ಅಕ್ರಮ ಬಂಧನದಲ್ಲಿರಿಸಿದ್ದ ಮುಶಿಯಾ (ಕಪ್ಪು ಮೂತಿಯ ಬುಕ್ಕ) ರಕ್ಷಣೆ – ಓರ್ವ ಬಂಧನ
ಅಕ್ರಮವಾಗಿ ಬಂಧನದಲ್ಲಿರಿಸಿದ್ದ ಮುಶಿಯಾ ( ಗ್ರೇ ಲಂಗೂರು) ನನ್ನು ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ಪತ್ತೆ ಹಚ್ವಿ ಆರೋಪಿಯನ್ನು ವಶಕ್ಕೆ ಪಡೆದಿರುವ ಘಟನೆ ಸಾಗರ ತಾಲೂಕಿನ ಗಡಿಕಟ್ಟೆ ಬಳಿಯಲ್ಲಿ ನಡೆದಿದೆ.
ಅಕ್ರಮವಾಗಿ ಕಾಡಿನಿಂದ ಸೆರೆ ಹಿಡಿದು ಬಂಧನದಲ್ಲಿ ಇರಿಸಿದ್ದ ಗ್ರೇ ಲಂಗೂರ್ (Semnopythecus Entellus) ಶೆಡ್ಯೂಲ್ ll ಸಸ್ತನಿ ಯನ್ನು ಆರೋಪಿಯ ಬಂಧನದಿಂದ ರಕ್ಷಿಸಿ, ವನ್ಯಜೀವಿ ಪ್ರಕರಣ ದಾಖಲಿಸಿ ಓರ್ವ ಆರೋಪಿಯನ್ನು ಬಂದಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.
ದಾಳಿಯಲ್ಲಿ PSI ವಿನಾಯಕ್ ಕೆ . ಹಾಗೂ ಸಿಬ್ಬಂದಿಗಳಾದ HC ಗಣೇಶ್, ವಿಶ್ವನಾಥ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಮಹೇಶ್, ದಿನೇಶ್, ಪ್ರಮೋದಕುಮಾರಿ ದಾಳಿ ವೇಳೆಯಲ್ಲಿ ಪಾಲ್ಗೊಂಡಿದ್ದರು.