Headlines

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ

ಮಲೆನಾಡು ಕರಾವಳಿ ಸಂಪರ್ಕದ ​​ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಮುಖ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಸಾಲುಗಟ್ಟಿ ನಿಂತ ಘಟನೆ ನಡೆದಿದೆ.

ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳ ಅವಿರತ ಶ್ರಮದಿಂದ ಘಾಟಿ ಸಂಚಾರಕ್ಕೆ ಮುಕ್ತಗೊಂಡಿದೆ.

ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿರುವ ಹೇರ್‌ ಪಿನ್ ತಿರುವಿನಲ್ಲಿ ಭಾರೀ ಗಾತ್ರದ ಲಾರಿಯೊಂದು ಕೆಟ್ಟು ನಿಂತಿದ್ದು, ಇತರ ವಾಹನಗಳು ಸಂಚಾರಕ್ಕೆ ಅಡ್ಡಿಯಾಗಿದೆ. ಈ ಕಿರಿದಾದ ಮತ್ತು ತೀಕ್ಷ್ಣವಾದ ತಿರುವು ದೊಡ್ಡ ವಾಹನಗಳು ಸಾಗಲು ಸಾಧ್ಯವಾಗಲಿಲ್ಲ, ಘಾಟಿ ಹತ್ತುವ ಹಾಗೂ ಘಾಟಿಯಿಂದ ಇಳಿಯುವ ವಾಹನಗಳು ರಸ್ತೆ ಬದಿಯಲ್ಲಿ ಮಧ್ಯರಾತ್ರಿಯಿಂದಲೇ ನಿಂತಿತ್ತು

ಸರಕು ಸಾಗಿಸುತ್ತಿದ್ದ ಲಾರಿ ಸಿದ್ದಾಪುರಕ್ಕೆ ಹೊರಟಿತ್ತು, ಈ ಮಧ್ಯೆ ತಿರುವಿನಲ್ಲಿ ಆಕ್ಸಲ್ ಕಟ್ ಆಗಿ ನಿಂತಿದೆ. ಉಳಿದ ಉಳಿದ ವಾಹನಗಳು ಸಂಚರಿಸುತ್ತಿರಲಿಲ್ಲ, ಮಧ್ಯರಾತ್ರಿಯಿಂದಲೇ ಸಂಚಾರ ನಿಲುಗಡೆಯಾಗಿರುವುದು ಹಲವು ವಾಹನಗಳು, ವಿಶೇಷವಾಗಿ ಸರಕು ಸಾಗಣೆ ಲಾರಿಗಳು ಮಾರ್ಗ ಮಧ್ಯದಲ್ಲೇ ಸಿಲುಕಿತ್ತು.

Leave a Reply

Your email address will not be published. Required fields are marked *