ಸೊರಬ:ವಿದ್ಯುತ್ ತಗುಲಿ ಮಹಿಳೆ ಸಾವು ಪ್ರಕರಣ,ಕುಟುಂಬಕ್ಕೆ ಸಾಂತ್ವಾನ
ಸೊರಬ: ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಮೀಪದ ಕತ್ವಾಯಿ ಗ್ರಾಮದಲ್ಲಿ ನಡೆದಿತ್ತು.ಇಂದು ಅವರ ಮನೆಗೆ ಬಿಜೆಪಿ ಮುಖಂಡ ಕಡಸೂರು ಶಿವಕುಮಾರ್ ಭೇಟಿ ನೀಡಿ ಸಾಂತ್ವಾನ ಹೇಳಿದರು. ಕುಟುಂಬದವರಿಗೆ ಸಾಂತ್ವಾನ ಹೇಳಿ ಅವರ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಕುಟುಂಬದವರಲ್ಲಿ ಮುಂದಿನ ದಿನಗಳಲ್ಲಿ ಜೊತೆಯಲ್ಲಿರುತ್ತೇವೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಸಲೀಂ, ಮುಖಂಡರಾದ ದಿನೇಶ್ ಹೆಚ್ ನಾಯ್ಕ, ಕನದಾಸ ಕಲ್ಲಂಬಿ, ಪಕ್ಕೀರಪ್ಪ ದ್ಯಾಮಪ್ಪ ಆನಂದಣ್ಣ ಮತ್ತಿತರರು ಇದ್ದರು. ಮಂಗಳವಾರ ನಡೆದಿತ್ತು…