ಅಕ್ಟೋಬರ್ 26 ರಂದು ರಿಪ್ಪನ್ ಪೇಟೆಯಲ್ಲಿ ನವೀಕೃತ ಗುಡ್ಶಫರ್ಡ್ ಚರ್ಚ್ ಲೋಕಾರ್ಪಣೆ’|Ripponpet
ರಿಪ್ಪನ್ಪೇಟೆ;-ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ಗುಡ್ಶಫರ್ಡ್ ಫೂರಾನ ಚರ್ಚ್ ನವೀಕರಣಗೊಂಡು ಇದೇ ಅಕ್ಟೋಬರ್ ೨೬ ರಂದು ಬುಧವಾರ ಮಧ್ಯಾಹ್ನ ೩-೪೫ ಕ್ಕೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಲೋಕಾರ್ಪಣೆ ಕಾರ್ಯಕ್ರಮವು ಭದ್ರಾವತಿಯ ಎಂ.ಸಿ.ಬಿ.ಎಸ್.ಬೀಷಪ್ ಧರ್ಮಕ್ಷೇತ್ರದ ಜೋಸೆಫ್ ಅರುಮಜ್ಜಾ ಡತ್ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ,ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹರತಾಳು ಹಾಲಪ್ಪ, ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷಿ, ಗ್ರಾ.ಪಂ ಸದಸ್ಯರಾದ.ಈ.ಮಧುಸೂದನ್,ಪಿ.ರಮೇಶ್, ವನಮಾಲ,ಮದರ್ ಸುಪೀರಿಯರ್ ಮ.ಲಿಸ್ಸಾಮರಿಯಾ,ಭದ್ರಾವತಿ ಧರ್ಮಕ್ಷೇತ್ರದ…