ಜಿಲ್ಲಾ ಸುದ್ದಿ:
ವಿದ್ಯಾರ್ಥಿಗಳ ನೋವಿನ ಕೂಗಿಗೆ ಸ್ಪಂದಿಸದೇ ಮಾನವೀಯತೆ ಮರೆತ ಸಾರ್ವಜನಿಕರು – ಪೋಟೋ, ವೀಡಿಯೋ ಮಾಡುತ್ತಾ ನಿಂತ ಸತ್ಪ್ರಜೆಗಳು | ಸಕಾಲಕ್ಕೆ ಬಾರದ ಆಂಬುಲೆನ್ಸ್ – ಯುವಕನೊಬ್ಬನ ದಾರುಣ ಅಂತ್ಯ
ವಿದ್ಯಾರ್ಥಿಗಳ ನೋವಿನ ಕೂಗಿಗೆ ಸ್ಪಂದಿಸದೇ ಮಾನವೀಯತೆ ಮರೆತ ಸಾರ್ವಜನಿಕರು – ಪೋಟೋ, ವೀಡಿಯೋ ಮಾಡುತ್ತಾ ನಿಂತ ಸತ್ಪ್ರಜೆಗಳು | ಸಕಾಲಕ್ಕೆ ಬಾರದ ಆಂಬುಲೆನ್ಸ್ – ಯುವಕನೊಬ್ಬನ ದಾರುಣ ಅಂತ್ಯ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೂವರು ವಿದ್ಯಾರ್ಥಿಗಳು ಸುಮಾರು 50 ನಿಮಿಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಸಾರ್ವಜನಿಕರು ಹತ್ತಿರಕ್ಕೂ ಬಾರದೆ , ಆಂಬುಲೆನ್ಸ್ ಗೂ ಕರೆ ಮಾಡದೇ ಮಾನವೀಯತೆ ಮರೆತ ವಿಚ್ಚಿದ್ರಾವಕಾರಿ ಘಟನೆ ಮಲೆನಾಡ ಹೆಬ್ಬಾಗಿಲು ಹೊಸನಗರ ತಾಲೂಕಿನ ಸೂಡೂರು ರೈಲ್ವೆ ಗೇಟ್ ಬಳಿ ನಡೆದಿರುವು…
ರಿಪ್ಪನ್ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (12-12-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…
ರಿಪ್ಪನ್ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (12-12-2024) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ… ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 12/12/24 ರಂದು ಬೆಳಿಗ್ಗೆ 10-00 ರಿಂದ ಸಂಜೆ 06.00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಹೊಸನಗರ ಉಪವಿಭಾಗದ ರಿಪ್ಪನ್ಪೇಟೆ ಶಾಖೆಯಲ್ಲಿ ಡಿ. 12 ರಂದು ಬೆಳಗ್ಗೆ 10-00 ರಿಂದ ಸಂಜೆ 6-00 ಗಂಟೆವರೆಗೆ 110/11 ಕೆ.ವಿ. ಎಮ್.ಯು.ಎಸ್.ಎಸ್. ರಿಪ್ಪನ್ಪೇಟೆಯಲ್ಲಿ ತುರ್ತು ನಿರ್ವಹಣೆ ಮತ್ತು…
RIPPONPETE | ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಬಹುಮಾನ ವಿಜೇತಳಿಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು
RIPPONPETE | ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಬಹುಮಾನ ವಿಜೇತಳಿಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು ರಿಪ್ಪನ್ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಲಕ್ಕಿ ಡ್ರಾ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಬಡ ಮಹಿಳೆಗೆ ಕರ್ನಾಟಕ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಬಹುಮಾನ ಹಸ್ತಾಂತರಿಸಿದರು. ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ರಾಜ್ಯೋತ್ಸವ…
ರಿಪ್ಪನ್ಪೇಟೆ ಸಮುದಾಯ ಆಸ್ಪತ್ರೆಯ ಪೆನ್ಸಿಂಗ್ ಅಳವಡಿಕೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ
ರಿಪ್ಪನ್ಪೇಟೆ ಸಮುದಾಯ ಆಸ್ಪತ್ರೆಯ ಪೆನ್ಸಿಂಗ್ ಅಳವಡಿಕೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಚಾಲನೆ RIPPONPETE | ಖಾಸಗಿಯವರು ಒತ್ತುವರಿ ಮಾಡಬಾರದ ಉದ್ದೇಶದಿಂದಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಕಾಯ್ದಿರಿಸಲಾದ 5 ಎಕರೆ ಜಾಗವನ್ನು ಪೋಡಿ ಮಾಡುವ ಮೂಲಕ ಪೆನ್ನಿಂಗ್ (ಬೇಲಿ) ಅಳವಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಈ ಆಸ್ಪತ್ರೆಯನ್ನು ಸಮುದಾಯ ಅರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗುವುದೆಂದು ಶಾಸಕ , ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು. ರಿಪ್ಪನ್ಪೇಟೆಯ…
HOSANAGARA | ಕೊಡಚಾದ್ರಿ ಕಾಲೇಜಿನಲ್ಲಿ ಬಿ ಆರ್ ಅಂಬೇಡ್ಕರ್ ರವರ ಮಹಾ ಪರಿ ನಿರ್ವಾಣ ದಿನ ಹಾಗೂ ವಿದ್ಯಾರ್ಥಿ ವೇತನ ಅರಿವು ಕಾರ್ಯಗಾರ
HOSANAGARA | ಕೊಡಚಾದ್ರಿ ಕಾಲೇಜಿನಲ್ಲಿ ಬಿ ಆರ್ ಅಂಬೇಡ್ಕರ್ ರವರ ಮಹಾ ಪರಿ ನಿರ್ವಾಣ ದಿನ ಹಾಗೂ ವಿದ್ಯಾರ್ಥಿ ವೇತನ ಅರಿವು ಕಾರ್ಯಗಾರ HOSANAGARA | ಪಟ್ಟಣದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್ಸಿ ಎಸ್ಟಿ ಒಬಿಸಿ ಹಿಂದುಳಿದ ವರ್ಗಗಳ ಸಮಿತಿ ಎನ್ ಎಸ್ ಪಿ ಹಾಗೂ ಎಸ್ ಎಸ್ ಬಿ ವಿದ್ಯಾರ್ಥಿ ವೇತನ ಸಮಿತಿ ಮಹಿಳಾ ಸಬಲೀಕರಣ ಘಟಕ ಯೂತ್ ರೆಡ್ ಕ್ರಾಸ್ ಎನ್ಎಸ್ಎಸ್ ಮತ್ತು ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಪ್ರಥಮ ವರ್ಷದ…
ರಿಪ್ಪನ್ಪೇಟೆ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ
ರಿಪ್ಪನ್ಪೇಟೆ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಆಂಬುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿದ ಶಾಸಕ ಬೇಳೂರು ರಿಪ್ಪನ್ಪೇಟೆ : ದೇವರು ಮನುಷ್ಯನನ್ನು ಪರೀಕ್ಷಿಸಲೆಂದೇ ಜನನ-ಮರಣದ ನಡುವೆ ಜೀವನವೆಂಬ ಸಣ್ಣ ಅವಧಿಯನ್ನು ನೀಡಿದ್ಧಾನೆ. ಈ ಕಿರು ಅವಧಿಯಲ್ಲಿ ನಾವು ಮಾಡುವ ಸತ್ಕರ್ಮಗಳು ಮಾತ್ರ ನಮ್ಮನ್ನು ಕಾಪಾಡುತ್ತದೆ ಎಂದು ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಮುನೀರ್ ಸಖಾಫಿ ಹೇಳಿದರು. ಮೊಹಿಯಿದ್ದೀನ್ ಜುಮ್ಮಾ ಮಸೀದಿ ಹಾಗೂ GCC ಸ್ನೇಹ ಬಳಗದ ವತಿಯಿಂದ ನಡೆದ ಸಾರ್ವಜನಿಕ…
ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ
ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಅರಿವು ಅಗತ್ಯ – ಡಾ ಕೆ ವೈ ರಾಮಚಂದ್ರಪ್ಪ ದೇಶದ ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದ ಬಗ್ಗೆ ಅರಿವು ಹೊಂದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಹಿರಿಯ ನ್ಯಾಯವಾದಿ ಡಾ ಕೆ ವೈ ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಹೊಸನಗರ ತಾಲ್ಲೂಕಿನ ಅಮೃತ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನ ಅರಿವು ವಿಚಾರವಾಗಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಬರೆದ ಪುಸ್ತಕವನ್ನು ಶಿವಮೊಗ್ಗದ ಹಿರಿಯ ನ್ಯಾಯವಾದಿ ಡಾ. ಕೆ. ವೈ. ರಾಮಚಂದ್ರಪ್ಪ…
