ರಿಪ್ಪನ್ ಪೇಟೆ : ಟ್ಯಾಂಕರ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವು..!!!
ರಿಪ್ಪನ್ ಪೇಟೆ : ಪಟ್ಟಣದ ವಿಶ್ವ ಮಾನವ ಸಭಾಭವನದ ಸಮೀಪ ಲಾರಿ ಚಾಲಕನೊಬ್ಬ ವಿಶ್ರಾಂತಿ ಪಡೆಯುವ ಸಂಧರ್ಭದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಯಲ್ಲಾಪುರ ನಿವಾಸಿ ಮಧು (36) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಯಲ್ಲಾಪುರದಿಂದ ತೀರ್ಥಹಳ್ಳಿಗೆ ಡಾಂಬರ್ ತುಂಬಿದ ಟ್ಯಾಂಕರ್ (KA-20-D-7055) ಚಲಾಯಿಸುತ್ತಿದ್ದ ಚಾಲಕನು ಮಾರ್ಗ ಮದ್ಯೆ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ವಿಶ್ರಾಂತಿ ಪಡೆಯಲು ರಿಪ್ಪನ್ ಪೇಟೆಯ ವಿಶ್ವ ಮಾನವ ಸಭಾ ಭವನದ ಬಳಿ ನಿಲ್ಲಿಸಿ ವಿಶ್ರಾಂತಿ ಪಡೆದಿದ್ದಾನೆ. ನೆನ್ನೆ ರಾತ್ರಿಯಿಂದ ಚಾಲಕನು ಪೋನ್ ಸಂಪರ್ಕಕ್ಕೆ ಸಿಗದಿದ್ದಕ್ಕೆ…