ತೀರ್ಥಹಳ್ಳಿ-ಸಾಗರ, ಶಿವಮೊಗ್ಗ ಮಾರ್ಗಕ್ಕೆ KSRTC ಬಸ್ ಚಾಲನೆ: ಸಾರ್ವಜನಿಕರ ದಶಕದ ಬೇಡಿಕೆಗೆ ಸಿಕ್ತು ಮುಕ್ತಿ!
KSRTC has launched two new bus services on the Thirthahalli–Ripponpet–Sagar and Thirthahalli–Ripponpet–Shivamogga routes, improving transport access for women, students, and the public in Hosanagara Taluk.
ರಿಪ್ಪನ್ಪೇಟೆ: ಹೊಸನಗರ ತಾಲೂಕಿನ ಸಾರ್ವಜನಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯಾಗಿದ್ದ ತೀರ್ಥಹಳ್ಳಿ – ರಿಪ್ಪನ್ಪೇಟೆ – ಸಾಗರ ಹಾಗೂ ತೀರ್ಥಹಳ್ಳಿ – ರಿಪ್ಪನ್ಪೇಟೆ – ಶಿವಮೊಗ್ಗ ಮಾರ್ಗಕ್ಕೆ ಗುರುವಾರ ಎರಡು ಹೊಸ ಕೆಎಸ್ಆರ್ಟಿಸಿ (KSRTC) ಬಸ್ಗಳ ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಹೊಸನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರಂ ಹೂವಿನಕೋಣೆ ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಅಮೀರ್ ಹಂಜಾ ಅವರು ಹಸಿರು ಭಾವುಟ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಚಿದಂಬರಂ ಹೂವಿನಕೋಣೆ, “ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಉಚಿತ ಬಸ್ ಪ್ರಯಾಣದ ಪ್ರಯೋಜನ ಹೊಸನಗರ ತಾಲೂಕಿನ ಜನರಿಗೆ ಕಳೆದ ಮೂರು ವರ್ಷಗಳಿಂದ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ಈಗ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿಶೇಷ ಕಾಳಜಿಯಿಂದ ಎರಡು ಬಸ್ಗಳ ಸಂಚಾರ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ಮಾಸ್ತಿಕಟ್ಟೆಗೆ ಬಸ್ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ,” ಎಂದರು.
ಜಿಲ್ಲಾ ಸಮಿತಿ ಸದಸ್ಯ ಅಮೀರ್ ಹಂಜಾ ಮಾತನಾಡಿ, “ನಮ್ಮ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯನ್ನು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಹೊಸನಗರಕ್ಕೆ ಪ್ರತ್ಯೇಕ ಕೆಎಸ್ಆರ್ಟಿಸಿ ಡಿಪೋ ಮಂಜೂರು ಮಾಡುವಂತೆ ಮನವಿ ಮಾಡಿದ್ದು, ಅದು ಸಾಕಾರಗೊಂಡರೆ ಹಿಂದುಳಿದ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಸರ್ಕಾರಿ ಬಸ್ಗಳು ಬರಲಿವೆ,” ಎಂದು ಭರವಸೆ ನೀಡಿದರು.
ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಸ್ಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರಂ ಹೂವಿನಕೋಣೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಮೀರ್ ಹಂಜಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಗ್ಯಾರಂಟಿ ಸಮಿತಿ ಸದಸ್ಯರಾದ ರವೀಂದ್ರ ಕೆರೆಹಳ್ಳಿ,ಜಿ ಆರ್ ಗೋಪಾಲಕೃಷ್ಣ , ಸುಮಾ ಹುಂಚ, ಮಧುಸೂಧನ್, ಎಂ.ಎಂ. ಪರಮೇಶ್, ಈಶ್ವರಪ್ಪ ಗೌಡ, ಗಣಪತಿ ಗವಟೂರು, ಬಂಡಿ ನೇಮಣ್ಣ, ರಮೇಶ್ ಫ್ಯಾನ್ಸಿ, ವಾಣಿ ಗೋವಿಂದಪ್ಪ, ಸಾಜೀದಾ ಹನೀಫ್, ಧನಲಕ್ಷ್ಮಿ, ಶ್ರೀನಿವಾಸ್ ಆಚಾರ್, ಶ್ರೀಧರ್, ಮಳವಳ್ಳಿ ಮಂಜುನಾಥ್, ಗಫಾರ್ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಹೊಸನಗರ ತಾಲೂಕಿನ ಗ್ರಾಮೀಣ ಭಾಗದ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಸರ್ಕಾರದ ‘ಶಕ್ತಿ’ ಯೋಜನೆಯ ಉಚಿತ ಬಸ್ ಪ್ರಯಾಣವು ಕೇವಲ ‘ಗಗನ ಕುಸುಮ’ವಾಗಿ ಉಳಿದಿತ್ತು. ಈ ಗಂಭೀರ ಸಮಸ್ಯೆಯನ್ನು ಬೆಳಕಿಗೆ ತರುವಲ್ಲಿ ‘ಪೋಸ್ಟ್ ಮ್ಯಾನ್ ನ್ಯೂಸ್’ (Postman News) ವಹಿಸಿದ ಪಾತ್ರ ಅನನ್ಯ. ಸಾರ್ವಜನಿಕರ ಪರವಾಗಿ ನಿಂತು ‘ಪೋಸ್ಟ್ ಮ್ಯಾನ್ ನ್ಯೂಸ್’ ಮಾಡಿದ ನಿರಂತರ ಹಾಗೂ ಜವಾಬ್ದಾರಿಯುತ ವಿಶೇಷ ವರದಿಗಳ ಒತ್ತಡವೇ ಇಂದು ಈ ಎರಡು ನೂತನ ಬಸ್ಗಳು ರಸ್ತೆಗೆ ಇಳಿಯಲು ಪ್ರಮುಖ ಕಾರಣವಾಗಿದೆ.
