ತೀರ್ಥಹಳ್ಳಿ ಗನ್ ಶಾಟ್ ಪ್ರಕರಣ ಎಪ್ ಐ ಆರ್ ದಾಖಲು : ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂತರಾಜ್ ಕುಟುಂಬಸ್ಥರು
ತೀರ್ಥಹಳ್ಳಿ : ಗುಂಡೇಟಿಗೆ ಬಲಿಯಾದ ನೊಣಬೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕಾಂತರಾಜು ಅವರು ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಪ್ರಕರಣ ದಾಖಲಾಗಿದೆ. ಎಫ್ಐಆರ್ ನಲ್ಲಿ ಕಾಂತರಾಜು ರವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಮಾತ್ರ ದಾಖಲಾಗಿದೆ. ಕಾಂತರಾಜ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ದೊಡ್ಡಪ್ಪನ ಮಗ ಗಣೇಶ್ ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ. ನಿನ್ನೆ ಮಧ್ಯಾಹ್ನ ಶಿರಿಗಾರು ನಿವಾಸಿ ಕಾಂತರಾಜು ಮನೆಯಿಂದ ಯಾವುದೋ ಕೆಲಸದ ಮೇಲೆ ಹೊರ ಹೋಗುವಾಗ ಹೊಸಕೇರಿ, ಅತ್ತಿಗಾರಿಗೆ ಹೋಗುವ ರಸ್ತೆಯಲ್ಲಿ…