Headlines

ಗಾಂಜಾ ವಶ – ನಾಲ್ವರ ಬಂಧನ

ಗಾಂಜಾ ವಶ – ನಾಲ್ವರ ಬಂಧನ ನ್ಯಾಮತಿ – ಹೊನ್ನಾಳಿ – ಶಿವಮೊಗ್ಗ ರಸ್ತೆ ಬದಿಯ ಕಲ್ಪಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ನ್ಯಾಮತಿ ಠಾಣೆಯ ಪೊಲೀಸರು ಬಂಧಿಸಿ ಅಂದಾಜು 13.20 ಮೌಲ್ಯದ 3.1 ಕೆ.ಜಿ.ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಅರ್ಬಾಜ್ ಖಾನ್ (27), ಮಹಮ್ಮದ್ ಹುಸೈನ್ ರಝಾ (23), ಜಾಫರ್ ಸಾದಿಕ್ (22), ಮಹಮ್ಮದ್ ರೋಹೀತ್ (31) ಹಾಗೂ ನ್ಯಾಮತಿ ತಾಲ್ಲೂಕಿನ  ಹೊಸಜೋಗ ಗ್ರಾಮದ ಶಂಕರನಾಯ್ಕ (29) ಬಂಧಿತರು….

Read More

ಕ್ರೈಸ್ತ ಸಮುದಾಯದ ಮೇಲೆ ಅಪಪ್ರಚಾರ ಸಲ್ಲ : ಬಿ ರಾಜಶೇಖರ್

ಶಿವಮೊಗ್ಗ :  ಕ್ರೈಸ್ತ ಸಮುದಾಯವನ್ನ ನಿಯಂತ್ರಿಸಲು ಮತಾಂತರ ಕಾಯ್ದೆ ಜಾರಿಗೊಳಿಸಬೇಕೆಂಬ ಚರ್ಚೆ ಆಗುತ್ತಿದ್ದು ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿ ಎಲ್ಲೂ ಮತಾಂತರ ಮಾಡುತ್ತಿಲ್ಲವೆಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಸ್ಪಷ್ಟಪಡಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬಿ.ರಾಜಶೇಖರ್ ಮಾತನಾಡಿ, ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಮಾತನಾಡಿ, ಕ್ರೈಸ್ತ ಮಿಷನರಿಗಳಿಂದ ವ್ಯಾಪಕ ಮತಾಂತರಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಅತ್ಯಾಚಾರದ ಪ್ರಕರಣಗಳನ್ನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಸದನದಲ್ಲಿ ಮತಾಂತರ ಕಾಯ್ದೆ ಜಾರಿಗೆ…

Read More

ಹೊಸನಗರದ ನೂತನ ತಹಶೀಲ್ದಾರ್ ಆಗಿ ರಶ್ಮಿ ಹೆಚ್ ಜಿ ಅಧಿಕಾರ ಸ್ವೀಕಾರ|Hosanagara

ಹೊಸನಗರದ ನೂತನ ತಹಶೀಲ್ದಾರ್ ಆಗಿ ರಶ್ಮಿ ಹೆಚ್ ಜಿ ಅಧಿಕಾರ ಸ್ವೀಕಾರ|Hosanagara ಹೊಸನಗರ : ಸುಮಾರು 4 ತಿಂಗಳುಗಳ ಕಾಲ ಹೊಸನಗರ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರು ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯರ್ವಹಿಸುತ್ತಿದ್ದರು. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಶ್ಮಿ ಹೆಚ್.ಜೆಯವರು ಅಲ್ಲಿಂದ ವರ್ಗಾವಣೆಗೊಂಡು ಹೊಸನಗರ ತಹಶೀಲ್ದಾರ್‌ರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿ ತಹಶೀಲ್ದಾರ್ ರಶ್ಮಿ ಪತ್ರಕರ್ತರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿರುವ ಯಾವುದೇ…

