RIPPONPETE | ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರ , ಲೈಟ್ ಕಂಬಗಳು : ಅಪಾರ ಪ್ರಮಾಣದ ಹಾನಿ

RIPPONPETE | ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರ , ಲೈಟ್ ಕಂಬಗಳು : ಅಪಾರ ಪ್ರಮಾಣದ ಹಾನಿ

ಭಾರಿ ಗಾಳಿ ಮಳೆಗೆ ವಿದ್ಯುತ್ ಕಂಬ, ಮರಗಳು ಧರೆಗೆ ಉರುಳಿ ಬಿದ್ದು , ಮನೆಯ ಮೇಲ್ಚಾವಣಿಗಳು ಹಾರಿಹೋಗಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ವ್ಯಾಪ್ತಿಯ ಗವಟೂರು ಗ್ರಾಮದಲ್ಲಿ ನಡೆದಿದೆ.

ಬೆಳಗಿನಜಾವ ಸುರಿದ ಭಾರಿ ಗಾಳಿ – ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು , ಶಾಲೆಯ ಕಾಂಪೌಂಡ್ ಉರುಳಿಬಿದ್ದಿದ್ದು , ರಸ್ತೆಯ ಮೇಲೆ ಲೈಟ್ ಕಂಬಗಳು ಉರುಳಿಬಿದ್ದಿದೆ.ಮರಗಳು ಉರುಳಿಬಿದ್ದಿದ್ದು , ಮನೆಯ ಹೆಂಚುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿದೆ.

ಗವಟೂರು ಶಾಲೆ ಬಳಿಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿ ಬಿದ್ದಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ, ಕಂಬಗಳು ರಸ್ತೆಗೆ ಉರಳಿ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕಾಗಿ ಜನರು ಪರಿತಪಿಸಿದರು.

ಸ್ಥಳಕ್ಕೆ ರಿಪ್ಪನ್ ಪೇಟೆ ಪಿಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು , ಗ್ರಾಪಂ ಸದಸ್ಯೆ ಮಂಜುಳಾ ಕೆ ರಾವ್ ಭೇಟಿ ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಇಂದು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಶಾಸಕರ ಆಪ್ತ ವಲಯದ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *