Headlines

ರಿಪ್ಪನ್ ಪೇಟೆಯ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಕೊರೊನಾ ಸೋಂಕು ನಿವಾರಣೆಗಾಗಿ ಶ್ರೀ ಸತ್ಯನಾರಾಯಣ ಪೂಜೆ.

ರಿಪ್ಪನ್ ಪೇಟೆ: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಸೋಂಕು ನಿವಾರಣೆಯಾಗಿ ದೇಶದ ಜನತೆ ಉತ್ತಮ ಆರೋಗ್ಯವನ್ನು ಹೊಂದಲಿ ಎಂದು ಪಟ್ಟಣದ ಕಾಲಭೈರವೇಶ್ವರ  ಮಹಿಳಾ ಒಕ್ಕಲಿಗರ ಸಂಘದ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು  ಸರಳವಾಗಿ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಕಾಲಭೈರವೇಶ್ವರ ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷ ಅಧ್ಯಕ್ಷೆ ವಾಣಿ ಗೋವಿಂದಪ್ಪ ಗೌಡ ಮಾಧ್ಯಮದವರೊಂದಿಗೆ ಮಾತನಾಡಿ ಕೋವಿಡ್ 19 ರ ಕಾರಣದಿಂದ ದೇಶದಲ್ಲಿ ಕೋಟ್ಯಂತರ ಜನರು ಸೋಂಕಿನಿಂದ ಬಳಲುವಂತಾ ಯಿತು. ಹಾಗೆಯೇ ಲಕ್ಷಾಂತರ ಜನರು ಮರಣವನ್ನು ಹೊಂದಿದರು….

Read More

ಅನಾರೋಗ್ಯ ಹಿನ್ನಲೆ : SSLC ವಿದ್ಯಾರ್ಥಿನಿ ಆತ್ಮಹತ್ಯೆ

ಹೊಸನಗರ ಪಟ್ಟಣದ ಮಾರಿಗುಡ್ಡದಲ್ಲಿ ಮನೆಯೊಂದರಲ್ಲಿ ವಾಸವಾಗಿರುವ ತಾಲೂಕಿನ ಅರೋಡಿ ಕೊಡಸೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ರವರ ಪುತ್ರಿ ಶಮಾ ಎಲ್ ಬಂಡಿ (15) ತನ್ನ ತಾಯಿಯನ್ನು ಮಾರ್ನಿಂಗ್ ಕ್ಲಾಸ್ ಡ್ಯೂಟಿಗೆ ಕಳುಹಿಸಿ ಮನೆಗೆ ಬಂದು ನೇಣಿಗೆ ಶರಣಾದ ದುರಂತ ಘಟನೆ ಇಂದು ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಶಮಾ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು ಕಳೆದ ಕೆಲ ಸಮಯದಿಂದ ಆಕೆ ಅನಾರೋಗ್ಯ ಪೀಡಿತಳಾಗಿದ್ದಳು ಎಂದು ತಿಳಿದುಬಂದಿದೆ. ಮೃತ ವಿದ್ಯಾರ್ಥಿನಿಯ…

Read More

ಪ್ರಕಾಶ್ ಬಸ್ ನ ಮಾಲೀಕರ ಮೊಬೈಲ್ ಹಾಗೂ ಕಾರು ಪಟಗುಪ್ಪ ಸೇತುವೆ ಬಳಿ ಪತ್ತೆ : ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟ ಬಸ್ ಮಾಲೀಕನ ನಡೆ

ಹೊಸನಗರ ಸಮೀಪದ ಪಟಗುಪ್ಪೆ ಸೇತುವೆಯ ಬಳಿ ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರ ಕಾರು ಹಾಗೂ ಮೊಬೈಲ್ ಪತ್ತೆಯಾಗಿರುವುದು ಹಲವು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಸಾಗರದ ಪ್ರಕಾಶ್ ಬಸ್ ನ ಮಾಲೀಕರಾದ ಪ್ರಕಾಶ್ ರವರು ಶುಕ್ರವಾರ ಸಂಜೆಯಿಂದಲೇ ಮನೆಯಿಂದ ನಾಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಟಗುಪ್ಪ ಸೇತುವೆಯ ಬಳಿ ನೂರಾರು ಜನರು ಸೇರಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಜರಿದ್ದು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಹೊಸನಗರ ಪೋಲೀಸರು ಸ್ಥಳಕ್ಕಾಗಮಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Read More

ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟ 5 ವರ್ಷದ ಪುಟ್ಟ ಮಗು :

