Headlines

ಪ್ರೀತಿಸಿ ಮದುವೆಯಾದ ಪತ್ನಿಗೆ ಜಾತಿ ನಿಂದನೆ – ಪತಿಗೆ ನಾಲ್ಕು ವರ್ಷದ ಕಠಿಣ ಶಿಕ್ಷೆ

ಪ್ರೀತಿಸಿ ಮದುವೆಯಾದ ಪತ್ನಿಗೆ ಜಾತಿ ನಿಂದನೆ – ಪತಿಗೆ ನಾಲ್ಕು ವರ್ಷದ ಕಠಿಣ ಶಿಕ್ಷೆ ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಜಾತಿ ನಿಂದನೆ ಮಾಡಿದ ದೋಷ ದೃಢಪಟ್ಟ ಹಿನ್ನೆಲೆಯಲ್ಲಿ, ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದ ಗೌಡರ ಬೀದಿ ನಿವಾಸಿ ಎಸ್‌.ಈ. ಚಿದಾನಂದ (43) ಅವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ನಾಲ್ಕು ವರ್ಷದ ಕಠಿಣ ಶಿಕ್ಷೆ ಹಾಗೂ ₹11.05 ಲಕ್ಷ ದಂಡವನ್ನು ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 1.02 ವರ್ಷದ ಸಾದಾ ಶಿಕ್ಷೆ…

Read More

ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಯುವಕನ ಕೊಲೆ | Crime News

ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಯುವಕನ ಕೊಲೆ | Crime News ಯುವಕನೊಬ್ಬನನ್ನು ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಗಂಗಮ್ಮ ದೇವಸ್ಥಾನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ನಡೆದಿದ್ದೇನು..??? ಇಂದು ಸಂಜೆ ಬಾಪೂಜಿನಗರದಲ್ಲಿರುವ ಗಂಗಮ್ಮ ದೇವಸ್ಥಾನದ ಬಳಿಯಲ್ಲಿ ಹುಡುಗರ ಜೊತೆ ಮಾತನಾಡುತ್ತಾ ನಿಂತಿದ್ದ ಸುರೇಶ್ @ RX ಸೂರಿ ಎಂಬುವವನ ಮೇಲೆ ಅಪರಿಚರು ಏಕಾಏಕಿ ದಾಳಿ ನಡೆಸಿ…

Read More

ಜ್ಞಾನದಿಂದ ಪ್ರಪಂಚವನ್ನೆ ಗೆಲ್ಲಬಹುದು – ಡಾ ಜಗದೀಶ್ ಹೊಸಮನಿ | Bankapura

ಜ್ಞಾನದಿಂದ ಪ್ರಪಂಚವನ್ನೆ ಗೆಲ್ಲಬಹುದು – ಡಾ ಜಗದೀಶ್ ಹೊಸಮನಿ | Bankapura ಬಂಕಾಪುರ  :  ಈ ತಂತ್ರಜ್ಞಾನದ ಯುಗದಲ್ಲಿ ಸರ್ಕಾರಿ ಕಸಗೂಡಿಸುವನ ಕೆಲಸಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತಿದೆ.ಸಮಯ ವ್ಯರ್ಥ ಮಾಡದೇ ಅಧ್ಯಯನ ಮಾಡಿ ಸಾಧಕರಾಗಿ ಹೊರಹೊಮ್ಮುವಂತೆ  ವಿದ್ಯಾರ್ಥಿಗಳಾಗಬೇಕು. ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ವಯ್ಯುವ ಶಕ್ತಿ ಶಿಕ್ಷಣಕ್ಕಿದೆ. ಅಂತಹ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದು ಕೊಂಡಾಗ ಪ್ರಪಂಚವನ್ನೇ ಗೆಲ್ಲಬಹುದು ಎಂದು ಹಾವೇರಿ ಜಿ.ಎಚ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಗದೀಶ್ ಹೊಸಮನಿ ಹೇಳಿದರು. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ…

Read More

ಹಲ್ಲೆಗೊಳಗಾಗಿದ್ದ ಅಮ್ಜದ್ ಚಿಕಿತ್ಸೆ ಫಲಿಸದೇ ಸಾವು | ಪೊಲೀಸರ ರಾ ಏಜೆಂಟ್ ಕೊಲೆಗೆ ಕಾರಣವೇನು..!!??

