WhatsApp Channel Join Now
Telegram Channel Join Now
ಶಿವಮೊಗ್ಗ::ದಿನಾಂಕ 04/07/21 ಭಾನುವಾರದಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಹಾಗೂ ಬರಹಗಾರರ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ಜಾಲ ಕವಿಗೋಷ್ಟಿ ಏರ್ಪಡಿಸಲಾಗಿದೆ ಎಲ್ಲ ಕವಿಮನಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬರಹಗಾರರ ಬಳಗದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಫ಼ಿ ರಿಪ್ಪನ್ ಪೇಟೆ ಇಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾನುವಾರ ಸಂಜೆ 4 ಗಂಟೆಗೆ ಅನ್ನದಾತ ಎಂಬ ವಿಷಯದ ಅಡಿಯಲ್ಲಿ ಗೂಗಲ್ ಮೀಟ್ ನಲ್ಲಿ  ಜಿಲ್ಲಾಮಟ್ಟದ ಅಂತರ್ಜಾಲ ಕವಿಗೋಷ್ಟಿಯನ್ನು ಏರ್ಪಡಿಸಿದ್ದು ವಿಜೇತ ಕವಿಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದರು,
ಈ ಕವಿಗೋಷ್ಟಿಯ ನಿರ್ಣಾಯಕರಾಗಿ
ಶ್ರೀ ಕೆ.ಬಾರಾವಲಿ ಬಾವಿಹಳ್ಳಿ ,ಶ್ರೀ ಖಂಡೂ ಬಂಜಾರ 
ಶ್ರೀ ವಿರೂಪಾಕ್ಷಪ್ಪ ಯು, ಶ್ರೀ ಮಹೇಶ ಎಸ್ ಹೆಚ್ ಕಾರ್ಯನಿರ್ವಹಿಸುವರು ಎಂದರು.
 

           ಮಧುನಾಯ್ಕ ಲಂಬಾಣಿ. ಸಂಸ್ಥಾಪಕ ಅಧ್ಯಕ್ಷರು


ಈ ಕಾರ್ಯಕ್ರಮದ ಉದ್ಘಾಟನೆ ಬರಹಗಾರರ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಧುನಾಯ್ಕ ಲಂಬಾಣಿ ರವರು ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಶ್ರೀ ಆಲೂರು ಚಂದ್ರಪ್ಪ ರವರು ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಅಶು ರಿಪ್ಪನ್ ಪೇಟೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಜಿ ವಿ ನಾಗೇಂದ್ರಪ್ಪ ಉಪಸ್ತಿತರಿದ್ದರು.

Leave a Reply

Your email address will not be published. Required fields are marked *