ಅನೈತಿಕ ಚಟುವಟಿಕೆಯ ತಾಣವಾಗಿರುವ ಹೊಸನಗರ ಪರಿವೀಕ್ಷಣಾ ಮಂದಿರ (ಐಬಿ) : ಸಂಜೆಯಾಗುತಿದ್ದಂತೆ ಕುಡುಕರದ್ದೇ ದರ್ಬಾರ್ ಇಲ್ಲಿ!!!!!!!!

ಹೊಸನಗರ : ಪಟ್ಟಣದ ಪರಿವೀಕ್ಷಣಾ ಮಂದಿರ (ಐಬಿ) ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ನೆಚ್ಚಿನ ತಾಣವಾಗಿದೆ ಹಾಗೆ ಇಲ್ಲಿರುವ ಪ್ರವಾಸಿ ಮಂದಿರವು ರಾತ್ರಿ ಸಮಯದಲ್ಲಿ ಭೂತ ಬಂಗಲೆಯಂತೆ ಕಾಣುವ ಎಲ್ಲಾ ರೀತಿಯ ವಾತಾವರಣವು ನಿರ್ಮಾಣವಾಗಿದೆ.  ಹೌದು ಹೊಸನಗರ ತಾಲ್ಲೂಕಿನ ಆಸುಪಾಸಿನ ಹುಂಚದ ಪದ್ಮಾವತಿ ದೇವಸ್ಥಾನ, ರಾಮಚಂದ್ರಾಪುರ ಮಠ, ಕಾರಣಗಿರಿ(ಕಾರ್ಗಡಿ)ಯ ಗಣಪತಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹೀಗೆ ವಿವಿಧ ದೇವಾಲಯಗಳನ್ನು ವೀಕ್ಷಿಸಲು ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ಭಕ್ತರು ಹೊಸನಗರ ತಾಲ್ಲೂಕಿನ ಕೊಡಚಾದ್ರಿ…

Read More

ಹುಂಚಾದಲ್ಲಿ ನಡೆದ ಬಾಲ್ಯ ವಿವಾಹ : ಅರ್ಚಕ,ಫೋಟೋಗ್ರಾಫರ್ ಸೇರಿದಂತೆ ಎಲ್ಲಾರ ಮೇಲೂ ದಾಖಲಾಯಿತು ಕೇಸ್

ಇತ್ತೀಚೆಗೆ ರಿಪ್ಪನ್‌ಪೇಟೆ ಸಮೀಪದ ಹುಂಚಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದ ಬಾಲ್ಯವಿವಾಹದ ವಿರುದ್ಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.  ಮದುವೆ ಗಂಡು ವಯಸ್ಕನಾಗಿದ್ದು ಮದುವೆ ಹೆಣ್ಣು ಅಪ್ರಾಪ್ತ ವಯಸ್ಸಿನವಳಾಗಿದ್ದಳು.ಈಗ ವಧುವರ, ಮದುವೆ ಮಾಡಿಸಿದ್ದ ಅರ್ಚಕ, ಆಹ್ವಾನ ಪತ್ರಿಕೆ ಮುದ್ರಿಸಿದ ವ್ಯಕ್ತಿ, ಫೋಟೋಗ್ರಾಫರ್, ವಧು ವರರ ಪೋಷಕರ ವಿರುದ್ಧ ದೂರು ದಾಖಲಾಗಿದೆ. ಆನಗದ್ದೆ ಗ್ರಾಮದ ಯಲ್ಲದೋಣೆಯ ರಮೇಶ್ ಎಂಬುವವನು ಬಳ್ಳಾರಿ ತಾಲೂಕಿನ ಕೂಡ್ಲಿಗಿ ಗ್ರಾಮದ‌ ಅಪ್ರಾಪ್ತೆ ಬಾಲಕಿಯನ್ನ ಮಾ.28 ರಂದು ಮದುವೆಯಾಗಿರುತ್ತಾನೆ.  ಈ ಬಗ್ಗೆ ಬಂದ ದೂರು…

Read More

ಶಿವಮೊಗ್ಗ ಜಿಲ್ಲೆಗೆ ಮತ್ತೆ ವಕ್ಕರಿಸಿದ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!!!!!!

ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಯಲ್ಲಮ್ಮ ಗುಡ್ಡದಲ್ಲಿ ಮಹಿಳೆಯೊಬ್ಬರಿಗೆ ಕ್ಯಾಸನೂರು ಅರಣ್ಯ ಕಾಯಿಲೆಯ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಯಲ್ಲಮ್ಮ ಗುಡ್ಡದ ನಿವಾಸಿ ಸೀಮಾ ಬಾನು ಅವರಿಗೆ ತಲೆನೋವು, ಜ್ವರ, ಶೀತ, ನೆಗಡಿ, ಕೆಮ್ಮು, ಕಣ್ಣು ನೋವು ಕಾಣಿಸಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಕೆಎಫ್‌ಡಿ ಸೋಂಕು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾರ್ಗಲ್ ಆಸ್ಪತ್ರೆಗೆ ಸೀಮಾ ಬಾನು ಚಿಕಿತ್ಸೆಗೆ ಬಂದಾಗ ಶುಶ್ರೂಷಕಿಯರು ಜಿಲ್ಲಾ ವೈರಾಣು ಪರೀಕ್ಷಾ ಕೇಂದ್ರಕ್ಕೆ ಅವರ…

Read More

ಹೊಸನಗರ ಸಮೀಪ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ದರೋಡೆಕೋರರು!!!! : ದರೋಡೆ ಹಿಂದೆ ಇದೀಯಾ ಐಪಿಎಲ್ ಬೆಟ್ಟಿಂಗ್ ನಂಟು?????

ಹೊಸನಗರ ಸಮೀಪದ ಮಾವಿನಕೊಪ್ಪ – ಹೊಸನಗರ ರಸ್ತೆಯಲ್ಲಿ ಮೊನ್ನೆ ರಾತ್ರಿ ಮನೆಗೆ ಮೂವರು ದರೋಡೆಕೋರರು ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಬಗ್ಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಂತ್ ಎಂಬ ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಹೊಸನಗರದ ಮಾವಿನಕೊಪ್ಪ ಮತ್ತು ಸಾಗರ ರಸ್ತೆಯಲ್ಲಿರುವ ತಂದೆಯ ಮನೆಗೆ ಬಂದಿದ್ದಾನೆ. ಮೊನ್ನೆ ಕಾರ್ಯಕ್ರಮವೊಂದಕ್ಕೆ ಸುಮಂತ್ ನ ತಂದೆ ತಾಯಿ ಉಡುಪಿ ಜಿಲ್ಲೆಯ ಅಮಾವಾಸೆ ಬೈಲ್  ತೆರಳಿದ ವೇಳೆ ಕಳ್ಳತನದ ಘಟನೆ ನಡೆದಿದೆ ಎಂದು ಹೊಸನಗರ ಪೊಲೀಸ್…

Read More

ಹೊಸನಗರ ವಿಧಾನ ಸಭಾ ಕ್ಷೇತ್ರ ಮರಳಿ ಪಡೆಯುವ ಹೋರಾಟದ ಪೂರ್ವಭಾವಿ ಸಭೆ : ಹೋರಾಟಕ್ಕೆ ನಿಟ್ಟೂರು ಶ್ರೀಗಳ ಸಾರಥ್ಯ !!!!!

