ಸಂಘದ ಬಾಕಿ ಹಣ ಕೇಳಲು ಹೋದ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ : ಇಬ್ಬರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲು
ರಿಪ್ಪನ್ ಪೇಟೆ : ಸಂಘದ ಬಾಕಿ ಹಣ ಕೇಳಲು ಹೋದ ಸಂಘದ ಮಹಿಳೆಯರ ಮೇಲೆಯೇ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಘಟನೆ ಕಮದೂರು ಗ್ರಾಮದಲ್ಲಿ ನಡೆದಿದೆ. ಕಮದೂರು ಗ್ರಾಮದ ಭಾಗಿರಥಮ್ಮ ಎಂಬುವವರು ಶ್ರೀ ರೇಣುಕಾಂಬ ಸಂಘ ಆಲುವಳ್ಳಿ ಯ ಸದಸ್ಯೆಯಾಗಿದ್ದು ಸಾಲ ಪಡೆದಿರುತ್ತಾರೆ.ಕಳೆದ ಹಲವಾರು ದಿನಗಳಿಂದ ಸಾಲ ಮರು ಪಾವತಿ ಮಾಡುತ್ತಿಲ್ಲವೆಂದು ಸಂಘದ ಎಲ್ಲಾ ಸದಸ್ಯರು ಅವರ ಮನೆಗೆ ಸಾಲ ವಸೂಲಿಗೆ ಹೋಗಿದ್ದಾರೆ.ಈ ಸಂಧರ್ಭದಲ್ಲಿ ಭಾಗಿರಥಮ್ಮ ರವರ ಮಗ ಸತೀಶ್ ಎಂಬುವವನು ಸಾಲ ವಸೂಲಿಗೆ ಹೋಗಿದ್ದ…