ಕುಂಸಿ : ಟ್ರಾಕ್ಟರ್ ಚಾಲಕನ ಅಜಾಗರುಕತೆಯಿಂದ 5 ವರ್ಷದ ಪುಟ್ಟ ಮಗುವು ತನ್ನ ಪೋಷಕರ ಎದುರೇ ಪ್ರಾಣ ಬಿಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ ತಾಲ್ಲೂಕಿನ ಮಾಸನಕಟ್ಟೆ ಗ್ರಾಮದಿಂದ ರಸ್ತೆ ಕಾಮಗಾರಿಗೆ ಇಮಾಮ್ ಸಾಬ್ ಕುಟುಂಬ ಕೆಲಸಕ್ಕೆಂದು ಆಯನೂರಿನ ಕುಂಸಿಯ ರೇಚಿಕೊಪ್ಪ ಗ್ರಾಮಕ್ಕೆ ಬಂದಿತ್ತು. ನಿನ್ನೆ ಮಧ್ಯಾಹ್ನ ಮಗುವನ್ನು ಜಮೀನಿನ ಪಕ್ಕದಲ್ಲಿ ಮಲಗಿಸಿ ಪೋಷಕರು ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡುತ್ತಿದ್ದರು. ಮಗುವಿಗೆ ಬಿಸಿಲು ಆಗಬಾರದೆಂಬ ಉದ್ದೇಶದಿಂದ ಮಗುವಿನ ಮೇಲೆ ಟುವೆಲ್  ಹಾಸಲಾಗಿತ್ತು ಅದೇ…

Read More

ರೈತ ಪರ ಹೋರಾಟಗಾರ ಕೆ ಸಿ ವೀರಭದ್ರಪ್ಪ ಗೌಡ ಕಗ್ಗಲಿ ನಿಧನ :

ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಗ್ಗಲಿ ಗ್ರಾಮದ ಹಿರಿಯರು,ರೈತ ಹೋರಾಟಗಾರರಾದ ಕೆ ಸಿ ವೀರಭದ್ರಪ್ಪ ಗೌಡ (88) ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.  ಮೃತರು 8 ಜನ ಮಕ್ಕಳು,12 ಜನ ಮೊಮ್ಮಕ್ಕಳು ,7 ಜನ ಮರಿ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರು ರೈತ ಪರ ಸಂಘಟನೆಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.ರೈತ ಪರ ಹೋರಾಟದಲ್ಲಿ ಇವರು ಬಳ್ಳಾರಿಯಲ್ಲಿ 21 ದಿನ ಜೈಲು ವಾಸ ಅನುಭವಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 2 ಗಂಟೆಗೆ ಕಗ್ಗಲಿ…

Read More

ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆಯ ಫೋಟೋ ತೆಗೆದಿದ್ದಕ್ಕೆ ಪತ್ರಕರ್ತನಿಗೆ ಟಾರ್ಚರ್ : ಕಣ್ಮುಚ್ಚಿ ಕುಳಿತಿವೆ ಸಂಬಂಧಪಟ್ಟ ಇಲಾಖೆಗಳು

ತೀರ್ಥಹಳ್ಳಿಯ ಹಿರಿಯ ಪತ್ರಕರ್ತ ಲಿಯೋ ಅರೋಜರವರನ್ನು ತೀರ್ಥಹಳ್ಳಿಯ ಪ್ರತಿಷ್ಠಿತ ಸಮಾಜದ ಮುಖಂಡರೆಲ್ಲಾ ಸೇರಿ ಕುಶಾವತಿ ಸೇತುವೆ ಬಳಿ ಸುಮಾರು ನಾಲ್ಕುಗಂಟೆಯ ವರೆಗೆ ಕೂರಿಸಿಕೊಂಡು ಮಾನಸಿಕ ಹಿಂಸೆ ನೀಡಿರುವ ಘಟನೆ ನಡೆದಿದೆ. ಗೃಹ ಸಚಿವರ ಕ್ಷೇತ್ರದಲ್ಲಿ ಪತ್ರಕರ್ತನೋರ್ವನಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಸಜ್ಜನರ ನಾಡಾಗಿದ್ದ ತೀರ್ಥಹಳ್ಳಿ ಮರಳು ಮಾಫಿಯಾದ ಗೂಂಡಾರಾಜ್ಯವಾಗಿ ನಿರ್ಮಾಣವಾಗಿ ಬಿಟ್ಟಿತೇ ಎಂಬ ಆತಂಕ ಎದುರಾಗಿದೆ. ಯಾವುದೇ ನದಿ ಸೇತುವೆಗಳ ಕೆಳಗಡೆ ಮರಳು ತೆಗೆಯದಂತೆ ಸುಪ್ರೀಕೋರ್ಟ್ ಆದೇಶವಿದೆ. ಆದರೆ ಕುಶಾವತಿ ಸೇತುವೆ ಕೆಳಗೆ ತೀರ್ಥಹಳ್ಳಿಯ ಪ್ರತಿಷ್ಠಿತ…

