Headlines

KFD | ತೀರ್ಥಹಳ್ಳಿಯಲ್ಲಿ ಈ ವರ್ಷದ ಮೊದಲ ಮಂಗನ ಖಾಯಿಲೆ ಪತ್ತೆ

ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಖಾಯಿಲೆ ಪತ್ತೆ ತೀರ್ಥಹಳ್ಳಿ : ಈ ವರ್ಷದ ಮೊದಲ ಮಂಗನ ಕಾಯಿಲೆ (KFD) ಪ್ರಕರಣ ಪತ್ತೆಯಾಗಿದ್ದು, ತೀರ್ಥಹಳ್ಳಿ (Thirthahalli) ತಾಲ್ಲೂಕಿನ ಶೇಡ್ಗಾರ್ (Shedgar) ಬಳಿಯ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಆರ್‌ಟಿಸಿಪಿಆರ್‌ನಲ್ಲಿ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ ಮಹಿಳೆ ಆರೋಗ್ಯ ಸ್ಥಿರವಾಗಿದ್ದು ಅವರನ್ನು ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತ್ತಿಸರ ಕಾಡಂಚಿನ ಗ್ರಾಮವಾಗಿದ್ದು ಈ ಹಿಂದೆಯು ಈಭಾಗದಲ್ಲಿ ಕೆಎಫ್‌ಡಿ ಪ್ರಕರಣಗಳು ಕಂಡುಬಂದಿವೆ. ಕೆಲ ದಿನಗಳ ಹಿಂದೆ ಕೊಪ್ಪ ತಾಲ್ಲೂಕಿನ ಗುಣವಂತೆ ಗ್ರಾಮದ…

Read More

Ripponpete | ಅಯೋಧ್ಯ ಶ್ರೀರಾಮಮಂದಿರ ಮಂತ್ರಾಕ್ಷತೆಗೆ ಭವ್ಯ ಸ್ವಾಗತ

ರಿಪ್ಪನ್‌ಪೇಟೆ : ಜನವರಿ 22 ಎಂದು ಆಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಆಮಂತ್ರಣ ಮತ್ತು ಮಂತ್ರಾಕ್ಷತೆ ವಿತರಣೆಯ ಅಂಗವಾಗಿ ರಿಪ್ಪನ್‌ಪೇಟೆ ವಿನಾಯಕ ವೃತ್ತಕ್ಕೆ ಅಯೋಧ್ಯ ಶ್ರೀರಾಮಮಂದಿರ ಮಂತ್ರಾಕ್ಷತೆ ಬರುತ್ತಿದ್ದಂತೆ ಭವ್ಯ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ಶಿವಮೊಗ್ಗ ರಸ್ತೆಯಲ್ಲಿರುವ ಶ್ರೀ ವಿಘ್ನನಿವಾರಕ ದೇವಸ್ಥಾನದಲ್ಲಿಟ್ಟು ಪೂಜೆ ಸಲ್ಲಿಸಿದರು. ಎನ್.ಸತೀಶ್ ಮಂತ್ರಾಕ್ಷತೆಯ ಕೊಡಪಾನವನ್ನು ಹೊತ್ತು ಮೆರವಣಿಗೆಯಲ್ಲಿ ಅಪಾರ ಭಕ್ತ ಸಮೂಹದೊಂದಿಗೆ ಭಕ್ತಿ ಶ್ರದ್ದೆಯಿಂದ ಶ್ರೀರಾಮನ ಜಯಘೋಷಣೆಯೊಂದಿಗೆ ತೆರಳಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರ್ ಶೆಟ್ಟಿ ,…

Read More

ಪತಿಯಿಂದಲೇ ಪತ್ನಿಯ ಹತ್ಯೆ..!! | Crime News

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಪತ್ನಿಯನ್ನ ಪತಿಯೊಬ್ಬ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  ಕಳೆದ ಬುಧವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ.  ರಮ್ಯಾ (೩೬) ಹತ್ಯೆಯಾಗಿದ್ದು, ಈಕೆಯ ಪತಿ ನಾಗಭೂಷಣ್ ಎಂಬುವರು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಾಗಭೂಷಣ್ ಆಟೋ ಚಾಲಕನಾಗಿದ್ದು, ದಂಪತಿಗೆ ಸುಮಾರು ೧೬ ವರ್ಷ ವಯಸ್ಸಿನ ಪುತ್ರ ಇದ್ದಾನೆ. ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದರು…

Read More

Ripponpete | ಅಡಿಕೆ,ರಬ್ಬರ್ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Ripponpete | ಅಡಿಕೆ,ರಬ್ಬರ್ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು ರಿಪ್ಪನ್‌ಪೇಟೆ : ಪಟ್ಟಣದ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿ ಒಣಗಿಸಿಡುತಿದ್ದ ಅಡಿಕೆ,ರಬ್ಬರ್ ಕಳ್ಳತನ ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಪ್ರವೀಣ್ ಶಿವಪುರ , ನಾಗಭೂಷಣ್@ನಾಗ ಶಿವಪುರ ಮತ್ತು ಪ್ರತಾಪ್ ನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳು ನಡೆದ ಕಳ್ಳತನದ ಪ್ರಕರಣವನ್ನು ಬೆನ್ನತ್ತಿದ್ದ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತೃತ್ವದ ಸಿಬ್ಬಂದಿಗಳ ತಂಡ ನವೆಂಬರ್ 27…