ಅಮ್ಜದ್ ಅಪರಾಧ ಲೋಕದ ನಡುವೆ ಬದುಕುತ್ತಿದ್ದ, ಆದರೆ ಕಾನೂನಿನ ಬದಿಯಲ್ಲಿದ್ದ. ಹೊರಗಿನ ಕಣ್ಣಿಗೆ ಇಸ್ಪೀಟು ದಂಧೆಗಾರ, ಪೊಲೀಸರ ದೃಷ್ಟಿಗೆ ರಾ ಏಜೆಂಟ್! ಇದೇ ಅಮ್ಜದ್‌ನ ನಿಜವಾದ ಚಿತ್ರ. ಶಿವಮೊಗ್ಗ ನಗರದ ಗಲಭೆ, ಕೊಲೆ, ಕ್ರೈಂ ಎಂಬ ಎಲ್ಲ ಕಥೆಗಳಲ್ಲಿ ಅಜ್ಞಾತವಾಗಿ ಭಾಗಿಯಾಗಿದ್ದ ಈ ವ್ಯಕ್ತಿ, ಇನ್ನು ಇಹಲೋಕದಲ್ಲಿಲ್ಲ. ಪೊಲೀಸರ ನಂಬಿಕೆಯ “ರಹಸ್ಯ ಹಸ್ತ” ಅಮ್ಜದ್ ಹೆಸರು ಕೇಳಿದರೆ ಕ್ರೈಂ ಲೋಕದವರು ನಡುಗುತ್ತಿದ್ದರು. ಆದರೆ ಪೊಲೀಸರ ಕಚೇರಿಯಲ್ಲಿ ಅವನು “ಅವಶ್ಯಕ ಮಾಹಿತಿ ಮೂಲ” ಆಗಿದ್ದ. ರಾಜ್ಯದ 500ಕ್ಕೂ ಹೆಚ್ಚು…

Read More

ಆನಂದಪುರದಲ್ಲಿ ಕನ್ನಡ ಬಾರದ ವ್ಯಕ್ತಿಯ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ :

ಆನಂದಪುರದ ರಬ್ಬರ್ ಮರಗಳನ್ನ ಟ್ಯಾಪಿಂಗ್  ಬಂದಿದ್ದ ಜಿಸ್ ಎಂಬ ಮಧ್ಯ ವಯಸ್ಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಲಾಗಿದ್ದು ತಲೆಗೆ 6 ಹೊಲಿಗೆ ಹಾಕಲಾಗಿದೆ ರಬ್ವರ್ ಮರಗಳ ಟ್ಯಾಪಿಂಗ್ ಮಾಡಿ ರಬ್ಬರ್ ಇಳಿಸಲು ಕೇರಳ ರಾಜ್ಯದಿಂದ ಬಂದಿದ್ದ ಜಿಸ್ ಮೊನ್ನೆ ರಾತ್ರಿ ಆನಂದಪುರದ ವೈನ್ ಶಾಪ್ ಬಳಿ ತೆರಳಿದ್ದಾರೆ. ಜಿಸ್ ನನ್ನ ಇಲ್ಲಿ ಪ್ಲಾಂಟೇಷನ್ ಗುತ್ತಿಗೆ ಹಿಡಿದು ಕೆಲಸ ಮಾಡುವ ಅಲೆಕ್ಸ್ ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದರು. ವೈನ್ ಶಾಪ್ ನಲ್ಲಿ ಕನ್ನಡ ಬಾರದ‌ ಜಿಸ್ ಗೆ…

