ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ,ಜನರ ಪರದಾಟ…!

ರಿಪ್ಪನ್ ಪೇಟೆ :: ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ಒಂದು ವಾರಗಳಿಂದ ಪಡಿತರ ಪಡೆಯಲು ಸಾಧ್ಯವಾಗದೇ ಕಾರ್ಡುದಾರರು ಪರದಾಡುತ್ತಿದ್ದಾರೆ.ನ್ಯಾಯಬೆಲೆ ಅಂಗಡಿ ಮುಂದೆ ದಿನವಿಡೀ ಕಾದರೂ ಪಡಿತರ ಸಿಗದೇ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.  ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ತಡೆಯಲು ಲೆಡ್ಜರ್ ವಿತರಣಾ ವ್ಯವಸ್ಥೆ ಬದಲಾಗಿ  ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡುದಾರರ ಹೆಬ್ಬೆರಳ ಗುರುತು ಪತ್ತೆ ಮಾಡಿ ಆಹಾರ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಮೇಲೆ ಒತ್ತಡ ಬಿದ್ದು ಪದೇ…

Read More

ಮಾನವೀಯತೆ ಮರೆತಿದ್ದಾರೆ ಸಾಗರದ ಶಾಸಕರು: ಬೇಳೂರು ಗೋಪಾಲಕೃಷ್ಣ

ಆನಂದಪುರ:ಕಿಟ್ ಹಾಗೂ ಕೊರೊನಾ ಲಸಿಕೆ ನೀಡುವಲ್ಲಿ  ಸಾರ್ವಜನಿಕರಿಗೆ ವಂಚಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ರವರು ಶಾಸಕ ಹರತಾಳು ಹಾಲಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಗರ ತಾಲೂಕಿನ ಆನಂದಪುರದಲ್ಲಿ ಕಿಟ್ ನೀಡುವ ಸಭೆಯಲ್ಲಿ ಭಾಗವಹಿಸಿದಂತಹ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಸಾಗರದ ಶಾಸಕರು ಇದೀಗ ಮಾನವೀಯತೆಯನ್ನು ಮರೆತಿದ್ದಾರೆ ಕೇವಲ ತಮ್ಮ ಕಾರ್ಯಕರ್ತರಿಗೆ ಕಿಟ್ಟನ್ನು ನೀಡುವಲ್ಲಿ ಹಾಗೂ ಕೊರೋನಾ ಲಸಿಕೆ ಕೊಡಿಸುವತ್ತ ಗಮನ ಹರಿಸುತ್ತಿದ್ದಾರೆ ಇನ್ನುಳಿದ ಜನರು…

Read More

ಗಬ್ಬು ನಾರುತ್ತಿದೆ ರಿಪ್ಪನ್ ಪೇಟೆಯ ಸಾರ್ವಜನಿಕ ಶೌಚಾಲಯ:

ರಿಪ್ಪನ್ ಪೇಟೆ: ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಸುತ್ತ ಮುತ್ತ ನೂರಾರು ಹಳ್ಳಿಗಳ  ಕೇಂದ್ರಬಿಂದುವಾಗಿರುವ ರಿಪ್ಪನ್ ಪೇಟೆ ಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ ಸರಿಯಾದ ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದ್ದು,ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.  …

Read More

ಸಾಗರದ ಬಳಿ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆ:

ಸಾಗರ: ಇಲ್ಲಿನ ಗುಡ್ಡೆಕೌತಿ ಬಳಿ ಹತ್ತಿರ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ನಿನ್ನೆ ಮಧ್ಯಾಹ್ನದ ವೇಳೆ ತಲೆಕೊಟ್ಟು ಮೃತ ಪಟ್ಟಿದ ವ್ಯಕ್ತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೋಕ್ ನ ನಾಗನೂರು ಬಸವರಾಜ್ (36) ಎಂದು ಗುರುತು ಪತ್ತೆಮಾಡಿ, ಸಾಗರದ ರೈಲ್ವೆ ಪೋಲೀಸರು ಆತನ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾರೆ. ಮೃತ ಬಸವರಾಜ್ ಅವರು ಸಾಗರ ದ ಬಿ ಹೆಚ್ ರಸ್ತೆ ಯಲ್ಲಿ ನಂದಿನಿ ಹಾಲಿನ ಬೂತ್ ನಡೆಸುತಿದ್ದರು.ರೈಲಿಗೆ ಸಿಲುಕಿ ಸಾವನಪ್ಪಲು ಕಾರಣ ಏನು ಎಂಬುದನ್ನು ಪೊಲೀಸ್ ರು ತನಿಖೆ…