ಹೊಸನಗರ ವಿಧಾನಸಭಾಕ್ಷೇತ್ರ ಹೋರಾಟದ ಕೂಗು ಸಂಘಟನೆಯೇ ಶಕ್ತಿ ಎಂಬ ದ್ಯೇಯದೊಂದಿಗೆ ಮುಂದಿನ ಹೋರಾಟದ ರೂಪುರೇಷೆ ಸಭೆ ನಡೆಯಿತು. ಸಂಘಟನೆಯೇ ಮೂಲಶಕ್ತಿ ಎಂಬ ಯೋಜನೆ ಮುಖಾಂತರ ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ  ಹೋರಾಟದ ಪೂರ್ವಭಾವಿ ರೂಪುರೇಷಗಳನ್ನು ಚರ್ಚಿಸುವುದಕ್ಕಾಗಿ ಇಂದು ಸರ್ವಧರ್ಮದ ಪ್ರಮುಖರು, ಸರ್ವ ಪಕ್ಷದ ಪ್ರಮುಖರು ಹಾಗೂ ಹೊಸನಗರ ತಾಲೂಕಿನ ನಾಗರಿಕರು ಉಪಸ್ಥಿತರಿದ್ದರು. ಈ ಸಭೆಯ ಉದ್ದೇಶ ಸಂಘಟನೆ ಮತ್ತು ಹೋರಾಟದ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಬೇಕಾದಂತಹ ಯೋಜನೆಯನ್ನು ರೂಪಿಸುವುದಾಗಿತ್ತು ಅದರಂತೆ ಉಪಸ್ಥಿತರಿದ್ದ ಮುಖಂಡರುಗಳು…

Read More

ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಗೃಹಸಚಿವರು ಹೇಳಿಕೆ ನೀಡುತ್ತಿದ್ದಾರೆ : ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ

 ಗೃಹಸಚಿವ ಆರಗ ಜ್ಞಾನೇಂದ್ರರವರು ಚಂದ್ರು ಹತ್ಯೆಯ ಹೇಳಿಕೆಗೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನೆಡೆಸುತ್ತಿದ್ದು ಇಂದು ಶಿವಮೊಗ್ಗದಲ್ಲಿ ಬೇಳೂರು  ಗೋಪಾಲಕೃಷ್ಣ ಆರಗ ವಿರುದ್ಧ ವಾಗ್ದಾಳಿ ನೆಡೆಸಿದರು.  ಆರಗ ಮಾತನಾಡುವ ರೀತಿ ನೋಡಿದರೆ ಸಣ್ಣ ಮಕ್ಕಳು ಸಹ ಆ ರೀತಿ ಮಾತನಾಡುವುದಿಲ್ಲ. ಆರಗ ತಮ್ಮ ನೇತೃತ್ವದಲ್ಲಿ ಇರುವ ಅಧಿಕಾರಿಗಳ ಮಾಹಿತಿ ತೆಗೆದುಕೊಳ್ಳದೆ ಆರ್ ಎಸ್ ಎಸ್ ನಿಂದ ಮಾಹಿತಿ ಪಡೆದು ಹೇಳಿಕೆ ನೀಡಿದ್ದಾರೆ.  ರಾಜ್ಯದಲ್ಲಿ ಕೋಮು ಪ್ರಚೋದನೆಗೆ ಗೃಹಸಚಿವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.  ಯಾವ ವ್ಯಕ್ತಿ ಸತ್ತರು…

Read More

ಅಪರಿಚಿತ ಕಾಮುಕನ ದಾಹಕ್ಕೆ ಯುವತಿ ಬಲಿ :

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಬೆತ್ತಲೆ ವಿಡಿಯೋವನ್ನ ಪಡೆದು ಬ್ಲಾಕ್ ಮೇಲ್ ಗೆ ಮುಂದಾಗಿದ್ದ ಕಾಮುಕನ ದಾಹಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಶಿರಾಳಕೊಪ್ಪದ ತೊಗರ್ಸಿ ಗ್ರಾಮದ 23 ವರ್ಷದ ಯವತಿಯೊಬ್ಬಳು ಬಿಎ ಪದವಿಧರೆ. ಮನೆಯಲ್ಲಿಯೇ ಇದ್ದ ಯುವತಿಯ ಬಳಿ ಆಂಡ್ರಯ್ಡ್ ಮೊಬೈಲ್ ಹೊಂದಿದ್ದಳು.ಇನ್ ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿದ್ದ ಯುವತಿಗೆ ಪದೇ ಪದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆತ್ತೆಲೆ ವಿಡಿಯೋ ಹಾಕದಿದ್ದರೆ ನಿನ್ನ ಫೋಟೊ ಎಡಿಟ್ ಮಾಡಿ ಬೆತ್ತಲೆಯಾಗಿ ರಚಿಸಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಈ ಬೆದರಿಕೆಗೆ ಬೆಚ್ಚಿಬಿದ್ದ…