Read More

ಒಕ್ಕಲಿಗರ ಸಂಘದ ಚುನಾವಣೆ ಸಿರಿಬೈಲ್ ಧರ್ಮೇಶ್ ಮುನ್ನಡೆ : ಗೆಲುವು ಬಹುತೇಕ ಖಚಿತ

ರಾಜ್ಯ ಒಕ್ಕಲಿಗರ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಮೂರನೇ ಸುತ್ತಿನಲ್ಲಿ ಧರ್ಮೇಶ್ ಸಿರಿ ಬೈಲ್ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಎಸ್ ಕುಮಾರ್ ಮುನ್ನಡೆ ಪಡೆದಿದ್ದ ಎಸ್ ಕುಮಾರ್ ಮೂರನೇ ಸುತ್ತಿನಲ್ಲಿ ಹಿನ್ನಡೆ ಆಗಿದೆ. ಎರಡನೇ ಸುತ್ತಿನಲ್ಲಿ 2436 ಮತ ಪಡೆದಿದ್ದ ಕುಮಾರ್ ಮೂರನೇ ಸುತ್ತಿನಲ್ಲಿ 2912 ಮತ ಪಡೆದುಕೊಂಡಿದ್ದಾರೆ. ಅದರಂತೆ ಧರ್ಮೇಶ್ ಸಿರಿಬೈಲ್ 3265 ಮತಗಳನ್ನ ಪಡೆದು ಮುನ್ನಡೆ ಸಾಧಿಸಿದ್ದಾರೆ. ಧರ್ಮೇಶ್ ಅವರು ನಾಲ್ಕನೇ ಸುತ್ತಿನಲ್ಲಿಯೂ ಹೆಚ್ಚು…

Read More

ಹೊಂಬುಜಾ ಪದ್ಮಾವತಿ ದೇವಿಗೆ ಬಳೆಗಳ ಅಲಂಕಾರ

ಧಾರ್ಮಿಕ ಕಂಕಣ ಬದ್ಧತೆಯ ಪ್ರತೀಕ ಬಳೆಗಳು, “ಸಮೃದ್ಧ ಸಂಸಾರಕ್ಕೆ ಸೋಪಾನವಾಗಲಿ” ; ಶ್ರೀಗಳು ರಿಪ್ಪನ್‌ಪೇಟೆ : ಜೀವನದಲ್ಲಿ ಧಾರ್ಮಿಕ ಪ್ರಜ್ಞೆಯಿಂದ ಕಂಕಣ ಬದ್ಧರಾಗಿ ನಿರ್ದಿಷ್ಟ ಕಾರ್ಯದಲ್ಲಿ ತಲ್ಲೀನರಾಗುವುದರಿಂದ ಯಶಸ್ಸು ನಿಶ್ಚಿತ. ಬಳೆಗಳನ್ನು ಅಭೀಷ್ಠವರಪ್ರದಾಯಿನಿ ಜಗದಾಂಬೆ ಯಕ್ಷಿ ಶ್ರೀ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಭಕ್ತಿಪೂರ್ವಕ ಸಮರ್ಪಿಸುವುದರಿಂದ ಭಕ್ತರಿಗೆ ಸಮೃದ್ಧ ಸಂಸಾರ ಸುಖ-ಶಾಂತಿ-ಆರೋಗ್ಯ ಲಭಿಸುವಂತಾಗುತ್ತದೆ ಎಂದು ಶ್ರೀ ಜೈನ ಮಠದ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ತಿಳಿಸಿದರು. ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿನಾಯಕ ಶ್ರೀ ಪಾರ್ಶ್ವನಾಥ…

Read More

ಶಿವಮೊಗ್ಗದಲ್ಲಿ ಮುಸ್ಲಿಂ ಸಂಘಟನೆಗಳು ಕರೆಕೊಟ್ಟಿದ್ದ ಒಕ್ಕೂಟ ಬಂದ್ ಬಹುತೇಕ ಯಶಸ್ವಿ :

