Headlines

ನೊಂದ ಬಡ ಕುಟುಂಬಗಳಿಗೆ ಕಿಟ್ ವಿತರಣೆ:

ರಿಪ್ಪನ್ ಪೇಟೆ: ಇಂದು ಗವಟೂರು ಮೂರನೆ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ನೇತ್ರತ್ವದಲ್ಲಿ ಗವಟೂರು ಗ್ರಾಮದ ಶ್ರೀರಾಮನಗರ,ನೆಹರು ಬಡಾವಣೆ ಮತ್ತು ಮಸೀದಿ ಕಾಲೋನಿಯ ಸುಮಾರು 200 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಕೋವಿಡ್ ನಿಂದ ಕಂಗೆಟ್ಟಿದ್ದ ಕುಟುಂಬಗಳಿಗೆ ಧೈರ್ಯ ತುಂಬಿದರು. ರಿಪ್ಪನ್ ಪೇಟೆ ಗ್ರಾಮಪಂಚಾಯಿತ್ ವತಿಯಿಂದ ಒಂದು ವಾರ್ಡ್ ಗೆ 70 ಕಿಟ್ ಗಳನ್ನು ನೀಡಿದ್ದರೂ ಎಲ್ಲಾ ಸಂತ್ರಸ್ತರಿಗೆ ಕಿಟ್ ತಲುಪಿಸಲು ಸಾಧ್ಯವಾಗದೇ ಇದ್ದದನ್ನು ಮನಗಂಡ ಗವಟೂರು ಮೂರನೇ ವಾರ್ಡಿನ ಸದಸ್ಯರಾದ ಬಿ ಆಸಿಫ಼್ ವೈಯಕ್ತಿಕ…

Read More

ಇಂದಿನಿಂದ ಲಾಕ್ ಡೌನ್ ಸಡಿಲಿಕೆ::

ಬೆಂಗಳೂರು:ಕೊರೊನಾ ಎರಡನೇ ಅಲೆ ರಾಜ್ಯದಲ್ಲಿ ಅಪಾರ ಸಾವು- ನೋವಿಗೆ ಕಾರಣವಾಗಿತ್ತು. ಇದರ ಪರಿಣಾಮ ಎರಡೂವರೆ ತಿಂಗಳು ಕರುನಾಡಿಗೆ ಬೀಗ ಜಡಿಯಲಾಗಿತ್ತು. ಇದೀಗ ಕೋವಿಡ್ ಅರ್ಭಟ ಕ್ರಮೇಣ ಇಳಿಕೆ ನತ್ತ ಸಾಗ್ತಿದೆ. ಹೀಗಾಗಿ ರಾಜ್ಯವನ್ನ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗ್ತಿದೆ. ಈಗಾಗಲೇ ಎರಡು ಹಂತದಲ್ಲಿ ಅನ್ ಲಾಕ್ ಮಾಡಿದ್ದ ಸರ್ಕಾರ ಇಂದಿನಿಂದ ಮೂರನೇ ಹಂತದ ಅನ್ ಲಾಕ್ ಘೋಷಣೆ ಮಾಡಿ ಗೈಡ್ ಲೈನ್ ಸಹ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಇಳಿಕೆ ಬೆನ್ನಲ್ಲೇ…

Read More

ವೀಕೆಂಡ್ ಕರ್ಫ಼್ಯೂ ಇರಲ್ಲ:ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ: ಅನ್ ಲಾಕ್ 3.0 ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊರೊನಾ ಎರಡನೇ ಅಲೆಯ ಬಳಿಕ ಮೂರನೇ ಹಂತದ ಅನ್​ಲಾಕ್​​ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನ್‌ಲಾಕ್‌ 3.O ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಜುಲೈ 5ರ ಮುಂಜಾನೆ 5 ಗಂಟೆಯಿಂದ ಅನ್​ಲಾಕ್ 3.O ಅನ್ವಯವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಅನ್​ಲಾಕ್ ಅನ್ವಯವಾಗಲಿದೆ ಎಂದಿದ್ದಾರೆ. ಮಂಗಳೂರು, ಮೈಸೂರು ಸಹಿತ ಅನ್​ಲಾಕ್ 3.0 ಅನ್ವಯವಾಗಲಿದೆ. ಕೊವಿಡ್ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಸಭೆ ನಡೆಸಿದ್ದಾರೆ. ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ…

