸ್ತಂಗತರಾದ ನಾಡಿನ ಹೆಸರಾಂತ ಸಾಹಿತಿ ,‌ಜನಪ್ರಿಯ ಕಾದಂಬರಿಕಾರ ಡಾ.ನಾ ಡಿಸೋಜಾ ಪಾರ್ಥಿವ ಶರೀರವನ್ನು ಪಟ್ಟಣದ ವಿನಾಯಕ ವೃತ್ತದಲ್ಲಿ ಅಭಿಮಾನಿಗಳು, ಹಿತೈಷಿಗಳು, ಅಂತಿಮ ದರ್ಶನ ಪಡೆದರು. ಮಂಗಳೂರಿನಿಂದ ಸಾಗರಕ್ಕೆ ಪ್ರಾರ್ಥೀವ ಶರೀರ ತೆರಳುತಿದ್ದ ಸಂಧರ್ಭದಲ್ಲಿ ಪಟ್ಟಣದ ವಿನಾಯಕ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ,ಅಭಿಮಾನಿಗಳು ಹಾಗೂ ಹಿತೈಶಿಗಳು ನಾಡಿನ ಹೆಸರಾಂತ ಸಾಹಿತಿಯ ಅಂತಿಮ ದರ್ಶನ ಪಡೆದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಹ ಅ ಪಾಟೀಲ್ ನಾ ಡಿಸೋಜ ಹಾಗೂ ರಿಪ್ಪನ್‌ಪೇಟೆ ಪಟ್ಟಣಕ್ಕೂ ಅವಿನಾಭಾವ…

Read More

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿ ಆರ್ಥಿಕ ಧನಸಹಾಯ ಮಾಡಿದರು. ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದ ಅವರು ಸಾಂತ್ವನ ಹೇಳಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನ್ಯಾಯ ಸಿಗಲಿದೆ ಎಂಬ ಭರವಸೆ ನೀಡಿ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶಾಂತಿ ಕೋರಿದರು. ಈ ಸಂಧರ್ಭದಲ್ಲಿ ಸಾಗರ-ಹೊಸನಗರ ತಾಲೂಕ್ ಬಿಲ್ಲವ ಸಮಾಜದ ಬಾಂಧವರು ಹಾಗೂ ಪಕ್ಷದ ಪ್ರಮುಖರು ಇದ್ದರು. ರಾಜ್ಯಸಭಾ…

Read More