Headlines

ಗಾಂಜಾ ಮಾರಾಟ – ಇಬ್ಬರಿಗೆ ಮೂರು ವರ್ಷ ಶಿಕ್ಷೆ, ದಂಡ

ಗಾಂಜಾ ಮಾರಾಟ – ಇಬ್ಬರಿಗೆ ಮೂರು ವರ್ಷ ಶಿಕ್ಷೆ, ದಂಡ ಶಿವಮೊಗ್ಗ : ಇಲ್ಲಿನ  ನ್ಯಾಯಾಲಯ  ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಿದೆ. ಶಿವಮೊಗ್ಗ  ಸಾಗರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  04-08-2021 ರಂದು ನಡೆದ ಪ್ರಕರಣ ಇದಾಗಿದೆ. ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಅಂದಿನ ಇನ್​ಸ್ಪೆಕ್ಟರ್ ಅಶೋಕ್ ಕುಮಾರ್  ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ  ಒಟ್ಟು 1…

Read More

ಬಸ್ ಹತ್ತುವಾಗ ಮಹಿಳೆಯ ಸರ ಅಪಹರಣ

ಬಸ್ ಹತ್ತುವಾಗ ಮಹಿಳೆಯ ಸರ ಅಪಹರಣ ಶಿವಮೊಗ್ಗ: ತಮ್ಮ ಮಗಳನ್ನು ಭೇಟಿಯಾಗಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದ ಶಿವಮೊಗ್ಗದ 63 ವರ್ಷದ ವೃದ್ಧೆ ಯೊಬ್ಬರು ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಮಾಂಗಲ್ಯ ಸರ ಕಳೆದುಕೊಂಡಿರುವ ಘಟನೆ ನಡೆದಿದೆ. ಪ್ರಯಾಣಕ್ಕಾಗಿ ಬಸ್ ಹತ್ತುತ್ತಿದ್ದಾಗ ನಿಲ್ದಾಣದಲ್ಲಿ ಭಾರೀ ಜನದಟ್ಟಣೆ ಇತ್ತು. ಜನದಟ್ಟಣೆಯ ಮಧ್ಯೆ ಬಸ್‌ನಲ್ಲಿ ಸೀಟು ಹಿಡಿಯಲು ಮುಂದಾಗಿದ್ದ ವೃದ್ಧೆಯ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಬಸ್‌ನಲ್ಲಿ ಸೀಟು ಹಿಡಿದ ಬಳಿಕ ರಾತ್ರಿ…

Read More

ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವೃದ್ದ ಸಾವು

ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವೃದ್ದ ಸಾವು ಜಾನುವಾರುಗಳಿಗೆ ಗದ್ದೆಯಲ್ಲಿ ಮೇವು ಕೊಯ್ಯುವಾಗ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದಲ್ಲಿ ನಡೆದಿದೆ. ಹುಚ್ಚನಾಯಕ್(65) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ತಮ್ಮ ಹಸುಗಳಿಗೆ ಮೇವು ತರಲು ಗದ್ದೆಗೆ ತೆರಳಿದ್ದ ಅವರು ಹುಲ್ಲು ಕೊಯ್ಯುವಾಗ ಕಾಲಿಗೆ ವಿಷಪೂರಿತ ಹಾವು ಕಚ್ಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ

ಕೊಲೆ ಪ್ರಕರಣದ ಆರೋಪಿಗೆ ಕಠಿಣ ಜೈಲು ಶಿಕ್ಷೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವಕನೋರ್ವನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಅಜ್ಗರ್ ಖಾನ್ (21) ಶಿಕ್ಷೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಅಪರಾಧಿಗೆ  ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ರೂ. ದಂಡ ಕೂಡ ನ್ಯಾಯಾಲಯ ವಿಧಿಸಿದೆ. ನ್ಯಾಯಾಧೀಶರಾದ ಯಶವಂತ್ ಕುಮಾರ್ ರವರು 8-10-2025 ರಂದು ಈ…