Read More

ಆಕಳು ಖರೀದಿಗೆ ಸಹಾಯಧನಕ್ಕಾಗಿ ಆರ್ಜಿ ಆಹ್ವಾನ::

ಶಿವಮೊಗ್ಗ, ಜುಲೈ-03: ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹೈನುಗಾರಿಕೆಗೆ ಯೋಗ್ಯವಾದ ಒಂದು ವರ್ಷ ಮೇಲ್ಪಟ್ಟ ಮತ್ತು ವಿಮೆಗೊಳಪಡಿಸುವ ಸಮಯದಲ್ಲಿ ಗರಿಷ್ಠ 8 ವರ್ಷಗಳಿಗೆ ಮೀರದಂತಹ ಮಣಕ/ಆಕಳು/ಎಮ್ಮೆಗಳಿಗೆ ಒಂದು ವರ್ಷದ/ಮೂರು ವರ್ಷದ ಅವಧಿಗೆ ಮಾರುಕಟ್ಟೆ ಮೌಲ್ಯದ 2%/6% ಪ್ರೀಮಿಯಂ ದರದಲ್ಲಿ ಗರಿಷ್ಠ ರೂ. 70 ಸಾವಿರ ಮೂಲ ಬೆಲೆಯವರೆಗೆ ಕೆಳಕಂಡ ಪ್ರೀಮಿಯಂ ಸಹಾಯಧನದ ದರದಂತೆ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ.   ಬಿ.ಪಿ.ಎಲ್ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ 70% ಹಾಗೂ ಎ.ಪಿ.ಎಲ್….

Read More

ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಧಾನವಾಗುತ್ತದೆ: ಬೇಳೂರು ಗೋಪಾಲಕೃಷ್ಣ

ಗಡಿಕಟ್ಟೆ: ಕಷ್ಟ ಎಲ್ಲಾರಿಗೂ ಇರುತ್ತದೆ ಪರಸ್ಪರ ಒಬ್ಬರು ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದಾಗ ನೊಂದವರಿಗೆ ಕೊಂಚ ಸಮಾಧಾನವಾಗುತ್ತದೆ ಎಂದು ಮಾಜಿ ಶಾಸಕರೂ,ಕೆ.ಪಿ.ಸಿ.ಸಿ. ವಕ್ತಾರರಾದ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಲ್ಲಿನ ಗಡಿಕಟ್ಟೆಯ ಹಾವುಗೊಲ್ಲರ ಸುಮಾರು 50 ಕುಟುಂಬದ ಸದಸ್ಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಸರ್ಕಾರ ಇಂತಹವರನ್ನು ನಿರ್ಲಕ್ಷಿಸಿರುವುದು ಖಂಡನೀಯ, ನಿಮ್ಮ ಸಂಕಷ್ಟದ ಜೊತೆ ಗೋಪಾಲಕೃಷ್ಣ ಬೇಳೂರು ಸದಾ ಇರುತ್ತಾರೆ ಎಂದರು.    ಈ ಸಂದರ್ಭದಲ್ಲಿ ರಂಜಿತ ರಾಧಾ ಗೋಪಾಲ ಕೃಷ್ಣ ಬೇಳೂರು, ತಾಲ್ಲೂಕು…

Read More

ಕರ್ನಾಟಕ ರಾಜ್ಯ ಬರಹಗಾರರ ಬಳಗದಿಂದ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಟಿ: ರಫ಼ಿ ರಿಪ್ಪನ್ ಪೇಟೆ

