ಏಕಾಏಕಿ ದೇವಾಲಯ ತೆರವು : ಭಾರಿ ವಿರೋಧದ ಹಿನ್ನೆಲೆಯಲ್ಲಿ  ಮತ್ತೆ ಪ್ರತಿಷ್ಠಾಪನೆ

ಏಕಾಏಕಿ ದೇವಾಲಯ ತೆರವು : ಭಾರಿ ವಿರೋಧದ ಹಿನ್ನೆಲೆಯಲ್ಲಿ  ಮತ್ತೆ ಪ್ರತಿಷ್ಠಾಪನೆ

ಶಿವಮೊಗ್ಗ:  ತುಂಗಾ ಮೇಲ್ದಂಡೆ ಇಲಾಖೆಯ ಅಧಿಕಾರಿಗಳು  ತಾಲೂಕಿನ ಗೋವಿಂದಪುರದಲ್ಲಿನ ನಿವಾಸಿಗಳು ನಿರ್ಮಿಸಿದ್ದ ಸ್ಥಳೀಯ ದೇವಾಲಯವನ್ನು “ಅಕ್ರಮ ಒತ್ತುವರಿ” ಎನ್ನುವ ನೆಪದಲ್ಲಿ ತೆರವುಗೊಳಿಸಿದ ಘಟನೆ ಮಂಗಲವರ ಮುಂಜಾನೆ ನಡೆದಿದ್ದು, ಸ್ಥಳೀಯ ನಿವಾಸಿಗಳ ಆಕ್ರೋಶ ಎದುರಾದ ಕಾರಣ , ಚೌಡೇಶ್ವರಿ ದೇವಸ್ಥಾನವನ್ನು ನಿರ್ಮಾಣ ಮಾಡಿ ದೇವರ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆ ಮಡಲಾಯಿತು.

ಏಕಾಏಕಿ ಸಮುದಾಯದಲ್ಲಿ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಎಸ್‌ಎನ್ ಚನ್ನಬಸಪ್ಪ ಅವರು ಭೇಟಿ ನೀಡಿದರು.ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಕುರಿತು ಗಂಭೀರವಾಗಿ ಗಮನ ಹರಿಸಿ, ತಕ್ಷಣ ಪರಿಶೀಲನೆ ನಡೆಸಿ, ದೇವಾಲಯವನ್ನು ಮರುಸ್ಥಾಪಿಸಲು ಹಾಗೂ ಭಕ್ತರ ಭಾವನೆಗಳಿಗೆ ತಕ್ಕಂತೆ ನ್ಯಾಯ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ “ಸಮುದಾಯದ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಗೌರವಿಸುವಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ಅಭಿವೃದ್ಧಿ ಅಥವಾ ವ್ಯವಸ್ಥಾಪನಾ ಕ್ರಮಗಳು ಜನಭಾವನೆಗಳಿಗೆ ತಾಕಿಲ್ಲದೆ ಜಾರಿಗೆ ಬರಬೇಕು” ಎಂದು ತಿಳಿ ಹೇಳಿದರು.

ಭೇಟಿಯ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ, ತಹಸೀಲ್ದಾರ್, ತುಂಗಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ  ಮುನ್ನ  ನಿನ್ನೆ ರಾತ್ರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ  ದೇವಸ್ಥಾನವನ್ನು ಕೆಡವಿದ್ದು , ಗ್ರಾಮಸ್ಥರ ಪರವಾಗಿ ನಿಂತು ಅಧಿಕಾರಿಗಳ ಕ್ರಮವನ್ನು ಖಂಡಿಸಿ ದೇವಸ್ಥಾನವನ್ನು ಪುನರ್ನಿರ್ಮಿಸುವಂತೆ ಆಗ್ರಹಿಸಿದರು. ಇಷ್ಟಕ್ಕೆ ಬಿಡದ ಇಬ್ಬರೂ ಶಾಸಕರು ಶಿವಮೊಗ್ಗದ ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿ ದೇವಸ್ಥಾನ ತೆರವು ಕಾರ್ಯಾಚರಣೆ ಖಂಡಿಸಿ ಇತರೆ ಒತ್ತುವರಿ ತೆರವು ಮಾಡುವುದನ್ನು ಬಿಟ್ಟು ಯಾಕೆ ದಾರಿ ಚೌಡೇಶ್ವರಿ ದೇವಾಲಯವನ್ನು ತೆರವುಗೊಳಿಸಿದ್ದೀರಿ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *