Headlines

ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ  ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ

ಸುರಿಯುವ ಮಳೆಯಲ್ಲಿ ಬಂಡೆಕಲ್ಲಿನ  ಜೇನುಕಲ್ಲಮ್ಮ ದೇವಿ ಜಾತ್ರಾಮಹೋತ್ಸವ ರಿಪ್ಪನ್‌ಪೇಟೆ : ಸಮೀಪದ ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಬಂಡೆಕಲ್ಲಿನ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ಜರುಗಿತು. ಇಂದು ಮುಂಜಾನೆಯಿಂದಲೇ ಭಾರಿ ಮಳೆಯ ಮಧ್ಯ  ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿವಿಧಡೆಗಳಿಂದ ಭಕ್ತರು ಜಮಾವಣೆಗೊಂಡು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಮಳೆಯಲ್ಲಿಯೇ ನಿಂತುಕೊಂಡದ್ದು ವಿಶೇಷವಾಗಿತು. ಬೇಡಿ ಬಂದ ಭಕ್ತರ ಆಶೋತ್ತರಗಳನ್ನು ಈಡೇರಿಸುವ ತಾಯಿ ಜೇನುಕಲ್ಲಮ್ಮ ತಾಯಿಗೆ ಮದುವೆಯಾಗದವರು ಸಂತಾನ…

Read More

Hosanagara | ಕೋಳಿ ಪಡೆ ನಡೆಸುತ್ತಿದ್ದವರ ಮೇಲೆ ಪೊಲೀಸರ ದಾಳಿ, ಕೋಳಿ, ನಗದು ಸಹಿತ 8 ಮಂದಿ ವಶಕ್ಕೆ !!

ಕೋಳಿ ಪಡೆ ನಡೆಸುತ್ತಿದ್ದವರ ಮೇಲೆ ಪೊಲೀಸರ ದಾಳಿ, ಕೋಳಿ ಸಹಿತ ನಗದು ವಶಕ್ಕೆ ! ಹೊಸನಗರ: ಖಚಿತ ಮಾಹಿತಿ ಮೇರೆಗೆ ಸೋಮವಾರ ಸಂಜೆ ವೇಳೆಗೆ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ನೀರೇರಿ ಗ್ರಾಮದ ಅಕೇಶಿಯಾ ಪ್ಲಾಂಟೇಷನ್‌ನಲ್ಲಿ ಅಕ್ರಮವಾಗಿ ಕೋಳಿ ಹುಂಜಗಳನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 11,170 ರೂ. ಹಣವನ್ನು ವಶಕ್ಕೆ ಪಡೆದು, 08 ಮಂದಿ ಆರೋಪಿಗಳು ಸಹಿತ ನಾಲ್ಕು ಕೋಳಿ ಹುಂಜ, ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.  ಈ ಘಟನೆ ಸಂಬಂಧ ಹೊಸನಗರ…

Read More

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ

ಆರು ವರ್ಷಗಳಿಂದ ವಿಚ್ಚೇದನಕ್ಕೆ ಯತ್ನಿಸುತಿದ್ದ ಸೊರಬದ  ದಂಪತಿಗಳಿಗಳನ್ನು ಒಂದೂಗೂಡಿಸಿದ ಉಡುಪಿ ನ್ಯಾಯಾಲಯ ಉಡುಪಿ : ಕಳೆದ ಆರು ವರ್ಷಗಳಿಂದ ಪ್ರತ್ಯೇಕವಾಗಿದ್ದ ದಂಪತಿಗಳನ್ನು ಉಡುಪಿಯ ಕೌಟುಂಬಿಕ ನ್ಯಾಯಾಲಯ ಒಂದುಗೂಡಿಸಿ ಪರಸ್ಪರ ಮಾಲಾರ್ಪಣೆ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕ್ಷಣ ಶನಿವಾರ ನಡೆದ ರಾಷ್ಟ್ರಿಯ ಲೋಕ ಅದಾಲತ್‍ನಲ್ಲಿ ಸಾಕ್ಷಿಯಾಯಿತು. ಪ್ರಕರಣದ ಹಿನ್ನಲೆ: ಸೊರಬದ ರಾಘವೇಂದ್ರ ಆಚಾರ್ಯರವರು ಮಂದಾರ್ತಿ ಮುದ್ದುಮನೆಯ ಮಾಲತಿಯವರೊಂದಿಗೆ 2018 ನೇ ಏಪ್ರಿಲ್‍ನಲ್ಲಿ ಯಡ್ತಾಡಿಯ ಚಾಮುಂಡೇಶ್ವರಿ ಸಭಾ ಭವನದಲ್ಲಿ ವಿವಾಹ ಆಗಿದ್ದರು. ಮದುವೆ ಆದ ಸ್ವಲ್ಪ ಸಮಯದ ನಂತರ…

Read More

ಕಾಲುಜಾರಿ ತೋಟದ ಬಾವಿಗೆ ಬಿದ್ದು ವ್ಯಕ್ತಿ ಸಾವು :

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದ ಜಿ.ಕೆ.ಗಣಪತಿ (74) ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಹೋಗಿದ್ದಾಗ ಕಾಲುಜಾರಿ ತೋಟದ ರಿಂಗ್ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಪುರಪ್ಪೆಮನೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಗಿರಿಜಮ್ಮ ರವರ ಪತಿಯಾದ ಜಿ ಕೆ ಗಣಪತಿ ರವರು ಬೆಳಿಗ್ಗೆ 9.30 ರ ಸಮಯದಲ್ಲಿ ಕೃಷಿ ಕೆಲಸದ ನಿಮಿತ್ತ ತೋಟಕ್ಕೆ ಕೆಲಸಕ್ಕೆ ಹೋದಾಗ ಕಾಲು ಜಾರಿ ರಿಂಗ್ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ…

Read More

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿಯ ಬಂಧನ

ರಬ್ಬರ್ ಕಾಡಿನಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ರೂ ಮೌಲ್ಯದ ನಗದು ಮತ್ತು 134 ಗ್ರಾಂನ ಚಿನ್ನ ಆಭರಣ ಗಳನ್ನ  ಕಳವು ಮಾಡಿರುವ ಆರೋಪಿಯನ್ನ ಬಂಧಿಸಿ ಕಳವು ಮಾಡಿದ ನಗದು ಮತ್ತು ಚಿನ್ನಾಭರವಣವನ್ನು ವಶಪಡಿಸಿಕೊಳ್ಳಲಾಗಿದೆ. ಜ.13 ರಂದು ಭದ್ರಾವತಿ ಬಳಿಯ ರಬ್ಬರ್ ಕಾಡಿನ ನಿವಾಸಿ ಪದ್ಮಾ ಎಂಬುವವರ ಮನೆಯಲ್ಲಿ ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ 6 ಲಕ್ಷ ನಗದು ಮತ್ತು 5.66 ಲಕ್ಷ ರೂ ಮೌಲ್ಯದ 134.44 ಗ್ರಾಂ ಚಿನ್ನಾಭರಣವನ್ನ ಕಳವು ಮಾಡಲಾಗಿತ್ತು. 6 ಲಕ್ಷ ಹಣವನ್ನ ಪದ್ಮಾ ರವರು…

Read More

ಲಂಚ ಪಡೆಯುತ್ತಿದ್ದ ಎಎಸ್‌ಐ ಲೋಕಾಯುಕ್ತರ ಬಲೆಗೆ..! | who was taking bribe was trapped.

ಲಂಚ ಪಡೆಯುತ್ತಿದ್ದ ASI ಲೋಕಾಯುಕ್ತರ ಬಲೆಗೆ! ಓಸಿ ಆಡಿಸುವ ಅನುಮತಿಗಾಗಿ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ASI ನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಶಿವಮೊಗ್ಗದ ಆರ್‌ಎಂಎಲ್ ನಗರದ ನಿವಾಸಿ ರಫೀಕ್ ಎಂಬುವರಿಂದ ಮಾಮೂಲಿ ರೂಪದಲ್ಲಿ ತಿಂಗಳಿಗೆ 1.20 ಲಕ್ಷ ಹಣ ನೀಡುವಂತೆ ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್‌ಸ್ಟೆಕ್ಟರ್ ಮೊಹಮ್ಮದ್ ರೆಹಮಾನ್ ಬೇಡಿಕೆ ಇಟ್ಟಿದ್ದು ಅದರಂತೆ ಇಂದು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ….

Read More

ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !! ಏನಿದು ಸ್ಟೋರಿ.!?

ಮನೇಲಿ ಯಾರಿಲ್ಲ ಬಾ ಎಂದು ಕರೆದ ಪ್ರೇಯಸಿ – ಊಟ ಅರ್ಧಕ್ಕೆ ಬಿಟ್ಟು ನಲ್ಲೆಯ ಬಳಿ ಹೋದವ ಹೆಣವಾದ !!? ಏನಿದು ಸ್ಟೋರಿ ‘ಮನೆಯಲ್ಲಿ ಯಾರೂ ಇಲ್ಲ ಬಾ’ ಎಂದು ಪ್ರೇಯಸಿ ಫೋನ್ ಮಾಡಿ ಕರೆದಿದ್ದಳು. ಲವರ್ ಕರೆದಿದ್ದಾಳೆ ಎಂದು ಊಟವನ್ನೂ ಅರ್ಧಕ್ಕೆ ಬಿಟ್ಟು ಆತ ಹೋಗಿದ್ದ. ಆದರೆ, ವಾಪಸ್ ಬರಲೇ ಇಲ್ಲ! ಪ್ರೇಯಸಿಯ ಅಣ್ಣನೇ ಆತನನ್ನು ನೇರವಾಗಿ ಮತ್ತೆ ಬಾರದ ಲೋಕಕ್ಕೆ ಕಳುಹಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ನಂತರ ಕುಂಭಮೇಳ, ಕಾಶಿ ಅಯೋಧ್ಯೆ ಎಂದು…

