ಆನಂದಪುರ:ಮನೆಗೆ ನುಗ್ಗಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ದರೋಡೆ
ಆನಂದಪುರ: ಇಲ್ಲಿನ ಸಮೀಪದ ಕೆಂಜಿಗಾಪುರದ ಪುರೋಹಿತರಾದ ಶ್ರೀಧರ್ ಭಟ್ ವರ ಮನೆಗೆ ಹಾಡುಹಗಲೇ ಮೂವರು ದರೋಡೆಕೋರರು ನುಗ್ಗಿ ಶ್ರೀಧರ್ ಭಟ್ ರವರ ಅಕ್ಕನಾದ ವೃದ್ದೆ ಜಯಮ್ಮರವರ ಮೇಲೆ ಹಲ್ಲೆ ಮಾಡಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ಹಣವನ್ನು ದರೋಡೆಕೋರರು ದೋಚಿದ್ದಾರೆ. ಸ್ವಿಫ್ಟ್ ಕಾರ್ ನಲ್ಲಿ ಬಂದಂತಹ ದರೋಡೆ ಕೋರರ ತಂಡವು ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಹಣದ ಚೀಲವನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣಾ ಪೊಲೀಸರು…