ರಿಪ್ಪನ್ ಪೇಟೆಯಲ್ಲಿ ನಡದಿದ್ದೇ 2 ವರ್ಷಗಳ ನಂತರ ಗ್ರಾಮಸಭೆ ಆದರೂ ಹಿರಿಯ ಪತ್ರಕರ್ತ ಧರಣಿ ನಡೆಸಿದ್ದೇಕೆ ? ಹಲವು ರೋಚಕ ಸನ್ನಿವೇಶಕ್ಕೆ ಸಾಕ್ಷಿಯಾಯಿತೇ ರಿಪ್ಪನ್ ಪೇಟೆಯ ಗ್ರಾಮಸಭೆ!!
ರಿಪ್ಪನ್ ಪೇಟೆ: ಬರೊಬ್ಬರಿ ಎರಡು ವರ್ಷಗಳ ನಂತರ ರಿಪ್ಪನ್ ಪೇಟೆಯ ಕುವೆಂಪು ಸಭಾಂಗಣದಲ್ಲಿ ಗ್ರಾಮಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆ ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಹೌದು,ಎರಡು ವರ್ಷಗಳ ನಂತರ ನಡೆಯುತ್ತಿದ್ದ ಗ್ರಾಮ ಸಭೆಯಲ್ಲಿ ರಿಪ್ಪನ್ ಪೇಟೆ ಗ್ರಾಮ ಪಂಚಾಯತಿಯ ಆಡಳಿತ ಕಾರ್ಯ ವೈಖರಿ ಖಂಡಿಸಿ ಹಿರಿಯ ಪತ್ರಕರ್ತ ಹಾಗೂ ಬಿಜೆಪಿ ಹಿರಿಯ ಮುಖಂಡ ಸಭೆಯಲ್ಲಿ ಏಕಾಂಗಿ ಧರಣಿ ನಡೆಸಿದ ಪ್ರಸಂಗವು ನಡೆಯಿತು. ಈ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಬರೀಶ್ ನಗರದಲ್ಲಿ ಒಂದೇ ಕುಟುಂಬದ ಇಬ್ಬರ ನಡುವೆ ಇದ್ದ ಖಾತೆಗೆ…