Crime News | ಕೆಲಸದಿಂದ ಹಿಂದಿರುಗುತಿದ್ದ ಯುವತಿಯ ಬಲತ್ಕಾರಕ್ಕೆ ಯತ್ನ – ಪ್ರಕರಣ ದಾಖಲು
ಶಿವಮೊಗ್ಗ : ಯುವತಿಯನ್ನ ಅಡ್ಡ ಹಾಕಿ ಹಣಕೊಡ್ತೀನಿ ಆಸೆ ಪೂರೈಸುವಂತೆ ಕರೆದು ಅಸಭ್ಯವಾಗಿ ನಡೆದುಕೊಂಡ ಯುವಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹೋದರನಿಗೆ ಬುದ್ದಿ ಹೇಳು ಎಂದು ಹೇಳಿದ ಗ್ರಾಮಸ್ಥರಿಗೆ ಬೈದು ಅನುಚಿತವಾಗಿ ನಡೆದುಕೊಂಡ ಅಣ್ಣನ ವಿರುದ್ಧವೂ ದೂರು ದಾಖಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿರುವ 19 ವರ್ಷದ ಯುವತಿಗೆ ಭದ್ರಾವತಿಯ ಚಂದನಕೆರೆಯ ಯುವಕನೊಬ್ಬ ಹೋದ ಕಡೆಯಲ್ಲೆಲ್ಲ ಬೆನ್ನುಹತ್ತಿ ಹಣ ಕೊಡುತ್ತೇನೆ ಆಸೆ ಪೂರೈಸು ಎಂದು ದುಂಬಾಲು ಬಿದ್ದಿದ್ದನು. ಈತನನ್ನ ಗಮನಿಸಿದೆ ಯುವತಿ ಕೆಲಸಕ್ಕೆ ಹೋಗುತ್ತಿದ್ದಳು….