ಜಿಲ್ಲಾ ಸುದ್ದಿ:
RIPPONPETE | ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ
ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ – ಕೋಮು ಸೂಕ್ಷ್ಮತೆಯಿಂದ ಸೌಹಾರ್ದದ ಹಳ್ಳಿಯತ್ತ ಕೆಂಚನಾಲ ಕೆಂಚನಾಲ… ಸಾಮಾನ್ಯವಾಗಿ ಜನರು ಈ ಗ್ರಾಮದ ಹೆಸರನ್ನು ಕೇಳಿದರೆ, “ಅದು ಕೋಮು ಸೂಕ್ಷ್ಮ ಪ್ರದೇಶ” ಎಂಬ ಕಲ್ಪನೆ ತಕ್ಷಣ ಮೂಡುತ್ತಿತ್ತು. ಆದರೆ ಈ ಬಾರಿಯ ಗಣೇಶೋತ್ಸವವೇ ಒಂದು ಹೊಸ ಇತಿಹಾಸ ಬರೆದಿತು. ಹಬ್ಬ ಎಂದರೆ ಕೆಲವೊಮ್ಮೆ ಜಗಳ, ಅಸಮಾಧಾನ, ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ ಎನ್ನುವ ತಪ್ಪು ಕಲ್ಪನೆಗೆ, ಈ ಗ್ರಾಮದ ಜನರು ಅತ್ಯಂತ ನಿಜವಾದ ಉತ್ತರ ನೀಡಿದ್ದಾರೆ. ಹೌದು ಶಿವಮೊಗ್ಗ ಜಿಲ್ಲೆಯ…
ಹೊಸನಗರವನ್ನು ಮಾದರಿ ನಗರವಾಗಿಸುವುದು ನನ್ನ ಗುರಿ – ಶಾಸಕ ಗೋಪಾಲಕೃಷ್ಣ ಬೇಳೂರು
ಹೊಸನಗರವನ್ನು ಮಾದರಿ ನಗರವಾಗಿಸುವುದು ನನ್ನ ಗುರಿ – ಶಾಸಕ ಗೋಪಾಲಕೃಷ್ಣ ಬೇಳೂರು 81.14 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹೊಸನಗರ: ಹೊಸನಗರವನ್ನು ಮಾದರಿ ನಗರವಾಗಿಸಲು ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಹೊಸನಗರ ಪಟ್ಟಣ ಪಂಚಾಯತ್ನಿಂದ ನೂತನವಾಗಿ ನಿರ್ಮಿತವಾದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ಉದ್ಘಾಟಿಸಿ, ಸುಮಾರು 81.14 ಲಕ್ಷ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ…
ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ
ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ಸದಸ್ಯ, ಯುವ ಮುಖಂಡ ಹಾಗೂ ಸಂಘಟನಾ ಚಾತುರ್ಯ ಹೊಂದಿದ ನಿರೂಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಈ ಭಾಗದ ಕಾಂಗ್ರೆಸ್ ಸಂಘಟನೆಗೆ ಹೊಸ ಉಜ್ವಲ ಶಕ್ತಿ ತುಂಬಿದಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕುವೆಂಪು ಸಭಾಂಗಣದಲ್ಲಿ…
ಅರಸಾಳು ಮಾಲ್ಗುಡಿ , ಅಮ್ಮನಘಟ್ಟ , ಗುಳುಗುಳಿಶಂಕರ ಸೇರಿದಂತೆ ಈ ಸ್ಥಳಗಳು ಅಧಿಕೃತ ಪ್ರವಾಸಿ ತಾಣಗಳು – ರಾಜ್ಯ ಸರ್ಕಾರ ಘೋಷಣೆ
ಅರಸಾಳು ಮಾಲ್ಗುಡಿ , ಅಮ್ಮನಘಟ್ಟ , ಗುಳುಗುಳಿಶಂಕರ ಸೇರಿದಂತೆ ಈ ಸ್ಥಳಗಳು ಅಧಿಕೃತ ಪ್ರವಾಸಿ ತಾಣಗಳು – ರಾಜ್ಯ ಸರ್ಕಾರ ಘೋಷಣೆ ರಾಜ್ಯ ಸರ್ಕಾರದ ಹೊಸ ಪ್ರವಾಸೋದ್ಯಮ ನೀತಿ 2024–29ರ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ 64 ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಗುರುತಿಸಿ ಅಧಿಕೃತ ಘೋಷಣೆ ಮಾಡಲಾಗಿದೆ.