Read More

ರಿಪ್ಪನ್ ಪೇಟೆಯ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ವ್ಯಕ್ತಿ ಸಾವು:

ರಿಪ್ಪನ್ ಪೇಟೆ:ಇಂದು ಮಧ್ಯಾಹ್ನ ಮೂಗೂಡ್ತಿ ಸಮೀಪ  ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ  ಓರ್ವ ಮಹಿಳೆ ಮೃತ ಪಟ್ಟಿದ್ದರು.ಉಳಿದ ಮೂವರ ಸ್ಥಿತಿ ಗಂಭೀರವಾಗಿತ್ತು, ಇದೀಗ ಶಿವಮೊಗ್ಗದ  ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊರ್ವ ವ್ಯಕ್ತಿ ವಿಜೇಂದ್ರ ಭಂಡಾರಿ (60) ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಜೇಂದ್ರ ಭಂಡಾರಿ (60) ರಿಪ್ಪನ್ ಪೇಟೆಯ ಸಮೀಪದ ದೂನ ಮೂಲದ ನಿವಾಸಿಯಾಗಿದ್ದಾರೆ. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ…

Read More

ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ:

ಸಾಗರ: ಇಲ್ಲಿನ ಗುಡ್ಡೆಕೌತಿ ಸಮೀಪದಲ್ಲಿ ಮೈಸೂರು-ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಮಧ್ಯಾಹ್ನದ ವೇಳೆ ತಲೆಕೊಟ್ಟು ಸುಮಾರು 36 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತನ ವಿಳಾಸ ತಿಳಿದು ಬಂದಿಲ್ಲಾ. ಸಾಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಶೋಕ್ ಕುಮಾರ್  ಮತ್ತು ಗ್ರಾಮಾಂತರ ಇನ್ಸ್ಪೆಕ್ಟರ್ ಗಿರೀಶ್ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮಾಹಿತಿ: ಇಮ್ರಾನ್ ಸಾಗರ್

Read More

ವಾಣಿಜ್ಯ ಮಳಿಗೆಗೆ ಆಶ್ರಯ ಯೋಜನೆಯ ಹಣಬಳಕೆ: ಪಿ ಡಿ ಓ ಗೆ ಖಡಕ್ ಸಂದೇಶ ಕೊಟ್ಟ ಕುಮಾರ್ ಬಂಗಾರಪ್ಪ

ಸೊರಬ: ಇಲ್ಲಿನ ಚಂದ್ರಗುತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿಯಲ್ಲಿ ಎರಡು ಬಿಲ್ ಪಡೆದಿರುವ ಮನೆಯಲ್ಲಿ, ಅಬಕಾರಿ ಇಲಾಖೆಯ ಅಧಿಕೃತವಾದ ಲಿಕ್ಕರ್ ಶಾಪನ್ನು ಗ್ರಾಮ ಪಂಚಾಯ್ತಿಯ NOC ಪಡೆಯದೇ,ಯಾವುದೇ ಮಾಹಿತಿಯನ್ನು ನೀಡದೇ, ಪ್ರಾರಂಭ ಮಾಡಲಾಗಿದೆ. ಈ ಬಗ್ಗೆ ಸಾರ್ವಜನಿಕರ ದೂರಿನನ್ವಯ ಸರ್ಕಾರದ ಆದೇಶದ ಪ್ರಕಾರ, ಗ್ರಾಮ ಪಂಚಾಯತ್ ಪಂಚಾಯತ್ ACT ಪ್ರಕಾರ ಶಾಪ್ ನ್ನು ಮುಚ್ಚಿಸಲು ಹಾಗೂ ಬಡವರಿಗೆ ನೀಡಿದ ಮನೆಯನ್ನು ವಾಣಿಜ್ಯ ಮಳಿಗೆಗೆ ಬಳಸಿದ ಹಿನ್ನಲೆಯಲ್ಲಿ ಮನೆ ಫಲಾನುಭವಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ…