ಶಿವಮೊಗ್ಗ::ದಿನಾಂಕ 04/07/21 ಭಾನುವಾರದಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಬರಹಗಾರರ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಟಿ ಏರ್ಪಡಿಸಲಾಗಿದೆ ಎಲ್ಲ ಕವಿಮನಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬರಹಗಾರರ ಬಳಗದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾನುವಾರ ಸಂಜೆ 4 ಗಂಟೆಗೆ ಅನ್ನದಾತ ಎಂಬ ವಿಷಯದ ಅಡಿಯಲ್ಲಿ ಗೂಗಲ್ ಮೀಟ್ ನಲ್ಲಿ  ಜಿಲ್ಲಾಮಟ್ಟದ ಅಂತರ್ಜಾಲ…

Read More

ಜಿಪಂ ತಾ.ಪಂ ಮೀಸಲಾತಿ ಅಧಿಸೂಚನೆ ಮೇಲ್ನೋಟಕ್ಕೆ ಅವೈಜ್ಞಾನಿಕ:ಹರತಾಳು ಹಾಲಪ್ಪ

ರಿಪ್ಪನ್ ಪೇಟೆ :ಜಿಲ್ಲಾ ಪಂಚಾಯತ್ ಹಾಗೂ  ತಾಲೂಕ್  ಪಂಚಾಯತ್ ಚುನಾವಣೆಗೆ ಮೀಸಲಾತಿಯ  ಅಧಿಸೂಚನೆ ಚುನಾವಣಾ ಆಯೋಗದಿಂದ ಹೊರಡಿಸಲಾಗಿದ್ದು. ಜಿಲ್ಲೆಯ ಕೆಲವೊಂದು  ಕ್ಷೇತ್ರದಲ್ಲಿ ಮೀಸಲಾತಿಯ  ಅಧಿಸೂಚನೆಯಲ್ಲಿ ದೋಷ  ಕಂಡು ಬಂದಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಚರ್ಚಿಸಲಾಗುವುದು ಎಂದು ಸಾಗರ -ಹೊಸನಗರ  ವಿಧಾನಸಭಾ ಕ್ಷೇತ್ರದ ಶಾಸಕ  ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು. ಉದಾಹರಣೆಗೆ ಶಿವಮೊಗ್ಗ ಜಿ.ಪಂ ವ್ಯಾಪ್ತಿಯ ಅರಬಿಳಚಿ ಮತ ಕ್ಷೇತ್ರದಲ್ಲಿ 3773 S.T ಮತದಾರರು ಇದ್ದಾರೆ. ಇಲ್ಲಿಗೆ ನೀಡಬೇಕಾದ ಮೀಸಲಾತಿಯನ್ನು 1421…

Read More

ಗೋಡಂಬಿ ಹೆಸರಿನಲ್ಲಿ ಕಳಪೆ ಅಡಿಕೆ ಆಮದು: ಸೂಕ್ತ ಕ್ರಮಕ್ಕೆ ಶಾಸಕ ಆರಗ ಜ್ಞಾನೇಂದ್ರ ಒತ್ತಾಯ

ರಿಪ್ಪನ್ ಪೇಟೆ:ದೇಶದಲ್ಲಿನ ಅಡಿಕೆ ವ್ಯಾಪಾರಿಗಳ ವಂಚಕರ ಜಾಲವು ಗೋಡಂಬಿ ಹೆಸರಿನಲ್ಲಿ ಕಳಪೆ ಗುಣಮಟ್ಟದ ಅಡಿಕೆಯನ್ನು ಇಂಡೋನೇಶಿಯಾದಿಂದ ಆಮದು ಮಾಡಿಕೊಳ್ಳುವ ಮೂಲಕ ದೇಶದ ಅಡಿಕೆ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕೊಳ್ಳುವಂತೆ ಮಾಡುತ್ತಿದ್ದಾರೆ. ಈ ತರಹದ ಕಳಪೆ ಅಡಿಕೆ ಆಮದು ಮಾಡಿಕೊಳ್ಳುವವರ ವಿರುದ್ಧ ಕೇಂದ್ರ ಸರ್ಕಾರವು ಈ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಮತ್ತು ಗೃಹ ಮಂಡಳಿ ಅಧ್ಯಕ್ಷರಾದ ಶ್ರೀ ಆರಗ ಜ್ಞಾನೇಂದ್ರ ಇಂದಿಲ್ಲಿ ಒತ್ತಾಯಿಸಿದರು. ಪಟ್ಟಣದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ  ಮಾತನಾಡಿದ ಅವರು  ಅಡಿಕೆ ವಂಚಕರ ಜಾಲವು…

