
ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್ಪಿ ಮಿಥನ್ ಕುಮಾರ್ ಕರೆ
ಗೌರಿ-ಗಣೇಶ – ಈದ್ ಮಿಲಾದ್ ಹಬ್ಬ ಸೌಹಾರ್ದದಿಂದ ಆಚರಿಸೋಣ : ಎಸ್ಪಿ ಮಿಥನ್ ಕುಮಾರ್ ಕರೆ ರಿಪ್ಪನ್ಪೇಟೆ: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಪರಸ್ಪರ ಗೌರವದಿಂದ ಹಾಗೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಗ್ರಾಮದಲ್ಲಿ ಶಾಂತಿ–ಸುವ್ಯವಸ್ಥೆ ಕಾಪಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥನ್ ಕುಮಾರ್ ಕರೆ ನೀಡಿದರು. ಇಂದು ರಿಪ್ಪನ್ಪೇಟೆಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಸ್ಪಿ ಮಾತನಾಡಿ, “ಧರ್ಮ ಎಲ್ಲರಿಗೂ ಶ್ರೇಷ್ಟ. ಆದರೆ ಧರ್ಮದ ಹೆಸರಿನಲ್ಲಿ ವಿಭಜನೆ…