Read More

ರಿಪ್ಪನ್ ಪೇಟೆಯಲ್ಲಿ ಭೀಕರ ಅಪಘಾತ: ಮಹಿಳೆ ಸಾವು

ರಿಪ್ಪನ್ ಪೇಟೆ: ಸಮೀಪ  ವರನಹೊಂಡ ಎಂಬಲ್ಲಿ ಭೀಕರ ಅಪಘಾತ.ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಸುಮೋ ಕಾರ್ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒರ್ವ ಮಹಿಳೆ ಸಾವನ್ನಪ್ಪಿದ್ದಾರೆ.ಉಳಿದ ಮೂವರ ಸ್ಥಿತಿ ಗಂಭೀರ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು.ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಟಾಟಾ ಸುಮೊ ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆ ಗೆ ಆಗಮಿಸುತ್ತಿತ್ತು.ಮೃತ ಮಹಿಳೆ ನೀಲಮ್ಮ (60) ಎಂದು ಹೇಳಲಾಗುತ್ತಿದೆ.ಚಾಲಕ ಕೌಶಿಕ್ ಎನ್ನಲಾಗುತ್ತಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ರಿಪ್ಪನ್ ಪೇಟೆ…

Read More

ಡಿ ಬಾಸ್ ಅಂಡ್ ಗ್ಯಾಂಗ್ ಮಾಡಿದ ದೌರ್ಜನ್ಯಕ್ಕೆ ವೇಟರ್ ಹೆಂಡತಿ ಪೊರಕೆ ಹಿಡಿದು ನಿಂತಿದ್ದಳು : ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು: ನಟ ದರ್ಶನ್​ರವರ ಲೋನ್ ಗೆ ಜಾಮೀನು ಕೇಸ್​ನಲ್ಲಿ ಸಿನಿಮಾ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಎಂಟ್ರಿಯಾಗಿದ್ದು, ಮೈಸೂರು ನಗರದಲ್ಲಿ ಪೊಲೀಸ್​ ಸ್ಟೇಷನ್​ಗಳು ಸೆಟಲ್​ಮೆಂಟ್​ ಸ್ಟೇಷನ್​ ಆಗಿದೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಗುರುವಾರ ಬೆಳಗ್ಗೆ ಗೃಹ ಸಚಿವ ಬೊಮ್ಮಾಯಿ ಅವರನ್ನು ಭೇಟಿಯಾದ ಇಂದ್ರಜಿತ್​ ಲಂಕೇಶ್​, ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ, ಮೈಸೂರಿನಲ್ಲಿ ನಡೆದಿರೋ ಗಲಾಟೆ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರೋ ದಲಿತನ ಮೇಲಿನ ಹಲ್ಲೆ, ಅಲ್ಲಿನ ಬೆಳವಣಿಗೆ ಕುರಿತು ಮಾಹಿತಿಯನ್ನೊಳಗೊಂಡ…

Read More

ಹಲವು ವರ್ಷಗಳ ಹಿಂದೆಯೇ ಹಕ್ಕುಪತ್ರ ಹೊಂದಿರಬೇಕಾಗಿತ್ತು ತಡವಾಗಿದೆ : ಕುಮಾರ್ ಬಂಗಾರಪ್ಪ

ಸೊರಬ: ಚಂದ್ರಗುತ್ತಿಯ ಯಾತ್ರಿ ನಿವಾಸದಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರ ಅಧ್ಯಕ್ಷತೆಯಲ್ಲಿ ಚಂದ್ರಗುತ್ತಿ ಹೋಬಳಿಗೆ ಸಂಬಂಧಿಸಿದಂತೆ ಬಗರ್ ಹುಕುಂ ಸಮಿತಿ ಪ್ರಗತಿ ಪರಿಶೀಲನಾ ಸಭೆ ನಡಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.  ವಿತರಣೆ ಮಾಡುವ ಸಂಧರ್ಭದಲ್ಲಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಶಾಸಕರು ಅವರ ಅಭಿನಂದನೆಯನ್ನು ಸ್ವೀಕರಿಸಿ ನಿಮ್ಮ ಕೆಲಸ ಮಾಡಿಕೊಡುವುದೇ ನನ್ನ ಕೆಲಸ ಅದನ್ನು ನಾನು ಮಾಡಿದ್ದೇನೆ ನೀವುಗಳು ತುಂಬಾ ವರ್ಷಗಳ ಹಿಂದೆಯೇ ಹಕ್ಕು ಪತ್ರ ಹೊಂದಿರಬೇಕಾಗಿತ್ತು…

Read More