ರಿಪ್ಪನ್ ಪೇಟೆ ಸಮೀಪದ ಮಾಲ್ಗುಡಿ ಮ್ಯೂಸಿಯಂ , ಗುಳುಗುಳಿಶಂಕರ , ಅಮ್ಮನಘಟ್ಟ ದೇವಸ್ಥಾನ ಸೇರಿದಂತೆ ಮಲೆನಾಡಿನ ಸೊಬಗುಳ್ಳ ತಾಣಗಳು ಶೀಘ್ರದಲ್ಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುವ ನಿರೀಕ್ಷೆಯಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ…
ರಿಪ್ಪನ್ಪೇಟೆ | ಗ್ರಾಮ ಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಕಾಂಗ್ರೆಸ್ ಸೇರ್ಪಡೆ – ಶಾಸಕ ಬೇಳೂರು ಸಮ್ಮುಖದಲ್ಲಿ ಸೇರ್ಪಡೆ
ರಿಪ್ಪನ್ಪೇಟೆ | ಗ್ರಾಮಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಕಾಂಗ್ರೆಸ್ ಸೇರ್ಪಡೆ – ಶಾಸಕ ಬೇಳೂರು ಸಮ್ಮುಖದಲ್ಲಿ ಸೇರ್ಪಡೆ ರಿಪ್ಪನ್ಪೇಟೆ : ಪಟ್ಟಣದ ಸ್ಥಳೀಯ ರಾಜಕೀಯದಲ್ಲಿ ಗಮನ ಸೆಳೆಯುವಂತಹ ಬೆಳವಣಿಗೆಯೊಂದರಲ್ಲಿ ರಿಪ್ಪನ್ಪೇಟೆ ಗ್ರಾಮಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗೃಹ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಕಾಂಗ್ರೆಸ್ ಧ್ವಜವನ್ನು ಹಿಡಿದು ಪಕ್ಷದ ಸದಸ್ಯತ್ವ ಪಡೆದರು….
31 ವರ್ಷಗಳ ಸುದೀರ್ಘ ಸೇವೆಯ ಬಳಿಕ ಶಿಕ್ಷಕ ಡಿ. ಕೃಷ್ಣಪ್ಪ ರವರಿಗೆ ಆತ್ಮೀಯ ಬೀಳ್ಕೊಡುಗೆ
31 ವರ್ಷಗಳ ಸೇವೆಯ ಬಳಿಕ ಶಿಕ್ಷಕ ಡಿ. ಕೃಷ್ಣಪ್ಪ ರವರಿಗೆ ಆತ್ಮೀಯ ಬೀಳ್ಕೊಡುಗೆ ರಿಪ್ಪನ್ ಪೇಟೆ : ಶಿಕ್ಷಕ ವೃತ್ತಿಯನ್ನು ತ್ಯಾಗ, ಸೇವೆ ಮತ್ತು ನಿಸ್ವಾರ್ಥತೆಯ ಪ್ರತೀಕವೆಂದು ಕರೆಯಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ, ಹೊಸನಗರ ತಾಲೂಕಿನ ಅರಸಾಳು ಗ್ರಾಮಪಂಚಾಯತ್ ವ್ಯಾಪ್ತಿಯ ಬೆನವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ಡಿ. ಕೃಷ್ಣಪ್ಪ ಅವರು 31 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿ, ಇದೀಗ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ , ವಿನಾಯಕ…
RIPPONPETE | ಹಿಂದೂ ಮಹಾಸಭಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು
RIPPONPETE | ಹಿಂದೂ ಮಹಾಸಭಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಮೂಲೆಗದ್ದ ಶ್ರೀಗಳು ರಿಪ್ಪನ್ಪೇಟೆ;-ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 58 ನೇ ಗಣೇಶೋತ್ಸವ ಸಮಿತಿಯವರು ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿಯರನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 58ನೇ ಗಣೇಶೋತ್ಸವ ಸಮಿತಿಯವರು ಅಭಿನಂದಿಸಿದರು. ಕರ್ನಾಟಕ…