ಮುಸ್ಲಿಂ ಸಂಘಟನೆಗಳ ಒಕ್ಕೂಟ ಇಂದು ಬಂದ್ ಗೆ ಕರೆಕೊಟ್ಟ ಹಿನ್ನಲೆಯಲ್ಲಿ ಮುಸ್ಲಿಂ ಅಂಗಡಿ ಮತ್ತು ಮಳಿಗೆಗಳು ಬಹುತೇಕ ಬಂದ್ ಮಾಡಲಾಗಿದೆ. ಹಿಜಬ್ ಬೆಂಬಲಿಸಿ ಕರೆಯಲಾದ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲಾಗಿತ್ತು. ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಲಾಗಿತ್ತು. ಶಿವಮೊಗ್ಗದಲ್ಲಿಯೂ ಸಹ‌ 19 ಮುಸ್ಲಿಂ ಸಂಘನೆಗಳು ಬಂದ್ ನಡೆಸಲು ತೀರ್ಮಾನಿಸಿತ್ತು‌. ತೀರ್ಮಾನದಂತೆ ಹಲವಾರು ಉದ್ಯಮಗಳ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಗೈರು ಹಾಜರಿದ್ದರು. ಅಮೀರ್ ಅಹ್ಮದ್ ವೃತ್ತ, ಓಟಿ ರಸ್ತೆ ಕೆ.ಆರ್ ಪುರಂ,…

Read More

ಶವ ಸಾಗಿಸಲು ರಸ್ತೆ ಸಂಪರ್ಕ ಇಲ್ಲದೆ ಮೌನಿಯಾಯಿತೆ ಬಡ ಕುಟುಂಬ ? ಗೌತಮಪುರ ದಲ್ಲೊಂದು ಹೃದಯ ವಿದ್ರಾವಕ ಘಟನೆ!!!

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮ ಇದೀಗ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಯಿತು. ಬಲಿಪಾಡ್ಯಮಿಯ ದಿನ ನಿನ್ನೆ ರಾಜಮ್ಮ 70  ವರ್ಷ ವಯೋ ಸಹಜತೆಯಿಂದ ಸಾವಿಗೀಡಾಗಿದ್ದಾರೆ  ಸುಮಾರು ಇಪ್ಪತ್ತು ವರ್ಷದಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ರಸ್ತೆ ತಡೆ ಹಾಕಿದ್ದು ನಂತರ  ಗ್ರಾಮಸಭೆಯಲ್ಲಿ ತೀರ್ಮಾನವಾದರೂ  ರಸ್ತೆ ತೆರವುಗೊಳಿಸಲು ಆದೇಶ ನೀಡಿದ್ದರೂ ಗ್ರಾಮಾಡಳಿತವಾಗಲಿ ಅಥವಾ ತಾಲ್ಲೂಕು ಆಡಳಿತವಾಗಲೀ ಈ ಕೆಲಸಕ್ಕೆ ಮುಂದಾಗಲಿಲ್ಲ. ಇದರ ಪರಿಣಾಮ ರಾಜಮ್ಮ ಮರಣಹೊಂದಿ 24 ಘಂಟೆ ಯಾದರೂ ಕೂಡ ಶವ ಸಾಗಿಸಲು…

Read More

ಯಾವುದೇ ಕಾರಣಕ್ಕೂ ಮುಸ್ಲಿಂ ಮತ ಕೇಳಲ್ಲ – ಕೆ ಎಸ್ ಈಶ್ವರಪ್ಪ

ಶಿವಮೊಗ್ಗ : ನಾನು ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಮುಸ್ಲೀಂ ಜನರ ಬಳಿ ಮತ ಕೇಳುವುದಿಲ್ಲವೆಂದು ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಮುಸ್ಲೀಂ ಮತಗಳ ಮೇಲೆ ಬಿಜೆಪಿ ಅವಲಂಬಿತವಾಗಿಲ್ಲ. ನಾನಂತು ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಮುಸ್ಲೀಂ ಜನರ  ಮತವನ್ನ ಕೇಳೊಲ್ಲ. 60 ಬೂತ್ ಗಳಲ್ಲಿ ಮುಸ್ಲೀಂ ಮತಗಳು ಬಿದ್ದಿವೆ. ಆದರೆ ವಿರೋಧ ಪಕ್ಷಗಳು ಮುಸ್ಲೀಂ ಮತಗಳ ಮೇಲೆ ಕಣ್ಣಿಟ್ಟು ಅವರನ್ನ ಓಲೈಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ನ್ನ‌ ಬೈದರೆ…

Read More