ತಾಳಗುಪ್ಪ: ಅರಣ್ಯೀಕರಣ ಮಾಡಿದ ಪ್ರದೇಶದಲ್ಲಿ ಘನತ್ಯಾಜ್ಯವಿಲೇವಾರಿ ಘಟಕಕ್ಕೆ ಗ್ರಾಮಸ್ಥರಿಂದ ವಿರೋಧ
ಸಾಗರ: ಇಲ್ಲಿನ ತಾಳಗುಪ್ಪ ಹೋಬಳಿ ಕಾನಲೆ ಗ್ರಾಮದ ಸರ್ವೆ ನಂಬರ್ 412 ರಲ್ಲಿ ಗ್ರಾಮಾಡಳಿತ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತಯಾರಿ ನಡೆ ಸಿದ್ದು ಇದು ಅವೈಜ್ಞಾನಿಕವಾಗಿದೆ ಎಂದು ಹಿಂಡಲೆಕೊಪ್ಪ ಗ್ರಾಮಸ್ಥರು ಆರೋಪಿಸಿದ್ದಾರೆ. ಈಗಾಗಲೇ ಜಾಗವನ್ನು ಗುರುತುಪಡಿಸಿ ನೀಲ ನಕ್ಷೆ ತಯಾರಿಸಿದೆ. ಆದರೆ ಕಾನ್ಲೆ ಗ್ರಾಮ ಸರ್ವೆ ನಂಬರ್ 412ರಸರ್ಕಾರಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಗುರುತಿಸಿರುವ ಜಾಗ ಹಿಂಡಲೇ ಕೊಪ್ಪ ಗ್ರಾಮದ ಕೂಗಳತೆಯ ದೂರದಲ್ಲಿ ಇದ್ದು ಗ್ರಾಮಕ್ಕೆ ಅತ್ಯಂತ ಸಮೀಪವಿರುತ್ತದೆ. ಮತ್ತು ಈಗಾಗಲೇ ಅರಣ್ಯ ಇಲಾಖೆಯಿಂದ…