ಪಿಯು ಕಾಲೇಜು ಉಪನ್ಯಾಸಕರ ಕಾರ್ಯಗಾರ – ಉಪನ್ಯಾಸಕರುಗಳಿಗೆ ಸಮಯ ಪಾಲನೆ ಮತ್ತು ಶಿಸ್ತು ಅಗತ್ಯ : ಚಂದ್ರಪ್ಪ ಗುಂಡಪಲ್ಲಿ
ಪಿಯು ಕಾಲೇಜು ಉಪನ್ಯಾಸಕರ ಕಾರ್ಯಗಾರ – ಉಪನ್ಯಾಸಕರುಗಳಿಗೆ ಸಮಯ ಪಾಲನೆ ಮತ್ತು ಶಿಸ್ತು ಅಗತ್ಯ : ಚಂದ್ರಪ್ಪ ಗುಂಡಪಲ್ಲಿ ರಿಪ್ಪನ್ ಪೇಟೆ: 21ನೇ ಶತಮಾನದಲ್ಲಿ ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಂದಿನ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಗಳನ್ನು ಪರಿಶೀಲಿಸುತ್ತಾರೆ, ಉಪನ್ಯಾಸಕರುಗಳು ಸಮಯ ಪಾಲನೆ ಮತ್ತು ಶಿಸ್ತು ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಹಾಗೆಯೇ ಕಾಲೇಜಿನ ಉತ್ತಮ ಫಲಿತಾಂಶಕ್ಕೆ ಕಾರಣಭೂತರಾಗುತ್ತಾರೆ ಎಂದು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಂದ್ರಪ್ಪ ಗುಂಡಪಲ್ಲಿ ಹೇಳಿದರು. ಅಮೃತ ಸರಕಾರಿ…
ಕೆಂಚನಾಲ, ಬಾಳೂರು ಹಾಗೂ ಚಂದಳ್ಳಿಯಲ್ಲಿ ಭಾರಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ , ಆರ್ಥಿಕ ನೆರವು
ಕೆಂಚನಾಲ, ಬಾಳೂರು ಹಾಗೂ ಚಂದಳ್ಳಿಯಲ್ಲಿ ಭಾರಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ , ಆರ್ಥಿಕ ನೆರವು ರಿಪ್ಪನ್ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕುರಿಯ ಕೊಟ್ಟಿಗೆ ಭಾರಿ ಗಾಳಿ ಮಳೆಗೆ ಹಾನಿಯಾಗಿತ್ತು ಮತ್ತು ಚಂದಳ್ಳಿ ,ಬಾಳೂರು ಗ್ರಾಮದಲ್ಲಿ ಮನೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಪ್ರಸ್ತುತ ಬಿಹಾರ ಚುನಾವಣಾ ಪ್ರಚಾರದಲ್ಲಿರುವ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕುಟುಂಬಸ್ಥರಿಗೆ ಸಾಂತ್ವಾನ…
“ಧರ್ಮ, ಹಬ್ಬ, ಕರ್ತವ್ಯ – ಎಲ್ಲವನ್ನೂ ಒಟ್ಟುಗೂಡಿಸಿದ ತೀರ್ಥಹಳ್ಳಿ ಪೊಲೀಸ್ ಗಣಪತಿ ವಿಸರ್ಜನೆ”
“ಧರ್ಮ, ಹಬ್ಬ, ಕರ್ತವ್ಯ – ಎಲ್ಲವನ್ನೂ ಒಟ್ಟುಗೂಡಿಸಿದ ತೀರ್ಥಹಳ್ಳಿ ಪೊಲೀಸ್ ಗಣಪತಿ ವಿಸರ್ಜನೆ” “ಮೆರವಣಿಗೆಯಲ್ಲಿ ಸಿಬ್ಬಂದಿಗಳೊಂದಿಗೆ ಕುಣಿದು ಕುಪ್ಪಳಿಸಿದ ಸಿಪಿಐ ಇಮ್ರಾನ್ ಬೇಗ್ – ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ತೀರ್ಥಹಳ್ಳಿ” ತೀರ್ಥಹಳ್ಳಿ : ಗಣಪತಿ ಹಬ್ಬ ಎಂದರೆ ಸದಾ ಸೌಹಾರ್ದ, ಸಂತೋಷ, ಏಕತೆ ತುಂಬಿದ ಹಬ್ಬ. ಸಾಮಾನ್ಯವಾಗಿ ವಿಸರ್ಜನೆ ವೇಳೆ ಪೊಲೀಸರು ಶಿಸ್ತಿಗಾಗಿ ಬೈಯುತ್ತಾರೆ, ನಿಯಮ ಪಾಲನೆಗೆ ಕಠಿಣವಾಗುತ್ತಾರೆ ಎಂಬ ಮಾತು ಕೇಳಿ ಬರುತ್ತದೆ. ಆದರೆ ತೀರ್ಥಹಳ್ಳಿಯ ಪೊಲೀಸರು ಈ ಬಾರಿ ತಮ್ಮ ಕಾರ್ಯ ಶೈಲಿಯಿಂದ ಜನಮನ…