Read More

ಮಹತ್ವದ ಹಿಜಾಬ್ ತೀರ್ಪು ನಾಳೆ ಪ್ರಕಟಣೆ : ಬೆಂಗಳೂರಿನಲ್ಲಿ ಇಂದಿನಿಂದ 1 ವಾರ ನಿಷೇಧಾಜ್ಞೆ ಜಾರಿ

ಇಡೀ ರಾಷ್ಟ್ರದಲ್ಲಿ ಸುದ್ದಿಯಾಗಿ, ಪ್ರಪಂಚದ ಗಮನ ಸೆಳೆದು ರಾಜ್ಯಾದ್ಯಂತ ಕಳೆದೆರಡು ತಿಂಗಳಿಂದ ಸಂಘರ್ಷದ ವಾತಾವರಣ ಹುಟ್ಟುಹಾಕಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪನ್ನು ಮಂಗಳವಾರ ಬೆಳಗ್ಗೆ 10.30 ಕ್ಕೆ ಪ್ರಕಟಿಸುವುದಾಗಿ ಕರ್ನಾಟಕ ಹೈಕೋರ್ಟ್ ಹೇಳಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ 11ನೇ ದಿನಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ನ್ಯಾ. ಖಾಜಿ…

Read More

ರಿಪ್ಪನ್‌ಪೇಟೆ ಕೆಡಿಪಿ ಸಭೆ | ಸರ್ಕಾರಿ ಆಸ್ಪತ್ರೆಯಲ್ಲಿ ಕುಡುಕರ ಹಾವಳಿಯನ್ನು ತಪ್ಪಿಸಿ – ವೈದ್ಯಾಧಿಕಾರಿ ಮನವಿ

ರಿಪ್ಪನ್‌ಪೇಟೆ ಕೆಡಿಪಿ ಸಭೆ | ಸರ್ಕಾರಿ ಆಸ್ಪತ್ರೆಯಲ್ಲಿ ಕುಡುಕರ ಹಾವಳಿಯನ್ನು ತಪ್ಪಿಸಿ – ವೈದ್ಯಾಧಿಕಾರಿ ಮನವಿ ರಿಪ್ಪನ್‌ಪೇಟೆ : ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿಗಳಿಗೆ ಕಷ್ಟಕರವಾಗಿದ್ದು  ರೋಗಿಗಳ ಕಡೆಯವರು ಎಂದು ಹೇಳಿಕೊಂಡು ಬರುವ ಕೆಲವರು ಮದ್ಯಪಾನ ಮಾಡಿಕೊಂಡು ಬಂದು ಘಟನೆಯ ಸೂಕ್ಷ್ಮತೆ ಬಗ್ಗೆ ಅರಿವಿಲ್ಲದೇ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ವೈದ್ಯಧಿಕಾರಿ ಡಾ. ಆಂಜನೇಯ ಕೆಡಿಪಿ ಸಭೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪಟ್ಟಣದ ಕುವೆಂಪು ಸಭಾಂಗಣದಲ್ಲಿ…

Read More

ತೀರ್ಥಹಳ್ಳಿ : ಚಾಕಲೇಟ್ ಎಂದು ಇಲಿ ಪಾಷಾಣ ತಿಂದ ಐದು ವರ್ಷದ ಮಗು – ಚಿಕಿತ್ಸೆ ಫಲಿಸದೇ ಸಾವು|rat poison

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯ ಮೇಲಿನಕೊಪ್ಪದ ಬಳಿಯಲ್ಲಿ ಮಗುವೊಂದು ಇಲಿ ಪಾಷಾಣದ ಪೇಸ್ಟ್ ತಿಂದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಕೂಲಿ ಕಾರ್ಮಿಕ ಚಂದ್ರಪ್ಪ ಮತ್ತು ಗೀತಾ ದಂಪತಿಯ ಎಂಬುವವರ ಪುತ್ರ ಪ್ರೀತಮ್ (5) ಮೃತ ಬಾಲಕ.  ಇಲಿಗೆ ಅಂತಾ ಇಟ್ಟಿದ್ದ ಪಾಷಾಣವನ್ನು ಮಗು ಚಾಕೊಲೆಟ್ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡಿದೆ. ನಿನ್ನೆ ರಾತ್ರಿ ಮಗು ಅಸ್ಥಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಸಾವನ್ನಪ್ಪಿದೆ.  ಮಗುವನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ…

Read More