ಶಿವಮೊಗ್ಗ : ಅಲ್ ಹಿದಾಯ ಇಹ್ವಾನ್ ಸೆಂಟರ್ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕೋತ್ಸವದ ಅಂಗವಾಗಿ ಹುಬ್ಬೂರಸೂಲ್ ಕಾನ್ಪರೆನ್ಸ್ ಡಿ.15 ರಂದು ಮರ್ಹೂಂ ಹೈದರ್ ಅಲಿ ನಿಝಾಮಿ ವೇದಿಕೆ, ಯುನಿಟಿ ಹಾಲ್ ಮುಂಭಾಗ, ಆರ್ ಎಂಎಲ್ ನಗರದಲ್ಲಿ ನಡೆಯಲಿದೆ.
ಶುಕ್ರವಾರ ಮಗ್ರಿಬ್ ನಮಾಜ್ ನಂತರ ಸಯ್ಯಿದ್ ಶಿವಮೊಗ್ಗ ತಂಗಳ್ , ಸಯ್ಯದ್ ತೀರ್ಥಹಳ್ಳಿ ತಂಗಳ್, ಶೈಖುನಾ ಕಾರ್ಗಲ್ ಉಸ್ತಾದ್ , ಸಯ್ಯದ್ ಯೂಸುಫ್ ತಂಗಲ್ , ಸಯ್ಯದ್ ಶಫೀಖ್ ತಂಗಲ್ ರವರ ನೇತೃತ್ವದಲ್ಲಿ ಹುಬ್ಬೂರಸೂಲ್ ಕಾನ್ಪರೆನ್ಸ್ ನಡೆಯಲಿದೆ
ಹಾಫಿಲ್ ಸ್ವಾದಿಖ್ ಅಲಿ ಫಾಳಿಲಿ ನೇತೃತ್ವದಲ್ಲಿ ಬುರ್ದಾ ಕಾರ್ಯಕ್ರಮ ನಡೆಯಲಿದ್ದು, ನಬೀಲ್ ಬರಕಾತಿ ಬೆಂಗಳೂರು ರವರ ನೇತೃತ್ವದಲ್ಲಿ ನಅತೇ ಶರೀಫ್ ನಡೆಯಲಿದೆ.
ಈ ಹುಬ್ಬೂರಸೂಲ್ ಕಾನ್ಪರೆನ್ಸ್ ಗೆ ಸಮಾಜದ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಲ್ ಹಿದಾಯ ಇಹ್ವಾನ್ ಸೆಂಟರ್ ನ ಪ್ರಮುಖರು ಮನವಿ ಮಾಡಿದ್ದಾರೆ.