Read More

ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಮೊಬೈಲ್ ನಲ್ಲಿ ಚಿತ್ರಿಕರಿಸಿ ಹರಿಬಿಟ್ಟಿದ್ದ ಆರೋಪಿಗಳ ಬಂಧನ

ಕಾಲೇಜು ಮುಗಿಸಿ ಮನೆಗೆ ಹೊರಟ್ಟಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ನಡೆಸಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿ ವಾಟ್ಸಾಪ್‌ನಲ್ಲಿ ಹರಿಬಿಟ್ಟಿದ್ದ ಆರೋಪಿಗಳನ್ನು ಹೊಸನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯು ಜ.15 ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು…

Read More

ರಿಪ್ಪನ್ ಪೇಟೆ ಆಸ್ಪತ್ರೆಯ ಒತ್ತುವರಿ ಜಾಗ ತೆರವು : ಗ್ರಾಮಾಡಳಿತಕ್ಕೆ ಸಂದ ಜಯ..!!!

ರಿಪ್ಪನ್ ಪೇಟೆ : ಇಲ್ಲಿನ ಗವಟೂರಿನಲ್ಲಿ ಈ ಭಾಗದ ಬಹುದಿನಗಳ ಕನಸಿನ ಸಮುದಾಯ ಆಸ್ಪತ್ರೆಗೆ ಮೀಸಲಿಟ್ಟಿದ್ದ ಐದು ಎಕರೆ ಜಾಗವನ್ನು ಕೆಲ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದನ್ನು ಇಂದು ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. ಮಾಜಿ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪನವರು ರಿಪ್ಪನ್ ಪೇಟೆಯ ಸಾರ್ವಜನಿಕರ ಬೇಡಿಕೆಯಂತೆ ಗವಟೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿಯನ್ನು ಸಮುದಾಯ ಆಸ್ಪತ್ರೆಗಾಗಿ ಮಂಜೂರು ಮಾಡಿಸಿದ್ದರು. ಆ ಜಾಗವನ್ನು ಪೋಡಿ ದುರಸ್ಥಿಗೊಳಿಸುವ ಮುನ್ನವೇ ಇಲ್ಲಿನ ಕೆಲವು ಖಾಸಗಿ ವ್ಯಕ್ತಿಗಳು ಆ ಜಾಗವನ್ನು…

Read More

ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ : ನೈಟ್ ಕರ್ಫ಼್ಯೂ ಮುಂದುವರಿಕೆ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು(Weekend Curfew)  ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಮಾಡಿದ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದ್ದು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಅಧಿಕೃತ ಘೋಷಣೆ ಮಾಡಿದೆ. ಅದರೊಂದಿಗೆ ಈ ವಾರದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ನೈಟ್ ಕರ್ಫ್ಯೂಅಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೈಟ್ ಕರ್ಫ್ಯೂಅನ್ನು(Night Curfew) ಮುಂದುವರಿಸುವಂತೆ ತಜ್ಞರು ಸಲಹೆ ನೀಡಿದ್ದರೂ, ರಾಜ್ಯ ಸರ್ಕಾರ (Karnataka government) ಇದರಲ್ಲಿ ಕೊಂಚ ಬದಲಾವಣೆ ಮಾಡಿದೆ. ಇದರ ಪ್ರಕಾರ ರಾತ್ರಿ 10…

Read More

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ !!

ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ… ಭಾನುವಾರ ಮತ್ತು ಸೋಮವಾರ ಜ್ವರ ಹಾಗೂ ಕಫ ಇದ್ದ ಕಾರಣ  ಮಂಗಳವಾರ ಕೋವಿಡ್ ಟೆಸ್ಟ್ ಮಾಡಿಸಿಲಾಗಿತ್ತು  ಇವತ್ತು  ವರದಿ ಬಂದಿದ್ದು  ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವರ ಸಂಪರ್ಕದಲ್ಲಿದ್ದವರು ಕೂಡಲೇ ಆರೋಗ್ಯ ತಪಾಸಣೆಗೆ  ಒಳಗಾಗಿ ಹಾಗೂ ಅವರ ಆರೋಗ್ಯ ವಿಚಾರಿಸಲು ಯಾರೂ ಮನೆಯ ಬಳಿ ಬರಬಾರದೆಂದು ಅವರ ಪುತ್ರಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಡಾ !! ರಾಜನಂದಿನಿ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಫೇಸ್ಬುಕ್ ನಲ್ಲಿ…

Read More