Headlines

Ripponpete | ಪಾದಚಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ – ವ್ಯಕ್ತಿ ಸಾವು

Ripponpete | ಪಾದಚಾರಿಗೆ ಲಾರಿ ಡಿಕ್ಕಿ – ಗವಟೂರಿನ ಸುರೇಶ್ ಚಿಕಿತ್ಸೆ ಫಲಿಸದೇ ಸಾವು ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಗ್ರಾಮದಲ್ಲಿ ಪಾದಚಾರಿಗೆ ಲಾರಿ ಡಿಕ್ಕಿಯಾಗಿ ಚಿಕಿತ್ಸೆ ಫಲಿಸದೇ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ಗವಟೂರು ಬಳಿಯ ಹಳೂರು ನಿವಾಸಿ ಸುರೇಶ್ ಮೃತ ದುರ್ಧೈವಿಯಾಗಿದ್ದಾರೆ. 23/02/2024 ರಂದು ಸಂಜೆ ಗವಟೂರು ಗ್ರಾಮದ ಸುರೇಶ ಬಿನ್ ಹಾಲಪ್ಪ, 60 ವರ್ಷ ಮನೆ ಬಳಿಯ ದಿನಸಿ ಅಂಗಡಿಗೆ ಹೋಗಿ ವಾಪಾಸ್‌ ಮನೆ ಕಡೆ ಮುಖ್ಯ ಟಾರ್ ರಸ್ತೆಯ ಬದಿಯಲ್ಲಿ…

Read More

Hosanagara | ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ

Hosanagara | ವಿವಾಹಿತ ಮಹಿಳೆಗೆ ಬೈಕ್ ನಲ್ಲಿ ಬಂದ ಅಪರಿಚಿತ ಯುವಕರಿಂದ ಚೂರಿ ಇರಿತ ಹೊಸನಗರ : ಮಹಿಳೆಯೊಬ್ಬರಿಗೆ ಅಪರಿಚಿತ ಯುವಕರು ಚಾಕು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಮಹಿಳೆ ಗಣಪತಿ ದೇವಸ್ಥಾನ ರಸ್ತೆಯ ದೇವಸ್ಥಾನದ ಎದುರು ಮನೆಯಲ್ಲಿ ಊಟ ಮುಗಿಸಿ ಪಾರ್ಲರ್ಗೆ ಮರಳುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಚಾಕುವಿನಿಂದ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ….

Read More

ಗೃಹಿಣಿಗೆ 16.42 ಲಕ್ಷ ವಂಚನೆ – ದೂರು ದಾಖಲು

ಗೃಹಿಣಿಗೆ 16.42 ಲಕ್ಷ ವಂಚನೆ – ದೂರು ದಾಖಲು  ಷೇರು ವ್ಯವಹಾರದಲ್ಲಿ ಅತ್ಯಧಿಕ ಲಾಭವಿದೆ ಎಂದು ನಂಬಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 16.42 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ. ಟ್ರೇಡಿಂಗ್ ಕುರಿತು ಕೋಚಿಂಗ್ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಒಂದರಲ್ಲಿ ಪ್ರಕಟಿಸಲಾಗಿತ್ತು. ಅಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಶಿವಮೊಗ್ಗದ ಗೃಹಿಣಿ (ಹೆಸರು ಗೌಪ್ಯ) ಒಂದು ವಾಟ್ಸಾಪ್ ಗ್ರೂಪ್ ಸೇರಿದ್ದರು ಎನ್ನಲಾಗಿದೆ. ಅಲ್ಲಿ ಟ್ರೇಡಿಂಗ್ ಎಂದರೇನು, ಲಾಭ ಪಡೆಯುವುದು ಹೇಗೆ ಎಂಬ ಮಾಹಿತಿ ತಿಳಿಸಲಾಯಿತು. ನಿತ್ಯ ಒಂದೊಂದು ವಿಷಯ…

Read More

ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ | Crime News

ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಆರೋಪಿಗಳ ಬಂಧನ  ರಾತ್ರಿ ವೇಳೆ ಮಚ್ಚು, ಚಾಕು, ಖಾರದ ಪುಡಿ ಹಿಡಿದುಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು ಮೂವರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪುರದಾಳು ರಸ್ತೆಯಲ್ಲಿ ಐವರು ಯುವಕರು ದಾರಿಯಲ್ಲಿ ಹೋಗುವವರನ್ನು ತಡೆದು, ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ರಾತ್ರಿ 11.30ರ ಹೊತ್ತಿಗೆ ಪುರದಾಳು ರಸ್ತೆಯಲ್ಲಿ ಗ್ಯಾಂಗ್ ಇದ್ದ…

Read More

Anandapura | ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು,ಇನ್ನೋರ್ವನ ಕಾಲು ಜಖಂ

Anandapura | ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು,ಇನ್ನೋರ್ವನ ಕಾಲು ಜಖಂ ಬೈಕ್ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ ಮತ್ತೋರ್ವನ ಕಾಲು ಮುರಿತವಾಗಿರುವ ಘಟನೆ ಆನಂದಪುರ ಸಮೀಪದ ಗೌತಮಪುರ ಸಮೀಪದಲ್ಲಿ ನಡೆದಿದೆ. ಬೈಕ್ ಸವಾರ ಭೀಮೇಶ್ (42) ಸಾವನ್ನಪ್ಪಿದ್ದಾರೆ ,ಸಹ ಸವಾರ ಪ್ರತಾಪ್ ಕಾಲು ಮುರಿತವಾಗಿದೆ. ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಹಬ್ಬವನ್ನು ನೋಡಿಕೊಂಡು  ಬರುವ ಸಂದರ್ಭದಲ್ಲಿ…