Read More

ಹಸರೀಕರಣ ಕಾರ್ಯಕ್ರಮ;;

ಸೊರಬ:: ತಾಲೂಕಿನ ನೆಲ್ಲೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಆವರಣದಲ್ಲಿ ಊರ ಗ್ರಾಮಸ್ಥರು ಹಾಗೂ S,K,D,R,D,P ಯೋಜನಾ ಕಚೇರಿ ಶಿರಸಿ ಮತ್ತು ಗ್ರಾಮ ಪಂಚಾಯತ್ ಹರಿಶಿ ಅರಣ್ಯ ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ ಹಸರೀಕರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಫಾರೆಸ್ಟರ್ ರಾಮಪ್ಪ,ಕಿರಣ್ ಗಾರ್ಡ್,ಪಂಚಾಯತ್ ಸದ್ಯಸ್ಯರು  ಕೃಷ್ಣಮೂರ್ತಿ,ಆರಾಧನಾ ಸಮಿತಿ ಸದ್ಯಸ್ಯೆ ವಸುಂದರಾ ಭಟ್,ಗ್ರಾಮದ ಅಧ್ಯಕ್ಷರು ನಾರಾಯಣಪ್ಪ,ಒಕ್ಕೂಟ ಅಧ್ಯಕ್ಷರು ಮಂಜಪ್ಪ,PDO  ಸಂತೋಷ,ಅರಣ್ಯಾಧಿಕಾರಿ ರಾಘವೇಂದ್ರ,ವಾಚರ್ ಆನಂದ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವರದಿ:ಪ್ರಸನ್ನ ಶೇಟ್ ಚಂದ್ರಗುತ್ತಿ

Read More

ಕರೋನಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರ ಸಹಕಾರ ಅಗತ್ಯ: ಡಾ ರಾಘವೇಂದ್ರ

ಚಂದ್ರಗುತ್ತಿ :: ಇಲ್ಲಿ ಪ್ರಾಥಮಿಕ ಅರೋಗ್ಯ  ಕೇಂದ್ರದಲ್ಲಿ ವೈದ್ಯರ ದಿನಾಚರಣೆಯನ್ನು  ಕೇಕ್ ಕತ್ತರಿಸುವ ಮೂಲಕ  ಆಚರಿಸಲಾಯಿತು,ಈ ಸಮಯದಲ್ಲಿ ಡಾ ರಾಘವೇಂದ್ರರವರು ಮಾತನಾಡಿ ಕರೋನಾ ನಿಯಂತ್ರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಮತ್ತು ಆಶಾಕಾರ್ಯಕರ್ತೆಯರು  ಅಂಗನವಾಡಿ ಕಾರ್ಯಕರ್ತೆಯರ  ಪಾತ್ರ ಮಹತ್ತರವಾದದ್ದದ್ದು ,ಕರೋನ  ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲರೂ ತಪ್ಪದೇ ಕರೋನಾ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು. ಸೊರಬ ತಾಲೂಕಿನಲ್ಲಿ ಕರೋನ ತಡೆಗಟ್ಟುವಿಕೆಯಲ್ಲಿ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪನವರು ಮತ್ತು ತಾಲೂಕ್ ವೈದ್ಯಾಧಿಕಾರಿ ಅಕ್ಷತಾ…

Read More