Read More

ಬಟ್ಟೆಮಲ್ಲಪ್ಪ ಸಮೀಪದಲ್ಲಿ ಸಾಲಕ್ಕೆ ಹೆದರಿ ವಿಷ ಸೇವಿಸಿ ರೈತ ಆತ್ಮಹತ್ಯೆ :

ಹೊಸನಗರ: ತಾಲೂಕಿನ ಮಂಡ್ರಿ ಗ್ರಾಮದ ರೈತರೊಬ್ಬರು ಸಾಲಬಾಧೆಯಿಂದ ವಿಷ ಸೇವಿಸಿ ಮೃತಪಟ್ಟಿದ್ದಾರೆ. ನಾಗರಾಜ್(58) ಮೃತ ರೈತ. ಇವರು ಮನೆಯ ಸಮೀಪದ ಕಾಡಿನಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅಸ್ವಸ್ಥಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಜಮೀನು ಅಭಿವೃದ್ಧಿಗೋಸ್ಕರ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರು.  ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ : ಯುವ ಕಾಂಗ್ರೆಸ್ ವತಿಯಿಂದ ಗೃಹ ಸಚಿವರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು :

ತೀರ್ಥಹಳ್ಳಿ : ರಾಜ್ಯ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಈ ಕಾರಣಕ್ಕೆ ಆದಷ್ಟು ಬೇಗ ರಾಜೀನಾಮೆ ಕೊಟ್ಟು ತೀರ್ಥಹಳ್ಳಿಯ ಗೌರವ ಕಾಪಾಡಿ ಎಂದು ಇಂದು ತೀರ್ಥಹಳ್ಳಿಯ ತಾಲೂಕು ಕಛೇರಿ ಮುಂಭಾಗ ನೆಡದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್ ವಾಗ್ದಾಳಿ ನೆಡೆಸಿದರು.  ಅವರೊಬ್ಬ ರಾಜ್ಯದ ಗೃಹಸಚಿವ, ರಾಜ್ಯದಲ್ಲಿ  ಶಾಂತಿ ಕಾಪಾಡುವಂತೆ ಮಾಡುವ ಕೆಲಸ ಅವರದ್ದು  ಯಾವುದೇ ಕೇಸ್ ಗೆ ಸಂಬಂಧಪಟ್ಟ ವಿಷಯವಾದರೂ ತನಿಖೆ ನೆಡೆಯುವದರೊಳಗೆ ಹೇಳಿಕೆ ನೀಡಬಾರದು. ಆದರೆ ಗೃಹಸಚಿವರು ವಿಷಯ…

Read More

ಹೊಳೆಬಾಗಿಲು ಸಮೀಪ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು :

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದಲ್ಲಿ  ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ವೇಳೆಗೆ ಯಲ್ಲಪ್ಪ ( 55 ) ಮೀನು ಹಿಡಿಯಲು ಕಣಿಕೆ ಗ್ರಾಮದ ಶರಾವತಿ ಹಿನ್ನೀರಿಗೆ ತೆರಳಿದ್ದಾರೆ.ದುರದೃಷ್ಟವಶಾತ್ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಬಿದ್ದಿದ್ದರಿಂದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕಣಿಕೆ ಗ್ರಾಮದ ಬಳಿ ಶವ ತೇಲಿ ಬಂದಿದೆ. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ…

Read More