Read More

ಶಾಂತಿ ಸೌಹಾರ್ಧತೆಯಿಂದ ಐಕ್ಯತೆ ಸಾಧ್ಯ – ಸೊನಲೆ ಶ್ರೀನಿವಾಸ್

ರಿಪ್ಪನ್‌ಪೇಟೆ : ಶಾಂತಿ, ಸೌಹಾರ್ಧತೆಯನ್ನು ಬೆಳೆಸಿದರೆ ಮಾತ್ರ ದೇಶದಲ್ಲಿ ಐಕ್ಯತೆ ಸಾಧ್ಯ. ಜತೆಗೆ ಸರ್ವರೂ ಸಮನ್ವಯತೆಯಿಂದ ಬದುಕಬಹುದು ಎಂದು ಇತಿಹಾಸಕಾರ ಸೊನಲೆ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಹೊಸನಗರ ರಸ್ತೆಯ ಜುಮ್ಮಾ ಮಸೀದಿ ಆವರಣದ ಕೂರ ತಂಝಲ್ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸಿದ್ದ ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವ ಜನಾಂಗದ ಮನಸ್ಸುಗಳನ್ನು ಗಟ್ಟಿಗೊಳಿಸಿದರೆ ದೇಶ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮತ್ತೊಮ್ಮೆ ಪ್ರಚೋಧನಾಕಾರಿಗಳೇ ಪ್ರಜ್ವಲಿಸುತ್ತವೆ. ಇದರಿಂದ ದೇಶದಲ್ಲಿ ಅಶಾಂತಿ…

Read More

ಶಿವಮೊಗ್ಗ: ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಯಾಗ

ಶಿವಮೊಗ್ಗ : ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ ವಿಚಾರ ಮಂಚ್ ಹಾಗೂ ಅರ್ಚಕರ ವೃಂದದಿಂದ ಪ್ರಧಾನಿ ಮೋದಿ ಅವರ 71 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭೀಮರಥ ಶಾಂತಿ ಮತ್ತು ಮಹಾಗಣಪತಿ ಯಾಗ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ, ಪ್ರಧಾನಿ ಮೋದಿ ಅವರು ಕೊರೋನ ಲಸಿಕೆ ಹಂಚಿಕೆಯನ್ನ ಗುರಿಯಾಗಿ ಇಟ್ಟುಕೊಂಡು ಮುಂದುವರಿದು ಇಂದು ಯಶಸ್ವಿಯಾಗಿ 80 ಕೋಟಿ ಜನರಿಗೆ ಲಸಿಕೆ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸೆ. 17 ರ ಅವರ ಹುಟ್ಟುಹಬ್ಬದ…

Read More

Ripponpete | ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು  ರಿಪ್ಪನ್‌ಪೇಟೆ – ಸಹಕಾರಿ ಕ್ಷೇತ್ರವನ್ನು ನಾವು ಇಂದು ಉಳಿಸಿ ಬೆಳೆಸಬೇಕಾಗಿದೆ. ಹಳೆ ನಂಬರ್ ಕ್ಷೇತ್ರದ ರೈತರ ಪರವಾಗಿ ಸದಾ ನಾನು ನಿಮ್ಮೊಂದಿಗೆ ಧ್ವನಿಯಾಗಿರುತ್ತೇನೆ  ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ  ಎತ್ತರಕ್ಕೆ ಬೆಳೆಸುವಂತೆ  ಆಗಬೇಕು ಎಂದು ಶಾಸಕ  ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ  ನಡೆದ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಡಿಸಿಸಿ ಬ್ಯಾಂಕ್, ಸಹಕಾರ ಹಾಲು…

Read More

ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 35000 ಸಾವಿರ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.   ನಮ್ಮಲ್ಲಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ಪರಿಸ್ಥಿತಿಯಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಬಿಡುತ್ತಾರೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯಿಂದ ಮಕ್ಕಳ ಶಿಕ್ಷಣ ಬಿಡಬಾರದೆಂದು ಕರ್ನಾಟಕ ಸಮಾಜ ಕಲ್ಯಾಣ ವತಿಯಿಂದ ಸರ್ಕಾರವು ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಅಧ್ಯಯನಕ್ಕೆ ಪ್ರೋತ್ಸಾಹಧನವನ್ನು ವಿಂಗಡಿಸಲಾಗಿದೆ. ಪಿಯುಸಿ ಮತ್ತು ಡಿಪ್ಲೋಮೋ : 20000/- ಯಾವುದೇ ಪದವಿ…