ಆನಂದಪುರದ ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ
ಆನಂದಪುರದ ಕವನಾ ಡಬ್ಲುಎಚ್ಓ ವಿಜ್ಞಾನಿಯಾಗಿ ಆಯ್ಕೆ ಸಾಗರ : ತಾಲೂಕಿನ ಆನಂದಪುರ ಸಮೀಪದ ಹೊಸೂರು ಗ್ರಾಪಂ ವ್ಯಾಪ್ತಿಯ ನೇದರವಳ್ಳಿ ಗ್ರಾಮದ ಯುವ ವಿಜ್ಞಾನಿ ಕವನಶ್ರೀ ವಿಶ್ವ ಆರೋಗ್ಯ ಸಂಸ್ಥೆಯ (WHO) ವಿಜ್ಞಾನಿಯಾಗಿ ಆಯ್ಕೆಗೊಂಡಿದ್ದಾರೆ. ಕಳೆದ ಸೋಮವಾರ ಸ್ವಿಡರ್ಲೆಂಡ್ನ ಕೇಂದ್ರ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾರತದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದ 8 ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕವನಶ್ರೀ, ನೇದರವಳ್ಳಿಯ ಪ್ರಗತಿಪರ ಕೃಷಿಕ ಶುಂಠಿ ಮಂಜಪ್ಪ ಮತ್ತು ಜಯಲಕ್ಷ್ಮೀ ದಂಪತಿಗಳ ಪುತ್ರಿ.
ರಿಪ್ಪನ್ಪೇಟೆ – ಮಂಗಳೂರು ಯೆನೆಪೊಯೋ ಆಸ್ಪತ್ರೆಗೆ KSRTC ಬಸ್ | ಬಹುದಿನಗಳ ಬೇಡಿಕೆ ಈಡೇರಿಸಿದ ಶಾಸಕ ಬೇಳೂರು
ರಿಪ್ಪನ್ಪೇಟೆ – ಮಂಗಳೂರು ಯೆನೆಪೊಯೋ ಆಸ್ಪತ್ರೆಗೆ KSRTC ಬಸ್ | ಬಹುದಿನಗಳ ಬೇಡಿಕೆ ಈಡೇರಿಸಿದ ಶಾಸಕ ಬೇಳೂರು ರಿಪ್ಪನ್ಪೇಟೆ : ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ಮಂಗಳೂರಿನ ಯೆನೆಪೊಯೋ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಸರ್ಕಾರಿ ಬಸ್ ಸೌಲಭ್ಯ ಕೊನೆಗೂ ಈಡೇರಿದೆ. ಸಾಗರದಿಂದ – ರಿಪ್ಪನ್ಪೇಟೆ – ಹೊಸನಗರ – ಮಾಸ್ತಿಕಟ್ಟೆ – ಮಂಗಳೂರಿಗೆ ನೂತನವಾಗಿ ಆರಂಭಗೊಂಡಿರುವ ಕೆಎಸ್ಆರ್ಟಿಸಿ ರಾಜಹಂಸ ಬಸ್ ಸಂಚಾರಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸುವ ಮೂಲಕ ಈ…
ಅಂಗನವಾಡಿಗೆ ಬೀಗ ಜಡಿದ ಪ್ರಕರಣ – ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯ
ಅಂಗನವಾಡಿಗೆ ಬೀಗ ಜಡಿದ ಪ್ರಕರಣ – ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯ ರಿಪ್ಪನ್ಪೇಟೆ – ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರಗೋಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಅಂಗನವಾಡಿಗೆ ಬೀಗ ಹಾಕಿದ್ದ ಪ್ರಕರಣ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಕಾರಗೋಡು ಗ್ರಾಮದಲ್ಲಿರುವ ಅಂಗನವಾಡಿಗೆ ಅದೇ ಗ್ರಾಮದ ನಿವಾಸಿ ನೇತ್ರಾವತಿ ಎಂಬುವವರು ಈ ಜಾಗ ನಮ್ಮ ಖಾತೆಯಲ್ಲಿ ಇದೆ ಎಂದು ಖ್ಯಾತೆ ತೆಗೆದು ಕಳೆದ ಮೂರು ದಿನಗಳಿಂದ ಬೀಗ ಜಡಿದಿದ್ದರು ಈ ಹಿನ್ನಲೆಯಲ್ಲಿ ಪೊಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು….