ಕುತ್ತಿಗೆ ಕತ್ತರಿಸುವ ಸಂಸ್ಕೃತಿ ನಮ್ಮದಲ್ಲ – ಕೊರಳಿಗೆ ಹಾರ ಹಾಕುವುದು ನಮ್ಮ ಭಾರತ ದೇಶದ ಸಂಸ್ಕೃತಿ : ಕಲ್ಲಡ್ಕ ಪ್ರಭಾಕರ್ ಭಟ್ |Ripponpet
ರಿಪ್ಪನ್ಪೇಟೆ : ಭಾರತ ದೇಶವನ್ನು ಮುಸಲ್ಮಾನ್, ಕ್ರೀಶ್ಚಿಯನ್ ದೇಶವನ್ನಾಗಿ ಮಾಡಬೇಕು ಎಂಬ ಹಿನ್ನಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಿದರು.ಮತಾಂತರ ಮಾಡುವುದರೊಂದಿಗೆ ಭಯೋತ್ಪದನೆಯನ್ನು ಹುಟ್ಟು ಹಾಕಿ ಹಿಂದು ಧರ್ಮವನ್ನು ಒಡೆಯುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ದಕ್ಕೆ ತರುವ ಕಾರ್ಯದಲ್ಲಿ ತೊಡಗಿರುವವರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸಂಘಟನ್ಮಾಕವಾಗಿ ತಕ್ಕ ಉತ್ತರ ನೀಡುತ್ತದೆಂದು ಕರ್ನಾಟಕ ದಕ್ಷಿಣ ಪ್ರಾಂತ್ ಕಾರ್ಯಕಾರಣಿ ಅಹ್ವಾನಿತ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಎಚ್ಚರಿಸಿದರು. ರಿಪ್ಪನ್ಪೇಟೆಯ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಸಾಗರ ಜಿಲ್ಲಾ ಪ್ರಾಂತ್ಯದ ರಾಷ್ಟ್ರೀಯ ಸ್ವಯಂ ಸೇವಕರ ಸಂಘದವರು ಅಯೋಜಿಸಲಾದ…