Read More

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು!| Crime News

ಪ್ರೀತ್ಸೆ ಪ್ರೀತ್ಸೆ ಅಂತ ಕಾಟ ಕೊಟ್ಟ ಯುವಕ; ಅಪ್ರಾಪ್ತೆ ನೇಣಿಗೆ ಶರಣು! ತನ್ನನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಗೊಂದಿಚಟ್ನಿ ಹಳ್ಳಿಯಲ್ಲಿ ನಡೆದಿದೆ. ವರ್ಷಿಣಿ (14) ಆತ್ಮಹತ್ಯೆಗೆ ಶರಣಾದ ಬಾಲಕಿ. ತ್ಯಾಗರಾಜ್ ಎಂಬ ಯುವಕ ಬಾಲಕಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಆದರೆ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಸುಮಾರು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ತ್ಯಾಗರಾಜ್ ಬಾಲಕಿಗೆ ಟಾರ್ಚರ್ ನೀಡಿದ್ದು,…

Read More

Ripponpete | ಬೈಕ್ ಕಳ್ಳತನ : ಎರಡು ಗಂಟೆಯೊಳಗೆ ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ

Ripponpete | ಬೈಕ್ ಕಳ್ಳತನ : ಎರಡು ಗಂಟೆಯೊಳಗೆ ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ ಕಳ್ಳತನವಾದ ಬೈಕ್‌ನ್ನು ಕೇವಲ 2 ಗಂಟೆಯೊಳಗೆ ಪತ್ತೆ ಮಾಡಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ರಿಪ್ಪನ್‌ಪೇಟೆ ಠಾಣೆ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ತೊಪ್ಪಿನಘಟ್ಟದ ಡ್ರೈವರ್ ಕೆಲಸ ಮಾಡುವ 23 ವರ್ಷದ ಸತೀಶ್ ಎಲ್ ಎಸ್ ಹಾಗೂ ಅಪ್ರಾಪ್ತ (ಕಾನೂನು ಸಂಘರ್ಷಕ್ಕೊಳಗಾದ ಬಾಲಕ) ಸೇರಿದಂತೆ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಶನಿವಾರ ರಾತ್ರಿ ದೂನ…

Read More

ಜೋಕಾಲಿ ಆಡುವಾಗ ಕೊರಳಿಗೆ ಹಗ್ಗ ಸಿಲುಕಿ ಬಾಲಕ ಮೃತ್ಯು | Crime News

ಜೋಕಾಲಿ ಆಡುವಾಗ ಕೊರಳಿಗೆ ಹಗ್ಗ ಸಿಲುಕಿ ಬಾಲಕ ಮೃತ್ಯು 13 ವರ್ಷದ ಬಾಲಕನೊಬ್ಬ ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಿಗಿಯಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೊಟ್ರೇಶ್ ಮೃತ ಬಾಲಕನಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ. ಬಾಲಕ ಶಾಲೆ ಮುಗಿಸಿ ಮನೆಗೆ ಬಂದು ಜೋಕಾಲಿ ಆಡುತ್ತಿದ್ದ ವೇಳೆ ಕೊರಳಿಗೆ ಹಗ್ಗ ಸಿಲುಕಿ ಈ ಸಂಭವಿಸಿದೆ. ಶನಿವಾರ ಮುಂಜಾನೆಯ ಶಾಲೆ ಮುಗಿಸಿ ಮನೆಗೆ ಬಂದ…

Read More

ವಿಷ ಸೇವಿಸಿ ಮಹಿಳೆ ಸಾವು , ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕ – ವರದಕ್ಷಿಣೆ ಕಿರುಕುಳ ಆರೋಪ | Crime News

ವಿಷ ಸೇವಿಸಿ ಮಹಿಳೆ ಸಾವು , ಐದು ತಿಂಗಳ ಮಗುವಿನ ಸ್ಥಿತಿ ಚಿಂತಾಜನಕ – ವರದಕ್ಷಿಣೆ ಕಿರುಕುಳ ಆರೋಪ  ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಸಿದ್ಲಿಪುರ ಎಂಬ ಗ್ರಾಮದಲ್ಲಿ ನಡೆದಿದೆ.  ಘಟನೆಯಲ್ಲಿ ಮಗುವಿಗೂ ಕೂಡ ವಿಷ ನೀಡಿಲಾಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ಆರೋಪಿಸುತ್ತಿದ್ದಾರೆ. ಗಂಡನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತ್ನಿ ಕಸ್ತೂರಿ ಗಂಡ…

Read More

Hosanagara | ಟಿಪ್ಪರ್ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಭೀಕರ ಅಪಘಾತ – ಹಲವರು ಗಂಭೀರ

Hosanagara | ಟಿಪ್ಪರ್ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಭೀಕರ ಅಪಘಾತ – ಹಲವರು ಗಂಭೀರ ಹೊಸನಗರ : ಮಾರುತಿ ಓಮಿನಿ‌ ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತವಾದ ಘಟನೆ ಕರಿನಗೊಳ್ಳಿ ಸಮೀಪದಲ್ಲಿ ನಡೆದಿದೆ. ಕಾರಿನಲ್ಲಿದ್ದ 4 ಮಕ್ಕಳು ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದೆ ಎನ್ನಲಾಗುತ್ತಿದೆ. ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ನ ಮುಂಭಾಗದಲ್ಲಿ ಹೊಸನಗರದಿಂದ ಶಿವಮೊಗ್ಗ ಕಡೆಗೆ ಹೋಗುತಿದ್ದ ಮಾರುತಿ ಓಮ್ನಿ ಕಾರು ಹಾಗೂ ಶಿವಮೊಗ್ಗ ಕಡೆಯಿಂದ ಹೊಸನಗರ ಕಡೆಗೆ…

Read More