Read More

Ripponpete | ಸನಾತನ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತ – ಶ್ರೀ ರೇಣುಕಾನಂದ ಸ್ವಾಮೀಜಿ

“ಸನಾತನ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತ’’ ರಿಪ್ಪನ್‌ಪೇಟೆ;-ಸನಾನತ ಧರ್ಮ ಸಂಸ್ಕೃತಿ ಸಾರುವ ವಿಶಿಷ್ಟ ದೇಶ ಭಾರತವಾಗಿದೆ.ವಿಶ್ವಕ್ಕೆ ಶಾಂತಿ ನೆಮ್ಮದಿಯನ್ನು ಸಾರುವ ಧರ್ಮ ಹಿಂದು ಧರ್ಮದಾಗಿದೆ ಎಂದು ನಿಟ್ಟೂರು ಆರ್ಯಈಡಿಗಾ ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾಸ್ವಾಮೀಜಿ ಹೇಳಿದರು. ರಿಪ್ಪನ್‌ಪೇಟೆಯಲ್ಲಿ ಇಂದು ಆಯೋಧ್ಯೆ ಶ್ರೀರಾಮ ಮಂದಿರ ಮಂತ್ರಾಕ್ಷತೆ ಆಭಿಯಾನ ಮನೆಮನೆ ಸಂಪರ್ಕ ಆಭಿಯಾನ ಸಮಿತಿಯವರು ಆಯೋಜಿಸಲಾದ ಬೃಹತ್ ಆಭಿಯಾನ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಭಾರತ ಪುಣ್ಯ ಪುರುಷರ ಸಂತರ ಶರಣರ ಪುಣ್ಯ ಭೂಮಿ…

Read More

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ | excise raid

ಅಬಕಾರಿ ಅಧಿಕಾರಿಗಳ ದಾಳಿ – ಗಾಂಜಾ ಸಮೇತ ಮೂವರ ಬಂಧನ ಶಿವಮೊಗ್ಗದ ಅಬಕಾರಿ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಸಿಕ್ಕ ಮಾಹಿತಿ ಅನ್ವಯ ಗಾಂಜಾ ಸಾಗಿಸುತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿ ಗಾಂಜಾವನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ. ಅಬಕಾರಿ ಜಂಟಿ ಆಯುಕ್ತರು , ಮಂಗಳೂರು ವಿಭಾಗ ಮತ್ತು ಸುಮಿತ  ಕೆ ಕೆ ಅಬಕಾರಿ ಉಪ ಆಯುಕ್ತರು,  ಶಿವಮೊಗ್ಗ ಜಿಲ್ಲೆ ಇವರುಗಳ ನಿರ್ದೇಶನದಲ್ಲಿ ನೌಶಾದ್ ಅಹಮದ್ ಖಾನ್,  ಉಪ ಅಧಿಕ್ಷಕರು ಉಪ ವಿಭಾಗ ಶಿವಮೊಗ್ಗ ಇವರ ಮಾರ್ಗದರ್ಶನ ದಲ್ಲಿ…

Read More

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ – ಸಾಗರ ಮೂಲದ ವ್ಯಕ್ತಿ ಬಂಧನ | Arrested

ಜಿಂಕೆ ಚರ್ಮ ,ಕೊಂಬು ಮಾರಾಟಕ್ಕೆ ಯತ್ನ –  ಸಾಗರ ಮೂಲದ ವ್ಯಕ್ತಿ ಬಂಧನ  ಜಿಂಕೆ ಚರ್ಮ, ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನು ಬೆಂಗಳೂರು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಂದ್ರಶೇಖರಪ್ಪ ಗೌಡ (43) ಎಂಬಾತನನ್ನು ಬಂಧಿಸಲಾಗಿದೆ.  ಆರೋಪಿಯಿಂದ ಒಂದು ಜಿಂಕೆ ಚರ್ಮ, 12 ಜಿಂಕೆ ಕೊಂಬುಗಳು ಹಾಗೂ 2 ಕಾಡೆಮ್ಮೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿ ಜಿಂಕೆ ಚರ್ಮ ಮಾರಾಟಕ್ಕೆ…

Read More

ಡಿ.15 ಕ್ಕೆ ಶಿವಮೊಗ್ಗದಲ್ಲಿ ಸ್ವಲಾತ್ ವಾರ್ಷಿಕೋತ್ಸವದ ಅಂಗವಾಗಿ ಹುಬ್ಬೂರಸೂಲ್ ಕಾನ್ಪರೆನ್ಸ್

ಶಿವಮೊಗ್ಗ : ಅಲ್ ಹಿದಾಯ ಇಹ್ವಾನ್ ಸೆಂಟರ್ ಆಶ್ರಯದಲ್ಲಿ   ಸ್ವಲಾತ್ ವಾರ್ಷಿಕೋತ್ಸವದ ಅಂಗವಾಗಿ ಹುಬ್ಬೂರಸೂಲ್ ಕಾನ್ಪರೆನ್ಸ್ ಡಿ.15 ರಂದು ಮರ್ಹೂಂ ಹೈದರ್ ಅಲಿ ನಿಝಾಮಿ ವೇದಿಕೆ, ಯುನಿಟಿ ಹಾಲ್ ಮುಂಭಾಗ, ಆರ್ ಎಂಎಲ್ ನಗರದಲ್ಲಿ ನಡೆಯಲಿದೆ. ಶುಕ್ರವಾರ ಮಗ್ರಿಬ್ ನಮಾಜ್ ನಂತರ ಸಯ್ಯಿದ್ ಶಿವಮೊಗ್ಗ ತಂಗಳ್ , ಸಯ್ಯದ್ ತೀರ್ಥಹಳ್ಳಿ ತಂಗಳ್, ಶೈಖುನಾ ಕಾರ್ಗಲ್ ಉಸ್ತಾದ್ , ಸಯ್ಯದ್ ಯೂಸುಫ್ ತಂಗಲ್ , ಸಯ್ಯದ್ ಶಫೀಖ್ ತಂಗಲ್ ರವರ ನೇತೃತ್ವದಲ್ಲಿ ಹುಬ್ಬೂರಸೂಲ್ ಕಾನ್ಪರೆನ್ಸ್ ನಡೆಯಲಿದೆ  ಹಾಫಿಲ್ ಸ್ವಾದಿಖ್…

Read More

ನಿವೇಶನ ಖರೀದಿಸುವಾಗ ಇರಲಿ ಎಚ್ಚರ ! ನಕಲಿ ದಾಖಲೆ ಸೃಷ್ಟಿಸಿ ಮೋಸದ ದಂಧೆಕೋರರ ಬಗ್ಗೆ ಹುಷಾರ್..| Real estate fraud

ನಿವೇಶನ ಖರೀದಿಸುವಾಗ ಇರಲಿ ಎಚ್ಚರ ! ನಕಲಿ ದಾಖಲೆ ಸೃಷ್ಟಿಸಿ ಮೋಸಗೈಯುವ ದಂಧೆಕೋರರ ಬಗ್ಗೆ ಹುಷಾರ್.. ಶಿವಮೊಗ್ಗ: ಕನಸಿನ ಮನೆ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ತರಾತುರಿಯಲ್ಲಿ ಸೈಟ್‌ ಖರೀದಿಸಿ, ಕೊನೆಗೆ ಅವೆಲ್ಲವೂ ನಕಲಿ ದಾಖಲೆಗಳೆಂದು ತಿಳಿದು ಮೋಸ ಹೋಗುತ್ತಿರುವ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ನಿವೇಶನ ಖರೀದಿಯಲ್ಲಿ ನಕಲಿ ದಾಖಲೆಗಳ ಹಾವಳಿ ಹೆಚ್ಚಾಗಿದೆ. ಕಡಿಮೆ ದರದಲ್ಲಿ ನಗರದ ಹೃದಯ ಭಾಗದಲ್ಲಿ ನಿವೇಶನ ಸಿಗುತ್ತದೆಂಬ ಆಸೆಯಿಂದ ಜನರು ಯಾರದೋ ಬಳಿ ನಿವೇಶನ ಖರೀದಿಸಿ ಪೇಚಿಗೆ ಬೀಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2021ರಿಂದ…

Read More

ಮುರುಘಾ ಮಠದಲ್ಲಿ ಐತಿಹಾಸಿಕ ಕಂಚಿನ ದೀಪ ರಥೋತ್ಸವ – ಪದ್ಮಶ್ರೀ ಮಂಜಮ್ಮ ಜೋಗತಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ | murugha matt

ಮುರುಘಾ ಮಠದಲ್ಲಿ ಐತಿಹಾಸಿಕ ಕಂಚಿನ ದೀಪ ರಥೋತ್ಸವ – ಪದ್ಮಶ್ರೀ ಮಂಜಮ್ಮ ಜೋಗತಿಗೆ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ | murugha matt ಸಾಗರ (Sagara) ತಾಲೂಕಿನ ಆನಂದಪುರ ಮುರುಘಾಮಠದಲ್ಲಿ ಮಂಗಳವಾರ ಐತಿಹಾಸಿಕ ಕಂಚಿನ ದೀಪ ರಥೋತ್ಸವ ನಿಮಿತ್ತ ಭಾವೈಕ್ಯ ಸಮ್ಮೇಳನ ವೈಭವದಿಂದ ನಡೆಯಿತು. ಪ್ರತಿ ವರ್ಷ ಶ್ರೇಷ್ಠ ಸಾಧಕಿ ಮಹಿಳೆಗೆ ಕೆಳದಿ ರಾಣಿ ಚೆನ್ನಮ್ಮ ರಾಣಿ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಮಂಜಮ್ಮ ಜೋಗತಿಗೆ ಕೆಳದಿ ರಾಣಿ ಚೆನ್ನಮ್ಮ…

Read More