Read More

ಕೋಣಂದೂರು – ಹಾವು ಕಡಿದು ವೃದ್ಧೆ ಸಾವು

ಕೋಣಂದೂರಿನಲ್ಲಿ ದಾರುಣ ಘಟನೆ: ಹಾವು ಕಡಿದು ವೃದ್ಧೆ ಸಾವು ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಆಲಸೆ ಗ್ರಾಮದಲ್ಲಿ ನಡೆದ ಹಾವು ಕಡಿತದ ಘಟನೆ ದಾರುಣ ಅಂತ್ಯ ಕಂಡಿದೆ. ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವು ಜಾನಕಮ್ಮ (85) ಎಂಬ ವೃದ್ಧೆಯನ್ನು ಕಡಿದ ಪರಿಣಾಮ, ಅವರು ಮೃತಪಟ್ಟಿದ್ದಾರೆ. ಘಟನೆಯ ನಂತರ ಆತಂಕಗೊಂಡ ಸ್ಥಳೀಯರು ತಕ್ಷಣ ಜಾನಕಮ್ಮ ಅವರನ್ನು ಹೊತ್ತು ಗೌರಿ ಹೊಳೆ ದಾಟಿ ನಡೆದುಕೊಂಡೇ ಕೋಣಂದೂರು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ,…

Read More

ಹಲ್ಲೆಗೊಳಗಾಗಿದ್ದ ಅಮ್ಜದ್ ಚಿಕಿತ್ಸೆ ಫಲಿಸದೇ ಸಾವು | ಪೊಲೀಸರ ರಾ ಏಜೆಂಟ್ ಕೊಲೆಗೆ ಕಾರಣವೇನು..!!??

ಅಮ್ಜದ್ ಅಪರಾಧ ಲೋಕದ ನಡುವೆ ಬದುಕುತ್ತಿದ್ದ, ಆದರೆ ಕಾನೂನಿನ ಬದಿಯಲ್ಲಿದ್ದ. ಹೊರಗಿನ ಕಣ್ಣಿಗೆ ಇಸ್ಪೀಟು ದಂಧೆಗಾರ, ಪೊಲೀಸರ ದೃಷ್ಟಿಗೆ ರಾ ಏಜೆಂಟ್! ಇದೇ ಅಮ್ಜದ್‌ನ ನಿಜವಾದ ಚಿತ್ರ. ಶಿವಮೊಗ್ಗ ನಗರದ ಗಲಭೆ, ಕೊಲೆ, ಕ್ರೈಂ ಎಂಬ ಎಲ್ಲ ಕಥೆಗಳಲ್ಲಿ ಅಜ್ಞಾತವಾಗಿ ಭಾಗಿಯಾಗಿದ್ದ ಈ ವ್ಯಕ್ತಿ, ಇನ್ನು ಇಹಲೋಕದಲ್ಲಿಲ್ಲ. ಪೊಲೀಸರ ನಂಬಿಕೆಯ “ರಹಸ್ಯ ಹಸ್ತ” ಅಮ್ಜದ್ ಹೆಸರು ಕೇಳಿದರೆ ಕ್ರೈಂ ಲೋಕದವರು ನಡುಗುತ್ತಿದ್ದರು. ಆದರೆ ಪೊಲೀಸರ ಕಚೇರಿಯಲ್ಲಿ ಅವನು “ಅವಶ್ಯಕ ಮಾಹಿತಿ ಮೂಲ” ಆಗಿದ್ದ. ರಾಜ್ಯದ 500ಕ್ಕೂ ಹೆಚ್ಚು…

Read More

ಮದುವೆ ವಿವಾದ – ಇಬ್ಬರು ಯುವಕರಿಗೆ ಚೂರಿ ಇರಿತ

ಮದುವೆ ವಿವಾದ – ಇಬ್ಬರು ಯುವಕರಿಗೆ ಚೂರಿ ಇರಿತ ಶಿವಮೊಗ್ಗ ನಗರದಲ್ಲಿನ ಊರುಗಡೂರು ಬಡಾವಣೆಯಲ್ಲಿ ನಡೆದ ವೈಯಕ್ತಿಕ ಗಲಾಟೆ ಎರಡು ಕುಟುಂಬಗಳ ನಡುವೆ ಭೀಕರ ರೂಪ ಪಡೆದು, ಇಬ್ಬರು ಯುವಕರು ಮಾರಕಾಸ್ತ್ರದ ಇರಿತಕ್ಕೊಳಗಾಗಿರುವ ಘಟನೆ ನಡೆದಿದೆ. ಗಾಯಗೊಂಡ ಶಬ್ಬೀರ್ ಹಾಗೂ ಶಹಬಾಜ್ ಎಂಬವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿ, “ಇದು ಸಂಪೂರ್ಣವಾಗಿ…