Read More

ವಸತಿ ಶಾಲೆ ಶಿಕ್ಷಕನ ವಿರುದ್ದ ಫೋಕ್ಸೋ ದೂರು – ಆರೋಪಿಯ ಬಂಧನ

ವಸತಿ ಶಾಲೆ ಶಿಕ್ಷಕನ ವಿರುದ್ದ ಫೋಕ್ಸೋ ದೂರು – ಆರೋಪಿಯ ಬಂಧನ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರುತ್ತಿರುವ ಆರೋಪದಲ್ಲಿ ಸಂಗೀತ ಶಿಕ್ಷಕನೊಬ್ಬನ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ದೂರೊಂದು ದಾಖಲಾಗಿದೆ. ದೂರು ದಾಖಲಾಗುತಿದ್ದಂತೆ ಆರೋಪಿ ಇಮ್ತಿಯಾಜ್ ಸುಲ್ತಾನ್(45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಸತಿ ಶಾಲೆಯಲ್ಲಿ ಹಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿರುವ ಶಿಕ್ಷಕನ ದುರ್ವರ್ತನೆ ಬಗ್ಗೆ  ವಿದ್ಯಾರ್ಥಿನಿಯರೇ ಪ್ರಾಂಶುಪಾಲರಿಗೆ ದೂರು ನೀಡಿರುವುದಾಗಿ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಾಂಶುಪಾಲರೇ ದೂರು…

Read More

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ

ಹೊಸನಗರ ಮೂಲದ ಗರ್ಭಿಣಿ ವೈದ್ಯರ ನಿರ್ಲಕ್ಶ್ಯಕ್ಕೆ ಸಾವು | ಸಾಗರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ದ ಕುಟುಂಬಸ್ಥರ ಆಕ್ರೋಶ ಹೊಸನಗರ ತಾಲೂಕಿನ ನಗರ ಮೂಲದ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೊಸನಗರ ತಾಲೂಕಿನ ನಗರ ಹೋಬಳಿಯ ದುಬಾರತಟ್ಟಿ ಗ್ರಾಮದಲ್ಲಿ ಶಿಕ್ಷಕಿಯಾಗಿದ್ದ ಅಶ್ವಿನಿ ಕೆ.ಆರ್ ಎಂಬುವರು ಒಂದುವರೆ ವರ್ಷದ ಹಿಂದೆ  ಪ್ರಕಾಶ್ ಎಂಬುವರ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು.ಇವರು ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ…

Read More

ಇನ್ನೂ ಮುಂದೆ “ರಕ್ತ ಮಾರಾಟಕ್ಕಿಲ್ಲ” | ಸಂಸ್ಕರಣಾ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಶುಲ್ಕ ಮನ್ನಾ – ಕೇಂದ್ರ ಸರ್ಕಾರದ ಮಹತ್ವದ ಕ್ರಮ GOOD NEWS

ಇನ್ನೂ ಮುಂದೆ “ರಕ್ತ ಮಾರಾಟಕ್ಕಿಲ್ಲ” | ಸಂಸ್ಕರಣಾ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಶುಲ್ಕ ಮನ್ನಾ – ಕೇಂದ್ರ ಸರ್ಕಾರ ಮಹತ್ವದ ಕ್ರಮ ಆಸ್ಪತ್ರೆಗಳು ಮತ್ತು ಖಾಸಗಿ ರಕ್ತ ಬ್ಯಾಂಕುಗಳಲ್ಲಿ ರಕ್ತಕ್ಕೆ ಹೆಚ್ಚಿನ ಶುಲ್ಕ ವಿಧಿಸುವ ತೊಂದರೆಯನ್ನ ಪರಿಹರಿಸಲು, ಸಂಸ್ಕರಣಾ ಶುಲ್ಕವನ್ನ ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. “ರಕ್ತವು ಮಾರಾಟಕ್ಕಿಲ್ಲ” ಎಂಬ ಆಧಾರದ ಮೇಲೆ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ, ಇದರ ಆಧಾರದ ಮೇಲೆ ಆರೋಗ್ಯ ನಿಯಂತ್ರಕವು ಭಾರತದಾದ್ಯಂತ ರಕ್ತ ವಿತರಣೆಯನ್ನ ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನ…

Read More