ಸಾರಿಗೆ ಸಚಿವ ಬೈರತಿ ಸುರೇಶ್ ಹಾಗೂ ಸ್ಥಳೀಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ವಿಷಯವನ್ನು ತಲುಪಿಸಿ, ಸಮಸ್ಯೆಯ ತೀವ್ರತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ‘ಪೋಸ್ಟ್ ಮ್ಯಾನ್ ನ್ಯೂಸ್’ ನಡೆಸಿದ ಮಾಧ್ಯಮ ಹೋರಾಟ ಮತ್ತು ನಿರಂತರ ಪ್ರಯತ್ನದ ಫಲಶ್ರುತಿಯಾಗಿ ಇಂದು ಸಾರ್ವಜನಿಕರ ದಶಕದ ಕನಸು ನನಸಾಗಿದೆ. ಮಾಧ್ಯಮದ ಈ ಹಿತಕರ ಒತ್ತಡ ಮತ್ತು ಬದ್ಧತೆಗೆ ತಾಲೂಕಿನ ಜನತೆ, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊರಡುವಸಮಯ ಎಲ್ಲಿಂದ ಎಲ್ಲಿಗೆ
06:30 AM ಶಿವಮೊಗ್ಗ - ತೀರ್ಥಹಳ್ಳಿ
07:00 AM ನಗರ - ತೀರ್ಥಹಳ್ಳಿ
08:05 AM ತೀರ್ಥಹಳ್ಳಿ - ನಗರ
08:15 AM ತೀರ್ಥಹಳ್ಳಿ - ರಿಪ್ಪನ್ಪೇಟೆ - ಸಾಗರ
09:10 AM ನಗರ - ತೀರ್ಥಹಳ್ಳಿ
11:00 AM ಸಾಗರ - ರಿಪ್ಪನ್ಪೇಟೆ -ತೀರ್ಥಹಳ್ಳಿ
11:30 AM ತೀರ್ಥಹಳ್ಳಿ - ರಿಪ್ಪನ್ಪೇಟೆ
POSTMAN NEWS KANNADA
01:15 PM ರಿಪ್ಪನ್ಪೇಟೆ - ತೀರ್ಥಹಳ್ಳಿ
02:00 PM ತೀರ್ಥಹಳ್ಳಿ - ರಿಪ್ಪನ್ಪೇಟೆ
03:00 PM ತೀರ್ಥಹಳ್ಳಿ - ನಗರ
03:30 PM ರಿಪ್ಪನ್ಪೇಟೆ - ಶಿವಮೊಗ್ಗ
04:30 PM ನಗರ - ತೀರ್ಥಹಳ್ಳಿ
05:35 PM ತೀರ್ಥಹಳ್ಳಿ - ನಗರ
ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ One-month skill development training on bakery product preparation…
ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ; ಚಂಡೆ ಸದ್ದಿಗೆ ಡಿವೈಎಸ್ಪಿ ಭಾನುಪ್ರಕಾಶ್, ಸಿಪಿಐ ಇಮ್ರಾನ್ ಹೆಜ್ಜೆ Thirthahalli police…
ಕೋಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ : ಲಕ್ಷಾಂತರ ರೂ. ನಷ್ಟ House fire reported at Keelambi…
ಶಾಸಕರ ಜೊತೆ ಟ್ರಾಫಿಕ್ ಪೊಲೀಸರ ಡ್ಯಾನ್ಸ್; ವಿಡಿಯೋ ವೈರಲ್, ಇಬ್ಬರ ವರ್ಗಾವಣೆ Two traffic police personnel in Shivamogga…
ಬಾವಿಗೆ ಬಿದ್ದು ನಿವೃತ್ತ ಕುಲಪತಿ ಪ್ರೊ. ಎಂ.ಕೆ. ನಾಯ್ಕ್ ಸಾವು Retired Vice Chancellor Prof. M.K. Naik, 63,…
ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…