Read More

ಫೇಸ್ಬುಕ್ ವೀಡಿಯೋ ವಿವಾದ – ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರತ್ಯೇಕ ಎರಡು ದರೋಡೆ ಪ್ರಕರಣ

ಫೇಸ್ಬುಕ್ ವೀಡಿಯೋ ವಿವಾದ -ರಿಪ್ಪನ್‌ಪೇಟೆ ಠಾಣೆಯಲ್ಲಿ ದಾಖಲಾಯ್ತು ಎರಡು ಪ್ರತ್ಯೇಕ ದರೋಡೆ ಪ್ರಕರಣ ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣವಾದ ಪೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ ಒಂದು ವೀಡಿಯೋಗೆ ಸಂಬಂಧಿಸಿದಂತೆ ಉಂಟಾದ ಗಲಾಟೆಯು ಎರಡು ಪ್ರತ್ಯೇಕ ದರೋಡೆ ಪ್ರಕರಣ ದಾಖಲಾಗುವ ಮೂಲಕ ಅಂತ್ಯಗೊಂಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ನಿವಾಸಿ ಶ್ವೇತಾ ಆಚಾರ್ಯ ಎಂಬುವವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ದ ಬಿಎನ್ ಎಸ್ 309(6) ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು , ಇನ್ನೊಂದು…

Read More

ಗೊಡೌನ್ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳ್ಳತನ

ಗೊಡೌನ್ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಅಡಿಕೆ ಕಳ್ಳತನ ಶಿವಮೊಗ್ಗ: ನಗರದ ಆರ್.ಎಂ.ಎಲ್. ನಗರ ಪ್ರದೇಶದಲ್ಲಿ ಕಳ್ಳರು ಬೀಗ ಒಡೆದು ಗೋದಾಮಿನಿಂದ ಅಡಿಕೆ ಕಳ್ಳತನ ಮಾಡಿದ ಘಟನೆ ನಡೆದಿದೆ. ಉದ್ಯಮಿಯೊಬ್ಬರಿಗೆ ಸೇರಿದ ಈ ಗೋದಾಮಿನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 20 ಚೀಲ ಅಡಿಕೆ ನಾಪತ್ತೆಯಾಗಿವೆ. ದೂರುದಾರರು ತಮ್ಮ ಮಳಿಗೆಯಲ್ಲಿ ಇರಿಸಲು ಸ್ಥಳಾವಕಾಶವಿಲ್ಲದೆ, ಕಳೆದ ಸೆಪ್ಟೆಂಬರ್ 21ರಂದು ಅನುಪಿನಕಟ್ಟೆ ಸಮೀಪದ ಶೀಟಿನ ಗೋದಾಮಿನಲ್ಲಿ ಅಡಿಕೆಯನ್ನು ಇಟ್ಟಿದ್ದರು. ಮಾರಾಟಕ್ಕೆ ಸಿದ್ಧಪಡಿಸಿದ್ದ ಈ ಅಡಿಕೆಯನ್ನು ನೋಡಿಕೊಳ್ಳಲು ಪರಿಚಯಸ್ಥರೊಬ್ಬರಿಗೆ…

Read More

ಬೈಕ್ ನಲ್ಲಿ ಹೋಗುತಿದ್ದವರ ಮೇಲೆ ಚೂರಿ ಇರಿತ – ಐವರ ಬಂಧನ

ಬೈಕ್ ನಲ್ಲಿ ಹೋಗುತಿದ್ದವರ ಮೇಲೆ ಚೂರಿ ಇರಿತ – ಐವರ ಬಂಧನ ಶಿವಮೊಗ್ಗ: ನಿನ್ನೆ ಸಂಜೆ ನಗರದಲ್ಲಿ ಸ್ಕ್ರ್ಯಾಪ್ ವ್ಯಾಪಾರಿ ಅಮ್ಜಾದ್ ಸೇರಿದಂತೆ ಇಬ್ಬರ ಮೇಲೆ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ದೊಡ್ಡಪೇಟೆ ಪೊಲೀಸರು ಇಂದು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಿಥುನ್ ಕುಮಾರ್ ಜಿ.ಕೆ. ಅವರು ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿನಿನ್ನೆ ಸಂಜೆ ಸುಮಾರು 7:30ರ ಸುಮಾರಿಗೆ ಅಮ್ಜದ್ ಎಂಬುವವರ ಮೇಲೆ ಬೈಕ್‌ನಲ್ಲಿ ಬಂದ…

Read More